• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • News
  • Photos
  • Videos
  • E BOOKS
  • Disclaimer
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • A SHUBHASHITA A DAY (1-300)
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • ಶ್ರೀ ವಿಷ್ಣುಸಹಸ್ರನಾಮ
  • SRI VISHNUSAHASRANAMAM(Sanskrit, English and Kannada)

ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ

 ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ

ಮಾನವನು ಸಮಾಜಜೀವಿ. ಈ ಸಮಾಜವೆಂಬುದು ಕುಟುಂಬದಿಂದ ಪ್ರಾರಂಭವಾಗಿ ಅನೇಕ ವಿಧವಾದ ಗುಂಪುಗಳ ರೂಪದಲ್ಲಿರುತ್ತದೆ. ಒಂದೊಂದು ಸಮಾಜದ ಗುಂಪಿಗೂ ಮಾನವ ಜೀವನದಲ್ಲಿ ಒಂದೊಂದು ವಿಶಿಷ್ಟ ಸ್ಥಾನವಿದೆ. ಈ ಸಮಾಜದ ಗುಂಪುಗಳು ಆಯಾ ದೇಶ, ಕಾಲ, ಪರಿಸ್ಥಿತಿಗಳನ್ನು ಸರಿಸಿಕೊಂಡು ಬೇರೆ ಬೇರೆ ರೂಪಗಳಲ್ಲಿ ಹುಟ್ಟುತ್ತಿರುತ್ತವೆ. ಬದಲಾಯಿಸುತ್ತಿರುತ್ತವೆ. ಬ್ರಾಹ್ಮಣ ವರ್ಣದಲ್ಲಿ ಗೋತ್ರ ಭೇದವನ್ನು ಬಿಟ್ಟರೆ ಧರ್ಮಶಾಸ್ತ್ರಗಳು ಬೇರೆ ಭೇದಗಳನ್ನು ಹೇಳಿಲ್ಲ. ಆದರೆ ವೈದಿಕ ಮತವು ಸಂಸ್ಕೃತ ಭಾಷೆಯನ್ನಾಡುವವರಿಗೆ ಸೀಮಿತವಾಗದೆ ಭಾರತ ದೇಶದಲ್ಲೆಲ್ಲಾ ವ್ಯಾಪಿಸಿದಾಗ ಬ್ರಾಹ್ಮಣವರ್ಗದಲ್ಲೇ ಆಯಾ ದೇಶಗಳ ಆಚಾರಗಳಲ್ಲಿನ ಭೇದದಿಂದ ಅನೇಕ ಪಂಗಡಗಳು ಹುಟ್ಟಿಕೊಂಡವು. ಆಂಧ್ರ ಮತ್ತು ಕರ್ನಾಟಕ ರಾಜ್ಯಗಳ ಬ್ರಾಹ್ಮಣರಲ್ಲಿ ನಾಡುಬೇಧವು ಹೀಗೆ ಜಾರಿಗೆ ಬಂತು.

         ವೆಲನಾಡು ಎಂಬುದು ಆಂಧ್ರಪ್ರದೇಶದಲ್ಲಿ ಕೃಷ್ಣಾ, ಗೋದಾವರಿ ನದಿಗಳ ನಡುವೆ ಇರುವ ಓಂದು ಭೂಭಾಗ. ಇಲ್ಲಿದ್ದ ವೈದಿಕ ಬ್ರಾಹ್ಮಣರೇ ವೆಲನಾಡು ಬ್ರಾಹ್ಮಣರು. ಇಂದಿಗೂ ವೆಲನಾಡು ಬ್ರಾಹ್ಮಣರ ಸಂಖ್ಯೆ ಆ ಭೂಭಾಗದಲ್ಲಿಯೇ ಹೆಚ್ಚಾಗಿರುವುದು. ಕೃಷ್ಣಾ ಗೋದಾವರೀ ನದಿಗಳಿಗೆ ಅಡ್ಡಕಟ್ಟುಗಳನ್ನು ನಿರ್ಮಿಸುವುದಕ್ಕೆ ಮೊದಲು ಆ ಪ್ರಾಂತವು ಇಂದಿನಷ್ಟು ಸುಭಿಕ್ಷವಾಗಿರಲಿಲ್ಲ. ಆದುದರಿಂದ ಅಲ್ಲಿನ ಬ್ರಾಹ್ಮಣರನೇಕರು ಕರ್ನಾಟಕಕ್ಕೆ ವಲಸೆ ಬಂದರು. ಈಗ ಕರ್ನಾಟಕದಲ್ಲಿರುವ ವೆಲನಾಡು ಬ್ರಾಹ್ಮಣರ ಪೂರ್ವಿಕರೆಲ್ಲರೂ ಹೀಗೆ ಬಂದವರೇ. ಇವರು ಕೇವಲ ಯಾಚಕರಾಗಿ ಬಂದವರಲ್ಲ. ಇಲ್ಲಿನ ರಾಜರು ವಿದ್ಯಾಭಿಮಾನಿಗಳಾಗಿದ್ದರೆಂಬ ವಿಷಯ ತಿಳಿದು ಆ ರಾಜರನ್ನು ತಮ್ಮ ವಿದ್ಯೆಯಿಂದ ಮೆಚ್ಚಿಸಲು ಬಂದವರು.

ಆದುದರಿಂದ ವೆಲನಾಡು ಬ್ರಾಹ್ಮಣರಲ್ಲಿ ವೈದಿಕ ವಿದ್ಯೆ ರಕ್ತಗತವಾಗಿ ಬಂದಿದೆ. ಇವರು ನಿಯೋಗಿ ಬ್ರಾಹ್ಮಣರಲ್ಲದಿರುವುದರಿಂದ ಸೇವಾವೃತ್ತಿಯನ್ನರಿಯದವರು. ಇತರರು ಗೌರವಿಸಿ ಕೊಟ್ಟಿದ್ದರಿಂದ ತೃಪ್ತಿಪಟ್ಟು ಸ್ವತಂತ್ರವಾಗಿ ಬಾಳಿದವರು. ಆದುದರಿಂದಲೇ “ವೆಲನಾಟಿ ಏಕಾಂತಮು” ಎಂಬ ಗಾದೆ ಮಾತು ಹುಟ್ಟಿರುವುದು. ಇವರು ತಮಗೆ ಸರಿಯೆಂದು ಕಂಡು ಬಂದುದನ್ನು ಖಂಡಿತವಾಗಿ ಹೇಳುವ ಸ್ವಭಾವವುಳ್ಳವರಾಗಿದ್ದರು. ಅಧಿಕಾರಲಾಲಸೆ, ಐಶ್ವರ್ಯಲಾಲಸೆ ಇವರನ್ನು ಪೀಡಿಸುತ್ತಿರಲಿಲ್ಲ. ಆದುದರಿಂದ ಇವರು ಇಂದಿಗೂ ಸ್ವಲ್ಪ ಹಿಂದುಳಿದವರೇ ಆಗಿರುತ್ತಾರೆ.

        ಕಾಲ ಬದಲಾಯಿಸಿ, ಬ್ರಾಹ್ಮಣರು ತಮ್ಮ ವರ್ಣಧರ್ಮವನ್ನು ಬಿಟ್ಟು ನೌಕರಿಗಳಿಗೆ ಸೇರಿದಮೇಲೆ ಇವರಲ್ಲಿನ ವರ್ಚಸ್ಸು ಕ್ಷೀಣವಾಯಿತು. ಇಂದಿನ ಪೀಳಿಗೆಯವರಿಗೆ ಬ್ರಹ್ಮಣ ವರ್ಣದ ಒಂದು ಬುದ್ಧಿಶಕ್ತಿ ಸಂಕ್ರಮಿಸಿ ಬಂದಿದೆಯೇ ಹೊರತು ಬ್ರಾಹ್ಮಣರಿಗಿರಬೇಕಾದ ಸತ್ವಗುಣ, ತ್ಯಾಗ ಮತ್ತು ವೈರಾಗ್ಯಗಳು ಬಹುಪಾಲು ಮಾಯವಾಗಿಬಿಟ್ಟಿವೆ. ತಮ್ಮ ಮನೆ ಹೆಸರುಗಳನ್ನೇ ಮರೆತಿರುವ ಇಂದಿನ ವೆಲನಾಟಿ ಬ್ರಾಹ್ಮಣರಿಗೆ ತಮ್ಮ ಪೂರ್ವಿಕರು ಸಮಾಜದಲ್ಲಿ ಇತರರ ಗೌರವಕ್ಕೆ ಎಷ್ಟು ಅರ್ಹರಾಗಿದ್ದರು? ಏಕೆ ಅರ್ಹರಾಗಿದ್ದರು? ಎಂಬ ವಿಷಯವು ಹೇಗೆ ತಿಳಿದೀತು? ವೆಲನಾಡು ಜನಾಂಗದ ವಿಶಿಷ್ಟತೆ ತೆಲುಗು ಭಾಷೆಯನ್ನು ಮಾತಾಡುವುದರಲ್ಲಿದೆ. ಒಬ್ಬಟ್ಟುಗಳನ್ನು ತಿನ್ನುವುದರಲ್ಲಿಲ್ಲ. ಇವರು ವೈದಿಕ ಬ್ರಾಹ್ಮಣರಾಗಿದ್ದರು ಎಂಬುದರಲ್ಲಿದೆ ಮತ್ತು ಪಂಚದ್ರಾವಿಡರಲ್ಲಿ ಸೇರಿದ್ದರೆಂಬುದರಲ್ಲಿದೆ.

        ಪಂಚದ್ರಾವಿಡರೆಂದರೆ ಕನ್ನಡ, ತಮಿಳು, ತೆಲುಗು, ತುಳು ಮತ್ತು ಮಲೆಯಾಳಗಳೆಂಬ ಐದು ಭಾಷೆಗಳನ್ನಾಡುವವರು. ಈ ಬ್ರಾಹ್ಮಣರು ಶುದ್ಧ ಶಾಖಾಹಾರಿಗಳು. ಧರ್ಮಶಾಸ್ತ್ರಗಳಲ್ಲಿ ಮಾಂಸಾಹಾರವರ್ಜನವನ್ನು ಬಹಳ ಕೊಂಡಾಡಿದೆ. ಪಂಚ ದ್ರಾವಿಡ ಬ್ರಾಹ್ಮಣರು ಇದನ್ನು ಸಾಧಿಸಿರುವುದು ಧರ್ಮದ ದೃಷ್ಟಿಯಲ್ಲಿ ದೊಡ್ಡ ವಿಶೇಷ. ಬ್ರಾಹ್ಮಣರು ವೈದಿಕರಾಗಿರುವುದು ಮತ್ತೊಂದು ದೊಡ್ಡ ವಿಶೇಷ. ಅರ್ಥ ಕಾಮಗಳಲ್ಲಿ ಆಸಕ್ತಿಯನ್ನು ಬಿಟ್ಟು ವಿದ್ಯಾರ್ಜನೆಯಲ್ಲಿಯು ವಿದ್ಯಾಬೋಧನೆಯಲ್ಲಿಯು, ನಿಯಮ ನಿಷ್ಠೆಗಳಲ್ಲಿಯು ಆಸಕ್ತಿಉಳ್ಳವರಾಗಿ ದೇವರು ಕೊಟ್ಟಿದ್ದರಲ್ಲಿ ತೃಪ್ತಿಯಿಂದಿರುವುದೇ ವೈದಿಕ ಬ್ರಾಹ್ಮಣರ ಲಕ್ಷಣ. ಇಂದಿನ ವೆಲನಾಡು ಬ್ರಾಹ್ಮಣರಾದ ನಾವು ಮತ್ತು ನಮ್ಮ ಮಕ್ಕಳು ಕಾಲದ ಪ್ರಭಾವದಿಂದ ಯಾವ ವೃತ್ತಿಯನ್ನವಲಂಬಿಸಿದರೂ ಮೇಲ್ಕಂಡ ವಿಷಯಗಳನ್ನು ಸದಾ ಸ್ಮರಿಸುತ್ತ, ಅರ್ಥಕಾಮನೆಗಳ ಸುಳಿಗೆ ಸಿಗದೆ, ದೇವರು ಕೊಟ್ಟಿದ್ದರಲ್ಲಿ ತೃಪ್ತಿಪಟ್ಟು, ಜ್ಞಾನಾರ್ಜನೆ ಮಾಡುತ್ತ ಶುದ್ಧ ಶಾಖಾಹಾರಿಗಳಾಗಿದ್ದು, ಸಾತ್ವಿಕ ಜೀವನವನ್ನು ನಡೆಸುತ್ತ, ತಮಗೆ ಕೈಲಾದಷ್ಟು ಸಹಕಾರ ಸೇವೆ ಮಾಡುತ್ತ ಜೀವಿಸುವುದೇ ನಮ್ಮ ವಂಶದ ವಿಶಿಷ್ಟತೆಗೆ ತಕ್ಕುದಾಗಿ ಇರುತ್ತದೆ.

Primary Sidebar

A SLOKA A DAY VISHNUSAHASRANAMA VIDEOS

Please click (>) to watch next video.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1

Recent Articles

  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day

Copyright © 2022 · Lanka Krishna Murti Foundation