• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • News
  • Photos
  • Videos
  • E BOOKS
  • Disclaimer
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • A SHUBHASHITA A DAY (1-300)
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • ಶ್ರೀ ವಿಷ್ಣುಸಹಸ್ರನಾಮ
  • SRI VISHNUSAHASRANAMAM(Sanskrit, English and Kannada)

ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ

                               ಎಲ್ಲಾ ಜಲಮಯ 

                                                        ಲಂಕಾ ಕೃಷ್ಣಮೂರ್ತಿ

          “ಅಪೋವಾ ಇದಗ್‍ಂ ಸರ್ವಂ ವಿಶ್ವಾಭೂತಾನ್ಯಾಪಃ ಪ್ರಾಣಾವಾ ಆಪಃ ಪಶವ ಆಪೋನ್ನಮಾಪೋsಮೃತಮಾಪ ಸ್ಸಂರಾಡಾಪೋ ವಿರಾಡಾಪಸ್ವರಾಡಾಪಶ್ಛಂದಾಗ್‍ಂ ಷ್ಯಾಪೋ ಜ್ಯೋತೀಗ್‍ಂ ಷ್ಯಾಪೋ ಯಜಾಗ್‍ಂ ಷ್ಯಾಪಸ್ಸತ್ಯಮಾಪಸ್ಸರ್ವಾದೇವತಾ ಆಪೋ ಭೂರ್ಭುವ ಸ್ಸುವರಾಪ ಓಂ”. 

       ಈ ಪ್ರಸಿದ್ಧವಾದ ಮಂತ್ರವು ವಿಶ್ವವೆಲ್ಲಾ ನೀರು ಎಂಬ ಒಂದು ಸಿದ್ಧಾಂತವನ್ನು ಪ್ರತಿಪಾದಿಸುತ್ತಿದೆ. “ನಾರಾಯಣ” ಎಂಬ ದೇವರ ಹೆಸರಿಗೆ ಅರ್ಥ ಹೇಳುವಾಗ ಸಹ ಈ ವಿಶ್ವವೆಲ್ಲಾ ನೀರು. ಈ ನೀರು ಒಂದು ದೊಡ್ಡ ಸಮುದ್ರದ ರೂಪದಲ್ಲಿದೆ. ಒಳಗಡೆ ಇದು ಚಲನೆಯಿಲ್ಲದೆ ಒಂದೇ ಬೃಹದಾಕಾರವನ್ನು ತಾಳಿದೆ. ಆದರೆ ಹೊರಗಡೆ ಅಲೆಗಳ ರೂಪದಲ್ಲಿ ಹನಿಗಳ ರೂಪದಲ್ಲಿ ವೈವಿಧ್ಯವನ್ನು ತೋರಿಸುತ್ತಿದೆ. ಇಂತಹ ನೀರನ್ನು ಆಶ್ರಯಿಸಿಕೊಂಡು ಅದರಲ್ಲಿ ಯಾವ ಯೋಚನೆಯು ಇಲ್ಲದೆ ಆನಂದದಿಂದ ಮಲಗಿರುವವನೇ ನಾರಾಯಣ. ಎಂಬ ಭಾವನೆಯನ್ನು ವೇದಾಂತ ಗ್ರಂಥಗಳು ಕೊಡುತ್ತಿವೆ. 

       ಸಮಸ್ತವೂ ನೀರಿನ ಸ್ವರೂಪವೇ ಎಂದು ಹೇಳಿದರೆ ಯಾರೂ ನಂಬಲಾರರು. ಈ ಮಾತಿಗೆ ವಾಚ್ಯಾರ್ಥವನ್ನು ಗ್ರಹಿಸುವುದು ಸರಿಯಲ್ಲ. ಆದರೆ ಸಾಂಕೇತಿಕವಾದ ಅರ್ಥವನ್ನು ಗ್ರಹಿಸಲು ಯಾವ ಅಡ್ಡಿಯು ಇಲ್ಲ. ಈ ವಿಶ್ವದ ಸ್ವರೂಪವನ್ನು ವರ್ಣಿಸಲು ಸಂಕೇತವಾಗಿ ಬಳಸಲು ಎಲ್ಲ ವಸ್ತುಗಳಿಗಿಂತಲೂ ನೀರೇ ಹೆಚ್ಚು ಅರ್ಹವಾದುದು ಎಂಬ ಸತ್ಯವನ್ನು ನಾವು ಅರಿತರೆ ಮೇಲಿನ ಮಂತ್ರದಲ್ಲಿನ ಅದ್ಭುತವಾದ ಪರಮಸತ್ಯವನ್ನು ನಾವು ಅರಿಯಬಹುದು. 

       ಪಂಚಭೂತಗಳಲ್ಲಿ ಆಕಾಶಕ್ಕೆ ಯಾವ ಸ್ವರೂಪವೂ ಇಲ್ಲ. ವಾಯುವು ಕಣ್ಣಿಗೆ ಕಾಣಿಸುವುದಿಲ್ಲ. ತೇಜಸ್ಸು ಕಣ್ಣಿಗೆ ಕಾಣಿಸಿದರೂ ನಾನಾರೂಪಗಳನ್ನು ಪಡೆಯುವುದರಲ್ಲೂ ಪುನಃ ಪ್ರಶಾಂತವಾದ ಒಂದೇ ರೂಪವನ್ನು ಹೊಂದುವುದರಲ್ಲಿಯೂ ನೀರಿನಷ್ಟು ವಿವಿಧತೆಯನ್ನು ಪ್ರಕೃತಿಯಲ್ಲಿ ತೋರಿಸುತ್ತಿಲ್ಲ. ಭೂಮಿಯನ್ನು ಸಂಕೇತವನ್ನಾಗಿ ಗ್ರಹಿಸಲು ಅದರಲ್ಲಿನ ಪದಾರ್ಥಗಳು ಗಟ್ಟಿಯಾದ ಒಂದೊಂದು ರೂಪವನ್ನೂ ಪಡೆದಿದ್ದು ಕ್ಷಣಕ್ಷಣಕ್ಕೂ ಹೊಸ ಹೊಸ ರೂಪಗಳನ್ನು ಪಡೆಯುತ್ತಿರುವುದಿಲ್ಲ. ಆದುದರಿಂದ ಕ್ಷಣಕ್ಷಣದಲ್ಲೂ ಹೊಸ ರೂಪವನ್ನು ಪಡೆಯುತ್ತ ಅನೇಕ ರೂಪಗಳಲ್ಲಿ ಕಾಣಿಸಿಕೊಳ್ಳುತ್ತ ಕೊನೆಗೆ ಒಂದೇ ರೂಪಕ್ಕೆ ಹಿಂತಿರುಗುತ್ತಿರುವ ಈ ವಿಶ್ವ ವ್ಯಾಪಾರವನ್ನು ಸಾಂಕೇತಿಕವಾಗಿ ತೋರಿಸಿಕೊಡಲು ನೀರೇ ಎಲ್ಲ ವಸ್ತುಗಳಿಗಿಂತಲೂ ಅತ್ಯಂತ ಅರ್ಹವಾಗಿರುವ ವಸ್ತು. 

       ಭವಭೂತಿ ಮಹಾಕವಿಯು ಶೃಂಗಾರ, ವೀರ, ಕರುಣ, ಅಧ್ಭುತ, ಹಾಸ್ಯ, ಭಯಾನಕ ಮುಂತಾದ ಭಿನ್ನಭಿನ್ನ ಮತ್ತು ಪರಸ್ಪರ ವಿರುದ್ಧವಾದ ರಸಗಳಲ್ಲಿಯು ಒಂದೇ ಮೂಲ ಭೂತವಾದ ರಸಾನುಭವವನ್ನು ನಾವು ಪಡೆಯುತ್ತಿರುವುದನ್ನು ವರ್ಣಿಸುತ್ತ “ಆವರ್ತ, ಬುದ್ಬುದ ತರಂಗ ಮಯೈರ್ವಿಕಾರೈರಂಭೋಯಥಾ ಸಲಿಲಮೇವಹಿ ತತ್ಸಮಸ್ತಂ” ಎಂಬ ಒಂದು ಮಾತಿನಲ್ಲಿ ನೀರಿನ ಸಂಕೇತವನ್ನು ಬಳಸಿರುತ್ತಾನೆ. ಸುಳಿ, ಗುಳ್ಳೆಗಳು, ಅಲೆಗಳು ಮುಂತಾದ ಅನೇಕರೂಪಗಳು ಬೇರೆಬೇರೆಯಾಗಿ ಕಂಡು ಬಂದರೂ ಇವೆಲ್ಲವೂ ಒಂದೇ ನೀರಿನ ವಿವಿಧ ರೂಪಗಳು ಮಾತ್ರವಲ್ಲವೇ ಎಂದು ಹೇಳಿರುತ್ತಾನೆ. 

       ವಸ್ತು ಹೊಸದಾಗಿ ಹುಟ್ಟುವುದಿಲ್ಲ. ಇದ್ದದ್ದು ನಾಶವಾಗುವುದಿಲ್ಲ. ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಬದಲಾವಣೆಯನ್ನು ಹೊಂದುತ್ತಿರುತ್ತದೆ ಎಂಬ ವೈಜ್ಞಾನಿಕ ಸತ್ಯವನ್ನು ಚೆನ್ನಾಗಿ ಗಮನದಲ್ಲಿಟ್ಟುಕೊಂಡು ನೀರಿನ ಸಾಂಕೇತಿಕ ಅರ್ಥವನ್ನು ತಿಳಿಯಲು ಪ್ರಯತ್ನಿಸಬೇಕು. ಆಗ ಜನನ, ಮರಣಗಳು ಕೇವಲ ಬಾಹ್ಯವಿಕಾರಗಳೇ ಹೊರತು ಆತ್ಮವು ಅವಿನಾಶಿ ಎಂಬ ಪರಮಸತ್ಯವು ಗೋಚರಿಸುತ್ತದೆ. ನಮ್ಮ ಜೀವನವನ್ನು ಕಾಲರೂಪದ ಒಂದು ನದಿಯ ಪ್ರವಾಹದಲ್ಲಿನ ಸಂಚಾರದಂತೆ ಭಾವಿಸಬಹುದಲ್ಲವೇ? ಆಗ ಆ ಪ್ರವಾಹದ ನೀರು ಯಾವುದು? ಅದು ಎಷ್ಟು ಶೀತಲವಾದುದು? ಎಷ್ಟು ತೃಪ್ತಿಯನ್ನು ಕೊಡುವುದು? ಎಷ್ಟು ರಮ್ಯವಾದುದು? ಇತ್ಯಾದಿ ವಿಷಯಗಳನ್ನು  ಕುರಿತ ಗಮ್ಯವಾದ ಚಿಂತನೆಗೆ ಸಹ “ನೀರು”ಅವಕಾಶ ಕೊಡುತ್ತದೆ ಅಲ್ಲವೇ? 

Primary Sidebar

A SLOKA A DAY VISHNUSAHASRANAMA VIDEOS

Please click (>) to watch next video.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1

Recent Articles

  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day

Copyright © 2022 · Lanka Krishna Murti Foundation