• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • Photos
  • Videos
  • E BOOKS
  • Disclaimer
  • SAADHANA MAARGA HANDBOOK ONE TO THREE
    • SAADHANA MAARGA HANDBOOK ONE (ENGLISH AND KANNADA)
      • INTRODUCTION
      • VANDE GURU PARAMPARAM – Guru Sishya Relationships
      • GURUVASTAKAM
    • SAADHANA MAARGA HANDOOK TWO(ENGLISH AND KANNADA)
      • Sanathana Dharma: Principles and Practices
      • Nitya Karma Anushthana
      • Prasnottara Rathnamaalikaa
      • SUBHASHTAS
      • A SHUBHASHITA A DAY (1-300)
    • SAADHANA MAARGA HANDBOOK THREE(ENGLISH AND KANNADA)
      • Hatha Yoga: Guide to Meditation
      • Guided Chakra Meditation
  • SAADHANA MAARGA HANDBOOK  FOUR AND FIVE
    • SAADHANA MAARGA HANDBOOK FOUR(ENGLISH AND KANNADA)
      • Introduction
      • Pratah Smarana Stotram
      • Nirvana Shatkam
      • NARAYANA  SUKTAM
      • Dvaa Suparna: Two Birds
      • Shiva Maanasa Pooja
      • Self-Awakening (Audio)
      • Dakshina Murti Stotram
      • Dasasloki
      • Purusha Suktam
      • Sree Suktam
      • Moha Mudgaram (Bhajagovindam)
    • SAADHANA MAARGA HANDBOOK FIVE(ENGLISH AND KANNADA)
      • Tattva Bodha
      • Aparoksanubhuti
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
    • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
    • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
    • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
    • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
    • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
    • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
    • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
    • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
    • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
    • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
    • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
    • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
    • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
    • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
    • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
    • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
    • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
    • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
    • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
    • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
    • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
    • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
    • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
    • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
    • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
    • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
    • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
    • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
    • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
    • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
    • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
    • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
    • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
    • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
    • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
    • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ಶ್ರೀ ವಿಷ್ಣುಸಹಸ್ರನಾಮ
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • News
  • Tribute to Dr L Adinarayana
  • Audios of entire Vishnusahasranama

Srimadbhagavadgita Chapter 10

Chapter Ten:  Vibhuti Yoga, Srimadbhagavadgita

Published by   LANKA KRISHNA MURTI FOUNDATION                                                     

(https://www.facebook.com/lankakrishnamurtifoundation/)                   

Website (https://krishnamurtifoundation.com/lanka/)

LKM FOUNDATION-YOUTUBE

(https://www.youtube.com/channel/UCptmyD6GditXlBWnaRNI11A) अथ विभूतियोगो नाम दशमोऽध्यायः

ಅಥ ವಿಭೂತಿಯೋಗೋ ನಾಮ ದಶಮೋಽಧ್ಯಾಯಃ । 

श्री भगवानुवाच :

भूय एव महाबाहो

श्रुणु मे परमं वचः।

यत्तेऽहं प्रीयमाणाय

वक्ष्यामि हितकाम्यया॥१०.१॥

ಶ್ರೀಭಗವಾನುವಾಚ ।

ಭೂಯ ಏವ ಮಹಾಬಾಹೋ 

ಶೃಣು ಮೇ ಪರಮಂ ವಚಃ ।

ಯತ್ತೇಽಹಂ ಪ್ರೀಯಮಾಣಾಯ 

ವಕ್ಷ್ಯಾಮಿ ಹಿತಕಾಮ್ಯಯಾ ॥ 10-1॥

भूय एव महाबाहो श्रुणु मे परमं वचः।

यत्तेऽहं प्रीयमाणाय वक्ष्यामि हितकाम्यया॥१०.१॥

ಭೂಯ ಏವ ಮಹಾಬಾಹೋ ಶೃಣು ಮೇ ಪರಮಂ ವಚಃ ।

ಯತ್ತೇಽಹಂ ಪ್ರೀಯಮಾಣಾಯ ವಕ್ಷ್ಯಾಮಿ ಹಿತಕಾಮ್ಯಯಾ ॥ 10-1॥  

 Sri Bhagavan said:

 1.                Once again listen to Me, Arjuna.

            My words that reveal

            The Truth of Supreme Reality

            Have given you immense delight

            And I spoke them for your benefit.

          Listen to My words once more.

ಶ್ರೀ ಭಗವಂತನು ಹೇಳಿದನು:

ಎಲೈ ಮಹಾಬಾಹುವಾದ ಅರ್ಜುನನೇ! ಮತ್ತೊಮ್ಮೆ ನನ್ನ ಹಿತವಚನವನ್ನು ಕೇಳು. ಪರಮ ಅಸ್ತಿತ್ವದ ಸತ್ಯಸ್ಥಿತಿಯನ್ನು ತೆರೆದಿಡುವಂತಹ ನನ್ನ ಮಾತುಗಳು ನಿನಗೆ ಅಪರಿಮಿತ ಜ್ಞಾನವನ್ನು ನೀಡಿದ್ದರೂ ಸಹ ನೀನು ನನ್ನ ಪ್ರಿಯ ಸ್ನೇಹಿತನಾದುದರಿಂದ ನಾನು ಆಗಲೇ ವಿವರಿಸಿರುವ ಜ್ಞಾನಕ್ಕಿಂತ ಇನ್ನೂ ಉತ್ತಮವಾದ ಪರಮರಹಸ್ಯವಾದ ಜ್ಞಾನವನ್ನು ನಿನ್ನ ಹಿತಕ್ಕಾಗಿ ಇನ್ನೊಮ್ಮೆ ಹೇಳುವೆನು, ಕೇಳು!

न मे विदुः सुरगणाः

प्रभवं न महर्षयः।

अहमादिर्हि देवानां

महर्षीणां च सर्वशः॥१०.२॥

ನ ಮೇ ವಿದುಃ ಸುರಗಣಾಃ

 ಪ್ರಭವಂ ನ ಮಹರ್ಷಯಃ ।

ಅಹಮಾದಿರ್ಹಿ ದೇವಾನಾಂ 

ಮಹರ್ಷೀಣಾಂ ಚ ಸರ್ವಶಃ ॥ 10-2॥

न मे विदुः सुरगणाः प्रभवं न महर्षयः।

अहमादिर्हि देवानां महर्षीणां च सर्वशः॥१०.२॥

ನ ಮೇ ವಿದುಃ ಸುರಗಣಾಃ ಪ್ರಭವಂ ನ ಮಹರ್ಷಯಃ ।

ಅಹಮಾದಿರ್ಹಿ ದೇವಾನಾಂ ಮಹರ್ಷೀಣಾಂ ಚ ಸರ್ವಶಃ ॥ 10-2॥

 2.                Neither the host of divine beings (devas)

Nor the Great Rishis know My origin.

I am the Great Cause

And Prime Source of all beings.

Having originated prior to the Devas

And the Maharshis,

There is no way of their knowing Me.

ದೇವತಾಗಣಗಳಾಗಲೀ, ಮಹಾನ್ಋಷಿಗಳಾಗಲೀ ನನ್ನ ಮೂಲವನ್ನು ಅರಿಯರು. ಏಕೆಂದರೆ ಸಕಲ ಜೀವಿಗಳ ಪ್ರಮುಖ ಉಗಮಸ್ಥಾನ ಮತ್ತು ನಿಜವಾದ ಕಾರಣಕರ್ತ ನಾನೇ ಆಗಿದ್ದೇನೆ. ಎಲ್ಲ ರೀತಿಯಿಂದಲೂ ನಾನೇ ದೇವತೆಗಳಿಗೂ ಮಹರ್ಷಿಗಳಿಗೂ ಆದಿಕಾರಣನಾಗಿದ್ದೇನೆ. ಹಾಗಾಗಿ ನನ್ನ ಮೂಲವನ್ನು ಅರಿಯಲು ಅವರಿಗೆ ಯಾವುದೇ ರೀತಿಯಿಂದ ಸಾಧ್ಯವಿಲ್ಲ. 

यो मामजमनादिं च

वेत्ति लोकमहेश्वरम्।

असंमूढः स मर्त्येषु

सर्वपापैः प्रमुच्यते॥१०.३॥

ಯೋ ಮಾಮಜಮನಾದಿಂ ಚ 

ವೇತ್ತಿ ಲೋಕಮಹೇಶ್ವರಮ್ ।

ಅಸಮ್ಮೂಢಃ ಸ ಮರ್ತ್ಯೇಷು

ಸರ್ವಪಾಪೈಃ ಪ್ರಮುಚ್ಯತೇ ॥ 10-3॥

 यो मामजमनादिं च वेत्ति लोकमहेश्वरम्।

असंमूढः स मर्त्येषु सर्वपापैः प्रमुच्यते॥१०.३॥

 ಯೋ ಮಾಮಜಮನಾದಿಂ ಚ ವೇತ್ತಿ ಲೋಕಮಹೇಶ್ವರಮ್ ।

ಅಸಮ್ಮೂಢಃ ಸ ಮರ್ತ್ಯೇಷು ಸರ್ವಪಾಪೈಃ ಪ್ರಮುಚ್ಯತೇ ॥ 10-3॥

3.                  The person who understands

That I am Birth-less and Beginning-less

And that I am the Supreme Lord

Of all the worlds

Remains un-deluded among the humans

And gets released from all sins.

ಯಾರು ನನ್ನನ್ನು ಜನ್ಮರಹಿತನೆಂದೂ, ಆದಿಯಿಲ್ಲದವನೆಂದೂ, ಎಲ್ಲ ಲೋಕಗಳ ಮಹೇಶ್ವರನೆಂದೂ ತಿಳಿಯುತ್ತಾನೆಯೋ, ಅವನು ಮಾತ್ರ ಮನುಷ್ಯರಲ್ಲಿ ಭ್ರಾಂತಿಯಿಲ್ಲದವನಾಗಿ, ಮೋಹರಹಿತನಾಗಿ, ಸರ್ವಪಾಪಗಳಿಂದ ಬಿಡುಗಡೆ ಹೊಂದಿ ಮುಕ್ತನಾಗುತ್ತಾನೆ. 

बुद्धिर्ज्ञानमसंमोहः

 क्षमा सत्यं दमः शमः।

सुखं दुःखं भवोऽभावो

भयं चाभयमेव च॥१०.४॥

ಬುದ್ಧಿರ್ಜ್ಞಾನಮಸಮ್ಮೋಹಃ 

ಕ್ಷಮಾ ಸತ್ಯಂ ದಮಃ ಶಮಃ ।

ಸುಖಂ ದುಃಖಂ ಭವೋಽಭಾವೋ 

ಭಯಂ ಚಾಭಯಮೇವ ಚ ॥ 10-4॥

बुद्धिर्ज्ञानमसंमोहः क्षमा सत्यं दमः शमः।

सुखं दुःखं भवोऽभावो भयं चाभयमेव च॥१०.४॥

ಬುದ್ಧಿರ್ಜ್ಞಾನಮಸಮ್ಮೋಹಃ ಕ್ಷಮಾ ಸತ್ಯಂ ದಮಃ ಶಮಃ ।

ಸುಖಂ ದುಃಖಂ ಭವೋಽಭಾವೋ ಭಯಂ ಚಾಭಯಮೇವ ಚ ॥ 10-4॥

अहिंसा समता तुष्टि:

तपो दानं यशोऽयशः।

भवन्ति भावा भूतानां

मत्त एव पृथग्विधाः॥१०.५॥ 

ಅಹಿಂಸಾ ಸಮತಾ ತುಷ್ಟಿಃ

ತಪೋ ದಾನಂ ಯಶೋಽಯಶಃ ।

ಭವಂತಿ ಭಾವಾ ಭೂತಾನಾಂ 

ಮತ್ತ ಏವ ಪೃಥಗ್ವಿಧಾಃ ॥ 10-5॥

अहिंसा समता तुष्टिस्तपो दानं यशोऽयशः।

भवन्ति भावा भूतानां मत्त एव पृथग्विधाः॥१०.५॥   

ಅಹಿಂಸಾ ಸಮತಾ ತುಷ್ಟಿಃ ತಪೋ ದಾನಂ ಯಶೋಽಯಶಃ ।

ಭವಂತಿ ಭಾವಾ ಭೂತಾನಾಂ ಮತ್ತ ಏವ ಪೃಥಗ್ವಿಧಾಃ ॥ 10-5॥

4.                 

5.                   Describing His Supremacy, Glory and Power,

The Lord says:

Intellect, knowledge, non-delusion,

Endurance, truthfulness, sense-control,

Mind-control, pleasure, pain,

Being, non-being, fear, fearlessness,

Non-violence, equanimity, contentment,

Penance, charity, fame, ill-fame, —

All these states – all these bhavas,

Each one of them experienced differently

By all beings –

All of them originated from Me only.

ತನ್ನ ಸಾರ್ವಭೌಮತ್ವವನ್ನು, ಭವ್ಯತೆ ಮತ್ತು ಶಕ್ತಿಯನ್ನು ವಿವರಿಸುತ್ತಾ ಭಗವಂತನು ಹೇಳುತ್ತಾನೆ.

ಬುದ್ಧಿ, ಜ್ಞಾನ, ಅಸಮ್ಮೋಹ ಅಂದರೆ ಸಂದೇಹ ಮತ್ತು ಭ್ರಾಂತಿಗಳಿಂದ ಬಿಡುಗಡೆ, ಕ್ಷಮೆ, ಸತ್ಯ, ಇಂದ್ರಿಯನಿಗ್ರಹ, ಮನೋ ನಿಗ್ರಹ, ಸುಖ, ದುಃಖ, ಹುಟ್ಟು, ಸಾವು, ಭಯ, ನಿರ್ಭಯ, ಅಹಿಂಸೆ, ಸಮಚಿತ್ತತೆ, ಸಂತೃಪ್ತಿ, ತಪಸ್ಸು, ದಾನ, ಯಶಸ್ಸು ಅಂದರೆ ಕೀರ್ತಿ ಮತ್ತು ಅಯಶಸ್ಸು ಅಂದರೆ ಅಪಕೀರ್ತಿ ಹೀಗೆ ನಾನಾ ವಿಧವಾದ ಭಾವಗಳನ್ನು, ಗುಣಗಳನ್ನು, ಪ್ರತಿಯೊಂದನ್ನು ಎಲ್ಲಾ ಪ್ರಾಣಿಗಳು ವಿಧವಿಧವಾಗಿ ಅನುಭವಿಸುವಂತೆ ನನ್ನಿಂದಲೇ ಮಾಡಲ್ಪಟ್ಟಿದೆ.

महर्षयः सप्त पूर्वे

चत्वारो मनवस्तथा।

मद्भावा मानसा जाता

येषां लोक इमाः प्रजा:॥१०.६॥

ಮಹರ್ಷಯಃ ಸಪ್ತ ಪೂರ್ವೇ

ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ 

ಯೇಷಾಂ ಲೋಕ ಇಮಾಃ ಪ್ರಜಾಃ ॥ 10-6॥

महर्षयः सप्त पूर्वे चत्वारो मनवस्तथा।

मद्भावा मानसा जाता येषां लोक इमाः प्रजा:॥१०.६॥

ಮಹರ್ಷಯಃ ಸಪ್ತ ಪೂರ್ವೇ ಚತ್ವಾರೋ ಮನವಸ್ತಥಾ ।

ಮದ್ಭಾವಾ ಮಾನಸಾ ಜಾತಾ ಯೇಷಾಂ ಲೋಕ ಇಮಾಃ ಪ್ರಜಾಃ ॥ 10-6॥

 6.       The Great Sages, seven in number,

Known as Saptarshis,

Earlier to them, the Four Great Sages,

Sanaka, Sanandana, Sanatkumara and Sanatana,

Followed by the Manus –

All of them were born of My Mind,

Endowed with My Powers –

They are the Progenitors

Of all the beings, dynamic and static.

ಸಪ್ತರ್ಷಿಗಳೆಂದು ಖ್ಯಾತರಾಗಿರುವ ಅತ್ರಿ ಮೊದಲಾದ ಏಳು ಜನ ಮಹರ್ಷಿಗಳು, ಅವರ ಪೂರ್ವೀಕರಾದ ಸನಕ, ಸನಂದನ, ಸನತ್ಕುಮಾರ ಮತ್ತು ಸನಾತನ ಎಂಬ ನಾಲ್ವರು ಮಹರ್ಷಿಗಳು ಹಾಗೂ ಸ್ವಯಂಭುವ ಮುಂತಾದ ಮನುಗಳು, ಇವರೆಲ್ಲರೂ ನನ್ನ ಭಾವವುಳ್ಳವರಾಗಿ, ನನ್ನ ಮನಸ್ಸಿನ ಸಂಕಲ್ಪದಿಂದಲೇ ಜನಿಸಿದರು. ವಿವಿಧ ಲೋಕಗಳಲ್ಲಿರುವ ಚರಾಚರ ಜೀವಿಗಳಿಗೆಲ್ಲಾ ಇವರೇ ಪೂರ್ವಜರು.  

एतां विभूतिं योगं च

मम यो वेत्ति तत्वतः।

सोऽविकम्पेन योगेन

युज्यते नात्र संशयः॥१०.७॥

ಏತಾಂ ವಿಭೂತಿಂ ಯೋಗಂ ಚ 

ಮಮ ಯೋ ವೇತ್ತಿ ತತ್ತ್ವತಃ ।

ಸೋಽವಿಕಂಪೇನ ಯೋಗೇನ 

ಯುಜ್ಯತೇ ನಾತ್ರ ಸಂಶಯಃ ॥ 10-7॥

 एतां विभूतिं योगं च मम यो वेत्ति तत्वतः।

सोऽविकम्पेन योगेन युज्यते नात्र संशयः॥१०.७॥

ಏತಾಂ ವಿಭೂತಿಂ ಯೋಗಂ ಚ ಮಮ ಯೋ ವೇತ್ತಿ ತತ್ತ್ವತಃ ।

ಸೋಽವಿಕಂಪೇನ ಯೋಗೇನ ಯುಜ್ಯತೇ ನಾತ್ರ ಸಂಶಯಃ ॥ 10-7॥

7.      Whoever understands the Truth

Of My Vibhuti and Yoga,

My Exceptional Power

And Extraordinary Abilty,

Will acquire steady power and ability

Required to unite with the Supreme Self.

There is no doubt about it.

ಯಾರು ಈ ನನ್ನ ಐಶ್ವರ್ಯರೂಪೀ ವಿಭೂತಿಯನ್ನೂ ಮತ್ತು ಯೋಗಶಕ್ತಿಯನ್ನೂ, ಅದರ ಸತ್ಯವನ್ನೂ ನನ್ನ ಅಸಾಧಾರಣವಾದ ಶಕ್ತಿಯನ್ನೂ ಹಾಗೂ ಸಾಮರ್ಥ್ಯವನ್ನೂ ಯಥಾರ್ಥವಾಗಿ ತಿಳಿದುಕೊಳ್ಳುತ್ತಾರೆಯೋ, ಅವರು ನಿಶ್ಚಲವಾದ ಭಕ್ತಿಯೋಗದಿಂದ ಪರಮಾತ್ಮನಲ್ಲಿ ಒಂದಾಗಲು ಬೇಕಾದ ಶಕ್ತಿ ಮತ್ತು ಸಾಮರ್ಥ್ಯವನ್ನು ಹೊಂದುತ್ತಾರೆ; ಇದರಲ್ಲಿ ಸಂಶಯವಿಲ್ಲ. 

अहं सर्वस्य प्रभवो

मत्तः सर्वं प्रवर्तते।

इति मत्वा भजन्ते मां

बुधा भावसमन्विताः॥१०.८॥

ಅಹಂ ಸರ್ವಸ್ಯ ಪ್ರಭವೋ

ಮತ್ತಃ ಸರ್ವಂ ಪ್ರವರ್ತತೇ ।

ಇತಿ ಮತ್ವಾ ಭಜಂತೇ ಮಾಂ 

ಬುಧಾ ಭಾವಸಮನ್ವಿತಾಃ ॥ 10-8॥

अहं सर्वस्य प्रभवो मत्तः सर्वं प्रवर्तते।

इति मत्वा भजन्ते मां बुधा भावसमन्विताः॥१०.८॥

ಅಹಂ ಸರ್ವಸ್ಯ ಪ್ರಭವೋ ಮತ್ತಃ ಸರ್ವಂ ಪ್ರವರ್ತತೇ ।

ಇತಿ ಮತ್ವಾ ಭಜಂತೇ ಮಾಂ ಬುಧಾ ಭಾವಸಮನ್ವಿತಾಃ ॥ 10-8॥

8.      Wise people worship Me

With the understanding

That I am the Source of all things

And everything proceeds from Me.

Thus they adore Me

With a sense of deep attachment.

ಎಲ್ಲ ಅಧ್ಯಾತ್ಮಿಕ ಮತ್ತು ಭೌತಿಕ ಜಗತ್ತುಗಳಿಗೆ ಮೂಲ ಉತ್ಪತ್ತಿಕಾರಕನು ನಾನು ಹಾಗೂ ನನ್ನಿಂದಲೇ ಎಲ್ಲವೂ ಪ್ರವರ್ತಿಸುತ್ತಿರುವುದು ಎಂಬುದನ್ನು ಅರಿತು, ನನ್ನನ್ನು ಆರಾಧಿಸುವ ವಿದ್ವಾಂಸರು, ಶ್ರದ್ಧಾವಂತರಾಗಿ, ಹೃದಯತುಂಬಿ ಅಕ್ಕರೆಯ ಭಾವದಿಂದ ನನ್ನನ್ನು ಪೂಜಿಸುತ್ತಾರೆ.

मच्चित्ता मद्गतप्राणा:

बोधयन्तः परस्परम्।

कथयन्तश्च मां नित्यं

तुष्यन्ति च रमन्ति च॥१०.९॥  

ಮಚ್ಚಿತ್ತಾ ಮದ್ಗತಪ್ರಾಣಾಃ 

ಬೋಧಯಂತಃ ಪರಸ್ಪರಮ್ ।

ಕಥಯಂತಶ್ಚ ಮಾಂ ನಿತ್ಯಂ 

ತುಷ್ಯಂತಿ ಚ ರಮಂತಿ ಚ ॥ 10-9॥

मच्चित्ता मद्गतप्राणा बोधयन्तः परस्परम्।

कथयन्तश्च मां नित्यं तुष्यन्ति च रमन्ति च॥१०.९॥  

ಮಚ್ಚಿತ್ತಾ ಮದ್ಗತಪ್ರಾಣಾಃ ಬೋಧಯಂತಃ ಪರಸ್ಪರಮ್ ।

ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ ॥ 10-9॥

9.                  My devotees

Centering their minds on Me,

Surrendering their life-forces to Me,

Talking about Me among themselves,

And thus enlightening one another, —

They always derive immense satisfaction

And enjoy doing so.

ನಿರಂತರವಾಗಿ ನನ್ನಲ್ಲಿಯೇ ತಮ್ಮ ಮನಸ್ಸನ್ನು ಕೇಂದ್ರೀಕರಿಸುವವರೂ, ತಮ್ಮ ಪ್ರಾಣಗಳನ್ನು ಸಂಪೂರ್ಣವಾಗಿ ನನ್ನಲ್ಲೇ ಅರ್ಪಿಸುವವರೂ, ನನ್ನ ಮೇಲಿನ ಭಕ್ತಿಯ ಬಗ್ಗೆ ತಮ್ಮ ತಮ್ಮಲ್ಲಿ ಸದಾ ಚರ್ಚಿಸುತ್ತಾ ಒಬ್ಬರ ಮೇಲೊಬ್ಬರು ಬೆಳಕು ಚೆಲ್ಲುತ್ತಾ ಇರುವ ನನ್ನ ಭಕ್ತರು ಅತೀವ ತೃಪ್ತಿಯನ್ನು ಪಡೆಯುತ್ತಾರೆ ಹಾಗೂ ಈ ಕ್ರಿಯೆಯನ್ನು ಆನಂದಿಸುತ್ತಾರೆ ಸಹ!

तेषां सततयुक्तानां

भजतां प्रीतिपूर्वकम्।

ददामि बुद्धियोगं तं

येन मामुपयान्ति ते॥१०.१०॥

ತೇಷಾಂ ಸತತಯುಕ್ತಾನಾಂ 

ಭಜತಾಂ ಪ್ರೀತಿಪೂರ್ವಕಮ್ ।

ದದಾಮಿ ಬುದ್ಧಿಯೋಗಂ ತಂ 

ಯೇನ ಮಾಮುಪಯಾಂತಿ ತೇ ॥ 10-10॥

तेषां सततयुक्तानां भजतां प्रीतिपूर्वकम्।

ददामि बुद्धियोगं तं येन मामुपयान्ति ते॥१०.१०॥

ತೇಷಾಂ ಸತತಯುಕ್ತಾನಾಂ ಭಜತಾಂ ಪ್ರೀತಿಪೂರ್ವಕಮ್ ।

ದದಾಮಿ ಬುದ್ಧಿಯೋಗಂ ತಂ ಯೇನ ಮಾಮುಪಯಾಂತಿ ತೇ ॥ 10-10॥

10.  To those devotees of Mine

Who keep themselves united with Me,

Constantly and lovingly,

I grant Buddhi Yoga,

Intellectual understanding,

Which helps them to reach Me.

 ಯಾರು ಪ್ರೇಮದಿಂದ ಅನವರತ ನನ್ನಲ್ಲಿ ಒಂದಾಗಿರಬೇಕೆಂದು ಬಯಸುವರೋ, ಅಂತಹ ನನ್ನ ಭಕ್ತರಿಗೆ ನಾನು ತತ್ವಜ್ಞಾನರೂಪವಾದ ಬುದ್ಧಿಯೋಗವನ್ನು ಕರುಣಿಸುತ್ತೇನೆ. ಅದರ ಸಹಾಯದಿಂದ ಅವರು ನನ್ನನ್ನು ಹೊಂದುವರು. 

तेषामेवानुकम्पार्थं

अहमज्ञानजं तमः।

नाशयाम्यात्मभावस्थो

ज्ञानदीपेन भास्वता॥१०.११॥

ತೇಷಾಮೇವಾನುಕಂಪಾರ್ಥಂ

ಅಹಮಜ್ಞಾನಜಂ ತಮಃ ।

ನಾಶಯಾಮ್ಯಾತ್ಮಭಾವಸ್ಥೋ 

ಜ್ಞಾನದೀಪೇನ ಭಾಸ್ವತಾ ॥ 10-11॥

तेषामेवानुकम्पार्थं अहमज्ञानजं तमः।

नाशयाम्यात्मभावस्थो ज्ञानदीपेन भास्वता॥१०.११॥

ತೇಷಾಮೇವಾನುಕಂಪಾರ್ಥಂ ಅಹಮಜ್ಞಾನಜಂ ತಮಃ ।

ನಾಶಯಾಮ್ಯಾತ್ಮಭಾವಸ್ಥೋ ಜ್ಞಾನದೀಪೇನ ಭಾಸ್ವತಾ ॥ 10-11॥

11.  In fact, feeling compassion

For My devotees,

I dwell in their minds

And ignite the flaming torch of knowledge

To dispel the darkness

Caused by ignorance.

ನನ್ನ ಭಕ್ತರಿಗೆ ವಿಶೇಷ ಅನುಕಂಪವನ್ನು ತೋರಿಸುವ ಸಲುವಾಗಿ ನಾನು ಅವರ ಅಂತಃಕರಣದಲ್ಲಿ ಸ್ಥಿತನಾಗಿ, ಪ್ರಕಾಶಿಸುತ್ತಿರುವ ಜ್ಞಾನದೀಪವನ್ನು ಬೆಳಗಿಸಿ, ಅವರ ಅಜ್ಞಾನದಿಂದ ಉಂಟಾದ ಅಂಧಕಾರವನ್ನು ನಾಶಮಾಡುತ್ತೇನೆ.

अर्जुन उवच–

परं ब्रह्म परं धाम

पवित्रं परमं भवान् l

पुरुषं शाश्वतं दिव्यं 

आदिदेवमजं  विभुम्॥१०.१२॥

ಅರ್ಜುನ ಉವಾಚ ।

ಪರಂ ಬ್ರಹ್ಮ ಪರಂ ಧಾಮ 

ಪವಿತ್ರಂ ಪರಮಂ ಭವಾನ್ ।

ಪುರುಷಂ ಶಾಶ್ವತಂ ದಿವ್ಯಂ

ಆದಿದೇವಮಜಂ ವಿಭುಮ್ ॥ 10-12॥

परं ब्रह्म परं धाम पवित्रं परमं भवान् l

पुरुषं शाश्वतं दिव्यं  आदिदेवमजं  विभुम्॥१०.१२॥

ಪರಂ ಬ್ರಹ್ಮ ಪರಂ ಧಾಮ ಪವಿತ್ರಂ ಪರಮಂ ಭವಾನ್ ।

ಪುರುಷಂ ಶಾಶ್ವತಂ ದಿವ್ಯಂ ಆದಿದೇವಮಜಂ ವಿಭುಮ್ ॥ 10-12॥

आहुस्त्वां ऋषयः सर्वे

देवर्षिर्नारदस्तथा।

असितो देवलो व्यासः

स्वयं चैव ब्रवीषि मे॥१०.१३॥  

ಆಹುಸ್ತ್ವಾಮೃಷಯಃ ಸರ್ವೇ 

ದೇವರ್ಷಿರ್ನಾರದಸ್ತಥಾ ।

ಅಸಿತೋ ದೇವಲೋ ವ್ಯಾಸಃ 

ಸ್ವಯಂ ಚೈವ ಬ್ರವೀಷಿ ಮೇ ॥ 10-13॥

आहुस्त्वां ऋषयः सर्वे देवर्षिर्नारदस्तथा।

असितो देवलो व्यासः स्वयं चैव ब्रवीषि मे॥१०.१३॥  

ಆಹುಸ್ತ್ವಾಮೃಷಯಃ ಸರ್ವೇ ದೇವರ್ಷಿರ್ನಾರದಸ್ತಥಾ ।

ಅಸಿತೋ ದೇವಲೋ ವ್ಯಾಸಃ ಸ್ವಯಂ ಚೈವ ಬ್ರವೀಷಿ ಮೇ ॥ 10-13॥

12.   

13.   Arjuna said:

O Lord,

You are the Supreme Brahman,

The Supreme Abode, as well.

You are Pure and Sanctified.

You are also the Everlasting One,

Primordial, Unborn and All-pervading.

You are hailed thus by all the Rishis,

By Narada, the Divine Rishi,

As well as by Asita, Devala and Vyasa.

Moreover, You have Yourself declared to me

To be so.

ಅರ್ಜುನನು ಹೇಳಿದನು:-

ಹೇ ಪ್ರಭುವೇ,

ನೀನೇ ಪರಬ್ರಹ್ಮ ಹಾಗೂ ಪರಂಧಾಮ, ನೀನು ಪರಮಪವಿತ್ರನು. ಪಾವನನು.

ನೀನು ನಿತ್ಯನು, ಶಾಶ್ವತನು, ಆದಿಪುರುಷನು, ಜನ್ಮರಹಿತನು, ಸರ್ವವ್ಯಾಪಿಯು ಹೀಗೆಂದು ಎಲ್ಲ ಋಷಿಗಳೂ, ನಾರದಾದಿ ದೇವಋಷಿಗಳೂ ಹಾಗೂ ಅಸಿತ, ದೇವಲ ಮತ್ತು ವ್ಯಾಸರಂತಹ ಮಹರ್ಷಿಗಳು ನಿನ್ನ ವಿಷಯದಲ್ಲಿ ಈ ಸತ್ಯವನ್ನು ಧೃಢಪಡಿಸಿದ್ದಾರೆ. ಇದಕ್ಕೆ ಮಿಗಲಾಗಿ ಸ್ವಯಂ ನೀನೂ ಸಹ ಹಾಗೆಯೇ ಹೇಳುತ್ತಿರುವೆ.

सर्वमेतदृतं मन्ये

यन्मां वदसि केशव।

न हि ते भगवन्व्यक्तिं

विदुर्देवा न दानवाः॥१०.१४॥

ಸರ್ವಮೇತದೃತಂ ಮನ್ಯೇ 

ಯನ್ಮಾಂ ವದಸಿ ಕೇಶವ ।

ನ ಹಿ ತೇ ಭಗವನ್ವ್ಯಕ್ತಿಂ 

ವಿದುರ್ದೇವಾ ನ ದಾನವಾಃ ॥ 10-14॥

सर्वमेतदृतं मन्ये यन्मां वदसि केशव।

न हि ते भगवन्व्यक्तिं विदुर्देवा न दानवाः॥१०.१४॥

ಸರ್ವಮೇತದೃತಂ ಮನ್ಯೇ ಯನ್ಮಾಂ ವದಸಿ ಕೇಶವ ।

ನ ಹಿ ತೇ ಭಗವನ್ವ್ಯಕ್ತಿಂ ವಿದುರ್ದೇವಾ ನ ದಾನವಾಃ ॥ 10-14॥

14.  O Krishna,

Everything that you have told me

I consider to be true.

O Bhagavan,

Your Origin, Your Manifestation,

Is not known even to the gods

Or to the demons.

ಹೇ ಕೃಷ್ಣಾ, ನೀನು ನನಗೆ ಹೇಳಿದ್ದೆಲ್ಲವೂ, ಸತ್ಯವೆಂದು ನಾನು ಸಂಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. ಎಲೈ ಭಗವಂತನೇ, ದೇವತೆಗಳಾಗಲೀ, ದಾನವರಾಗಲೀ, ನಿನ್ನ ಮೂಲವನ್ನು, ನಿನ್ನ ಲೀಲಾಮಯ ಸ್ವರೂಪದ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳಲಾರರು.

स्वयमेवात्मनात्मानं

वेत्थ त्वं पुरुषोत्तम।

भूतभावन! भूतेश!

देवदेव! जगत्पते॥१०.१५॥

ಸ್ವಯಮೇವಾತ್ಮನಾತ್ಮಾನಂ

ವೇತ್ಥ ತ್ವಂ ಪುರುಷೋತ್ತಮ ।

ಭೂತಭಾವನ ಭೂತೇಶ 

ದೇವದೇವ ಜಗತ್ಪತೇ ॥ 10-15॥

स्वयमेवात्मनात्मानं वेत्थ त्वं पुरुषोत्तम।

भूतभावन! भूतेश! देवदेव! जगत्पते॥१०.१५॥

ಸ್ವಯಮೇವಾತ್ಮನಾತ್ಮಾನಂ ವೇತ್ಥ ತ್ವಂ ಪುರುಷೋತ್ತಮ ।

ಭೂತಭಾವನ ಭೂತೇಶ ದೇವದೇವ ಜಗತ್ಪತೇ ॥ 10-15॥

15.  O Supreme Spirit,

Purushottama,

You are the cause of all beings.

You are the lord of all beings, too.

You are God of all divinities.

You are the Lord of the entire universe.

Truly, you alone know the Self

All by Yourself.

ಹೇ ಪರಮಾತ್ಮನೇ, ಪುರುಷೋತ್ತಮನೇ, ಸಕಲ ಜೀವಾತ್ಮಗಳಿಗೂ ನೀನೇ ಕಾರಣೀಭೂತ. ಸಕಲ ಭೂತಗಳಿಗೂ ನೀನೇ ಒಡೆಯ. ಎಲ್ಲ ದೈವಗಳ ದೇವ ನೀನು. ಈ ಸಮಸ್ತ ವಿಶ್ವದ ಅಧಿಪತಿ ನೀನು. ವಾಸ್ತವವಾಗಿ ನಿನ್ನ ಅಂತರಂಗದ ಶಕ್ತಿಯಿಂದ ನೀನೊಬ್ಬನೇ ನಿನ್ನನ್ನು ಅರ್ಥಮಾಡಿಕೊಳ್ಳಬಲ್ಲೆ.

वक्तुमर्हस्यशेषेण

दिव्या ह्यात्मविभूतयः।

याभिर्विभूतिभिर्लोकान्

इमांस्त्वं व्याप्य तिष्ठसि॥१०.१६॥

ವಕ್ತುಮರ್ಹಸ್ಯಶೇಷೇಣ 

ದಿವ್ಯಾ ಹ್ಯಾತ್ಮವಿಭೂತಯಃ ।

ಯಾಭಿರ್ವಿಭೂತಿಭಿರ್ಲೋಕಾನ್

ಇಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ॥ 10-16॥

वक्तुमर्हस्यशेषेण दिव्या ह्यात्मविभूतयः।

याभिर्विभूतिभिर्लोकान्  इमांस्त्वं व्याप्य तिष्ठसि॥१०.१६॥

ವಕ್ತುಮರ್ಹಸ್ಯಶೇಷೇಣ ದಿವ್ಯಾ ಹ್ಯಾತ್ಮವಿಭೂತಯಃ ।

ಯಾಭಿರ್ವಿಭೂತಿಭಿರ್ಲೋಕಾನ್ ಇಮಾಂಸ್ತ್ವಂ ವ್ಯಾಪ್ಯ ತಿಷ್ಠಸಿ ॥ 10-16॥

16.  The divine powers and abilities

Which you possess

And by means of which

You pervade and abide

In all the worlds,

You alone should enumerate

In their entirety.

ನೀನು ಹೊಂದಿರುವ ಯಾವ ದೈವಿಕ ಶಕ್ತಿಯಿಂದ ಮತ್ತು ಸಾಮರ್ಥ್ಯದಿಂದ ಈ ಎಲ್ಲ ಲೋಕಗಳನ್ನು ವ್ಯಾಪಿಸಿಕೊಂಡು ಸ್ಥಿತನಾಗಿರುವೆಯೋ ಆ ನಿನ್ನ ದಿವ್ಯವಾದ ವಿಭೂತಿಗಳನ್ನು ಸಂಪೂರ್ಣವಾಗಿ ಹಾಗೂ ವಿವರವಾಗಿ ನನಗೆ ತಿಳಿಯುವಂತೆ ನೀನೇ ಹೇಳಬೇಕು. 

कथं विद्याम्यहं  योगिन्

त्वां  सदा परिचिन्तयन्।

केषु केषु च भावेषु

चिन्त्योसि भगवन्मया॥१०.१७॥

ಕಥಂ ವಿದ್ಯಾಮಹಂ ಯೋಗಿನ್

ತ್ವಾಂ ಸದಾ ಪರಿಚಿಂತಯನ್ ।

ಕೇಷು ಕೇಷು ಚ ಭಾವೇಷು 

ಚಿಂತ್ಯೋಽಸಿ ಭಗವನ್ಮಯಾ ॥ 10-17॥

कथं विद्याम्यहं  योगिन्  त्वां  सदा परिचिन्तयन्।

केषु केषु च भावेषु चिन्त्योसि भगवन्मया॥१०.१७॥

ಕಥಂ ವಿದ್ಯಾಮಹಂ ಯೋಗಿನ್ ತ್ವಾಂ ಸದಾ ಪರಿಚಿಂತಯನ್ ।

ಕೇಷು ಕೇಷು ಚ ಭಾವೇಷು ಚಿಂತ್ಯೋಽಸಿ ಭಗವನ್ಮಯಾ ॥ 10-17॥

17.  O Yogin,

How can I know You

By always contemplating.

O Bhagavan,

Tell me in what objects

I should meditate on You.

ಹೇ ಯೋಗೀಶ್ವರನೇ, ನಾನು ಯಾವ ಪ್ರಕಾರವಾಗಿ ನಿರಂತರ ಚಿಂತನೆ ಮತ್ತು ಧ್ಯಾನ ಮಾಡುತ್ತಾ ನಿನ್ನನ್ನು ಅರಿಯಲಿ? ಎಲೈ ಭಗವಂತನೇ, ಯಾವ ಯಾವ ಭಾವಗಳಲ್ಲಿ ನಾನು ನಿನ್ನನ್ನು ಧ್ಯಾನಿಸಲಿ ಎಂಬುದನ್ನು ಹೇಳು.

विस्तरेणात्मनो योगं

विभूतिं च जनार्दन।

भूयः कथय तृप्तिर्हि

शृण्वतो नास्ति मेऽमृतम्॥१०.१८॥

ವಿಸ್ತರೇಣಾತ್ಮನೋ ಯೋಗಂ 

ವಿಭೂತಿಂ ಚ ಜನಾರ್ದನ ।

ಭೂಯಃ ಕಥಯ ತೃಪ್ತಿರ್ಹಿ 

ಶೃಣ್ವತೋ ನಾಸ್ತಿ ಮೇಽಮೃತಮ್ ॥ 10-18

विस्तरेणात्मनो योगं विभूतिं च जनार्दन।

भूयः कथय तृप्तिर्हि शृण्वतो नास्ति मेऽमृतम्॥१०.१८॥

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ ।

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಽಮೃತಮ್ ॥ 10-18॥

18.  O Janardana,

Tell me once again

About the Yoga and Vibhuti,

About your abilities and divine powers.

Your utterances are verily Amruta-like.

Since I have had no sense of complete satisfaction,

Please repeat them.

ಹೇ ಜನಾರ್ದನಾ! ನಿನ್ನ ಯೋಗಶಕ್ತಿಯನ್ನೂ ಮತ್ತು ವಿಭೂತಿಯನ್ನೂ ಇನ್ನೂ ಸವಿಸ್ತಾರವಾಗಿ ಪುನಃ ಹೇಳು. ನಿನ್ನ ಸಾಮರ್ಥ್ಯ ಹಾಗೂ ದೈವಿಕ ಶಕ್ತಿಗಳ ಬಗ್ಗೆ ಹೇಳು. ಏಕೆಂದರೆ ನಿನ್ನ ಮಾತುಗಳು ನಿಜವಾಗಿಯೂ ಅಮೃತ ಸಮಾನವಾಗಿವೆ. ನಿನ್ನ ವಿಷಯವನ್ನು ಕೇಳಿದಷ್ಟೂ ನನಗೆ ಸಂಪೂರ್ಣ ತೃಪ್ತಿಯ ಅನುಭವವಾಗುತ್ತಿಲ್ಲ. ದಯವಿಟ್ಟು ಅವುಗಳನ್ನು ಪುನರುಚ್ಛರಿಸು.

विस्तरेणात्मनो योगं

विभूतिं च जनार्दन।

भूयः कथय तृप्तिर्हि

शृण्वतो नास्ति मेऽमृतम्॥१०.१८॥

ವಿಸ್ತರೇಣಾತ್ಮನೋ ಯೋಗಂ 

ವಿಭೂತಿಂ ಚ ಜನಾರ್ದನ ।

ಭೂಯಃ ಕಥಯ ತೃಪ್ತಿರ್ಹಿ 

ಶೃಣ್ವತೋ ನಾಸ್ತಿ ಮೇಽಮೃತಮ್ ॥ 10-18

विस्तरेणात्मनो योगं विभूतिं च जनार्दन।

भूयः कथय तृप्तिर्हि शृण्वतो नास्ति मेऽमृतम्॥१०.१८॥

ವಿಸ್ತರೇಣಾತ್ಮನೋ ಯೋಗಂ ವಿಭೂತಿಂ ಚ ಜನಾರ್ದನ ।

ಭೂಯಃ ಕಥಯ ತೃಪ್ತಿರ್ಹಿ ಶೃಣ್ವತೋ ನಾಸ್ತಿ ಮೇಽಮೃತಮ್ ॥ 10-18॥

18.  O Janardana,

Tell me once again

About the Yoga and Vibhuti,

About your abilities and divine powers.

Your utterances are verily Amruta-like.

Since I have had no sense of complete satisfaction,

Please repeat them.

ಹೇ ಜನಾರ್ದನಾ! ನಿನ್ನ ಯೋಗಶಕ್ತಿಯನ್ನೂ ಮತ್ತು ವಿಭೂತಿಯನ್ನೂ ಇನ್ನೂ ಸವಿಸ್ತಾರವಾಗಿ ಪುನಃ ಹೇಳು. ನಿನ್ನ ಸಾಮರ್ಥ್ಯ ಹಾಗೂ ದೈವಿಕ ಶಕ್ತಿಗಳ ಬಗ್ಗೆ ಹೇಳು. ಏಕೆಂದರೆ ನಿನ್ನ ಮಾತುಗಳು ನಿಜವಾಗಿಯೂ ಅಮೃತ ಸಮಾನವಾಗಿವೆ. ನಿನ್ನ ವಿಷಯವನ್ನು ಕೇಳಿದಷ್ಟೂ ನನಗೆ ಸಂಪೂರ್ಣ ತೃಪ್ತಿಯ ಅನುಭವವಾಗುತ್ತಿಲ್ಲ. ದಯವಿಟ್ಟು ಅವುಗಳನ್ನು ಪುನರುಚ್ಛರಿಸು.

श्री भगवानुवाच

हन्त ते कथयिष्यामि

दिव्याह्यात्मविभूतयः।

प्राधान्यतः कुरुश्रेष्ठ!

नास्त्यन्तो विस्तरस्य मे॥१०.१९॥

ಶ್ರೀಭಗವಾನುವಾಚ ।

ಹಂತ ತೇ ಕಥಯಿಷ್ಯಾಮಿ 

ದಿವ್ಯಾ ಹ್ಯಾತ್ಮವಿಭೂತಯಃ ।

ಪ್ರಾಧಾನ್ಯತಃ ಕುರುಶ್ರೇಷ್ಠ 

ನಾಸ್ತ್ಯಂತೋ ವಿಸ್ತರಸ್ಯ ಮೇ ॥ 10-19॥

हन्त ते कथयिष्यामि दिव्याह्यात्मविभूतयः।

प्राधान्यतः कुरुश्रेष्ठ! नास्त्यन्तो विस्तरस्य मे॥१०.१९॥

ಹಂತ ತೇ ಕಥಯಿಷ್ಯಾಮಿ ದಿವ್ಯಾ ಹ್ಯಾತ್ಮವಿಭೂತಯಃ ।

ಪ್ರಾಧಾನ್ಯತಃ ಕುರುಶ್ರೇಷ್ಠ ನಾಸ್ತ್ಯಂತೋ ವಿಸ್ತರಸ್ಯ ಮೇ ॥ 10-19॥

19.  Sri Bhagavan said:

Well, then Arjuna,

Of the innumerable vibhutis,

The divine Powers, I possess,

Which are endless in number,

I shall recount some prominent ones,

For your benefit.

ಶ್ರೀ ಭಗವಂತನು ಹೇಳಿದನು:- ಸರಿ ಅರ್ಜುನ! ಹಾಗೆಯೇ ಆಗಲಿ. ನಾನು ಹೊಂದಿರುವ ಅಸಂಖ್ಯಾತವಾದ ದೈವೀಕ ಶಕ್ತಿಗಳ ಮತ್ತು ಮಿತಿಯಿಲ್ಲದ ನನ್ನ ದಿವ್ಯ ವಿಭೂತಿಗಳ ಬಗ್ಗೆ ಪ್ರಧಾನವಾದವುಗಳನ್ನು ಮಾತ್ರ ನಿನ್ನ ಒಳಿತಿಗಾಗಿ ಹೇಳುತ್ತೇನೆ. ಏಕೆಂದರೆ ನನ್ನ ವಿಭೂತಿಗಳಿಗೆ ಪರಿಮಿತಿ ಇಲ್ಲವೆಂಬುದನ್ನು ಮರೆಯಬೇಡ.

अहमात्मा गुडाकेश

सर्वभूताशयस्थितः।

अहमादिश्च मध्यं च

भूतानामन्त एव च॥१०.२०॥

ಅಹಮಾತ್ಮಾ ಗುಡಾಕೇಶ 

ಸರ್ವಭೂತಾಶಯಸ್ಥಿತಃ ।

ಅಹಮಾದಿಶ್ಚ ಮಧ್ಯಂ ಚ 

ಭೂತಾನಾಮಂತ ಏವ ಚ ॥ 10-20॥

अहमात्मा गुडाकेश सर्वभूताशयस्थितः।

अहमादिश्च मध्यं च भूतानामन्त एव च॥१०.२०॥

ಅಹಮಾತ್ಮಾ ಗುಡಾಕೇಶ ಸರ್ವಭೂತಾಶಯಸ್ಥಿತಃ ।

ಅಹಮಾದಿಶ್ಚ ಮಧ್ಯಂ ಚ ಭೂತಾನಾಮಂತ ಏವ ಚ ॥ 10-20॥

20.  Arjuna,

I keep residing

In the inner sense of all beings.

I alone am the beginning, the middle

And the end of all beings.

ಅರ್ಜುನಾ! ನಾನು ಸಮಸ್ತ ಪ್ರಾಣಿಗಳ ಹೃದಯದಲ್ಲಿ, ಅಂತರಾತ್ಮದಲ್ಲಿ ನೆಲಸಿರತಕ್ಕಂತಹ ಪರಮಾತ್ಮ. ಸಮಸ್ತ ಭೂತಗಳ ಆದಿ, ಮಧ್ಯ ಮತ್ತು ಅಂತ್ಯವು ನಾನೇ ಆಗಿದ್ದೇನೆ.

आदित्यानामहं विष्णु: 

ज्योतिषां रवि रंशुमान्।

मरीचिर्मरुतामस्मि

नक्षत्राणामहं शशी॥१०.२१॥

ಆದಿತ್ಯಾನಾಮಹಂ ವಿಷ್ಣುಃ

ಜ್ಯೋತಿಷಾಂ ರವಿರಂಶುಮಾನ್ ।

ಮರೀಚಿರ್ಮರುತಾಮಸ್ಮಿ 

ನಕ್ಷತ್ರಾಣಾಮಹಂ ಶಶೀ ॥ 10-21॥

आदित्यानामहं विष्णु:  ज्योतिषां रवि रंशुमान्।

मरीचिर्मरुतामस्मि नक्षत्राणामहं शशी॥१०.२१॥

ಆದಿತ್ಯಾನಾಮಹಂ ವಿಷ್ಣುಃ ಜ್ಯೋತಿಷಾಂ ರವಿರಂಶುಮಾನ್ ।

ಮರೀಚಿರ್ಮರುತಾಮಸ್ಮಿ ನಕ್ಷತ್ರಾಣಾಮಹಂ ಶಶೀ ॥ 10-21॥

21.  Sri Bhagavan starts enumerating

The prominent ones among the Glories

And the Divine Powers:

His Vibhutis:

I am Vishnu among the twelve Adityas;

I am the Radiant Sun among the luminaries;

I am Marichi among the Wind Gods;

I am the Moon among the stars.

ತನ್ನ ದೈವಿಕ ಶಕ್ತಿ ಮತ್ತು ದಿವ್ಯ ವಿಭೂತಿಗಳ ಬಗ್ಗೆ ಪ್ರಮುಖವಾದವುಗಳನ್ನು ಹೇಳಲು ಉಪಕ್ರಮಿಸುತ್ತಾನೆ ಶ್ರೀ ಭಗವಂತನು. ದ್ವಾದಶ ಆದಿತ್ಯರಲ್ಲಿ ನಾನು ವಿಷ್ಣು, ಪ್ರಕಾಶಮಾನವಾದ ವಸ್ತುಗಳಲ್ಲಿ ಚಂಡಕಿರಣನಾದ ಸೂರ್ಯನು ನಾನು, ಮರುತರಲ್ಲಿ ಮರೀಚಿ ನಾನು, ನಕ್ಷತ್ರಗಳಲ್ಲಿ ಚಂದ್ರ ನಾನು.

वेदानां सामवेदोऽस्मि

देवानामस्मि वासवः।

इन्द्रियाणां मनश्चास्मि

भूतानामस्मि चेतना॥१०.२२॥

ವೇದಾನಾಂ ಸಾಮವೇದೋಽಸ್ಮಿ 

ದೇವಾನಾಮಸ್ಮಿ ವಾಸವಃ ।

ಇಂದ್ರಿಯಾಣಾಂ ಮನಶ್ಚಾಸ್ಮಿ 

ಭೂತಾನಾಮಸ್ಮಿ ಚೇತನಾ ॥ 10-22॥

वेदानां सामवेदोऽस्मि देवानामस्मि वासवः।

इन्द्रियाणां मनश्चास्मि भूतानामस्मि चेतना॥१०.२२॥

ವೇದಾನಾಂ ಸಾಮವೇದೋಽಸ್ಮಿ ದೇವಾನಾಮಸ್ಮಿ ವಾಸವಃ ।

ಇಂದ್ರಿಯಾಣಾಂ ಮನಶ್ಚಾಸ್ಮಿ ಭೂತಾನಾಮಸ್ಮಿ ಚೇತನಾ ॥ 10-22॥

22.  Among the Vedas, I am Sama Veda;

I am Indra among the Devas;

Among the senses, I am the mind;

I am the intelligence of all beings.

ವೇದಗಳಲ್ಲಿ ಸಾಮವೇದ ನಾನು, ದೇವತೆಗಳಲ್ಲಿ ಇಂದ್ರ ನಾನು. ಇಂದ್ರಿಯಗಳಲ್ಲಿ ಮನಸ್ಸು ನಾನು, ಸಮಸ್ತ ಭೂತಗಳಲ್ಲಿ ಚೇತನ ಶಕ್ತಿ ನಾನಾಗಿದ್ದೆನೆ. 

रुद्राणां  शङ्करश्चास्मि

वित्तेशो यक्षरक्षसाम्।

वसूनां पावकश्चास्मि

मेरुः शिखरिणामहम्॥१०.२३॥

ರುದ್ರಾಣಾಂ ಶಂಕರಶ್ಚಾಸ್ಮಿ 

ವಿತ್ತೇಶೋ ಯಕ್ಷರಕ್ಷಸಾಮ್ ।

ವಸೂನಾಂ ಪಾವಕಶ್ಚಾಸ್ಮಿ 

ಮೇರುಃ ಶಿಖರಿಣಾಮಹಮ್ ॥ 10-23॥

रुद्राणां शङ्करश्चास्मि वित्तेशो यक्षरक्षसाम्।

वसूनां पावकश्चास्मि मेरुः शिखरिणामहम्॥१०.२३॥

ರುದ್ರಾಣಾಂ ಶಂಕರಶ್ಚಾಸ್ಮಿ ವಿತ್ತೇಶೋ ಯಕ್ಷರಕ್ಷಸಾಮ್ ।

ವಸೂನಾಂ ಪಾವಕಶ್ಚಾಸ್ಮಿ ಮೇರುಃ ಶಿಖರಿಣಾಮಹಮ್ ॥ 10-23॥

23.  I am Shankara among the Rudras;

Among the Yakshas and Rakshasas,

I am Kubera;

I am Agni, the purifying Fire,

Among the Vasus;

Among the mountain peaks,

I am Meru.

ಏಕಾದಶ ರುದ್ರರಲ್ಲಿ ನಾನು ಶಂಕರ, ಯಕ್ಷ ಮತ್ತು ರಾಕ್ಷಸರಲ್ಲಿ ನಾನು ಧನಾಧಿಪತಿಯಾದ ಕುಬೇರ, ಅಷ್ಟವಸುಗಳಲ್ಲಿ ಅಗ್ನಿ ನಾನು ಮತ್ತು  ಶಿಖರಗಳುಳ್ಳ ಪರ್ವತಗಳಲ್ಲಿ ನಾನು ಮೇರು ಪರ್ವತ.

पुरोधसां च मुख्यं मां

विद्धि पार्थ बृहस्पतिम्।

सेनानीनामहं स्कन्दः

सरसामस्मि सागरः॥१०.२४॥

ಪುರೋಧಸಾಂ ಚ ಮುಖ್ಯಂ ಮಾಂ 

ವಿದ್ಧಿ ಪಾರ್ಥ ಬೃಹಸ್ಪತಿಮ್ ।

ಸೇನಾನೀನಾಮಹಂ ಸ್ಕಂದಃ 

ಸರಸಾಮಸ್ಮಿ ಸಾಗರಃ ॥ 10-24॥

पुरोधसां च मुख्यं मां विद्धि पार्थ बृहस्पतिम्।

सेनानीनामहं स्कन्दः सरसामस्मि सागरः॥१०.२४॥

ಪುರೋಧಸಾಂ ಚ ಮುಖ್ಯಂ ಮಾಂ ವಿದ್ಧಿ ಪಾರ್ಥ ಬೃಹಸ್ಪತಿಮ್ ।

ಸೇನಾನೀನಾಮಹಂ ಸ್ಕಂದಃ ಸರಸಾಮಸ್ಮಿ ಸಾಗರಃ ॥ 10-24॥

24.  Arjuna, know Me to be

Brihaspati, Chief among the Priests;

Among the Army Chiefs,

I am Skanda or Kumara Swamy;

I am the Sea among the Lakes.

ಎಲೈ ಅರ್ಜುನಾ! ರಾಜ ಪುರೋಹಿತರಲ್ಲಿ ಮುಖ್ಯವಾದ ಬೃಹಸ್ಪತಿಯು ನಾನೆಂದು ತಿಳಿ. ಸೇನಾಧಿಪತಿಗಳಲ್ಲಿ ನಾನು ಸ್ಕಂದ ಅಥವಾ ಕುಮಾರಸ್ವಾಮಿ, ಹಾಗೂ ಜಲಾಶಯಗಳಲ್ಲಿ ನಾನು ಸಮುದ್ರ.

महर्षीणां भृगुरहं

गिरामस्म्येकमक्षरम्।

यज्ञानां जपयज्ञोऽस्मि

स्थावराणां हिमालयः॥१०.२५॥

ಮಹರ್ಷೀಣಾಂ ಭೃಗುರಹಂ 

ಗಿರಾಮಸ್ಮ್ಯೇಕಮಕ್ಷರಮ್ ।

ಯಜ್ಞಾನಾಂ ಜಪಯಜ್ಞೋಽಸ್ಮಿ 

ಸ್ಥಾವರಾಣಾಂ ಹಿಮಾಲಯಃ ॥ 10-25॥

महर्षीणां भृगुरहं गिरामस्म्येकमक्षरम्।

यज्ञानां जपयज्ञोऽस्मि स्थावराणां हिमालयः॥१०.२५॥

ಮಹರ್ಷೀಣಾಂ ಭೃಗುರಹಂ ಗಿರಾಮಸ್ಮ್ಯೇಕಮಕ್ಷರಮ್ ।

ಯಜ್ಞಾನಾಂ ಜಪಯಜ್ಞೋಽಸ್ಮಿ ಸ್ಥಾವರಾಣಾಂ ಹಿಮಾಲಯಃ ॥ 10-25॥

25.  Among the Maharshis,

Know Me to be Bhrugu;

I am the Monosyllable AUM

Among all the utterances;

I am Japa Yagna among all Yagnas;

Among the immutable objects,

I am the Himalaya.

ಮಹರ್ಷಿಗಳಲ್ಲಿ ಭೃಗುಮಹರ್ಷಿ ನಾನು ಎಂದು ತಿಳಿದುಕೋ, ಎಲ್ಲ ಶಬ್ದಗಳಲ್ಲಿ ಏಕಾಕ್ಷರವಾದ ಪ್ರಣವ ಅರ್ಥಾತ್ ಓಂಕಾರ ನಾನು. ಎಲ್ಲ ಪ್ರಕಾರದ ಯಜ್ಞಗಳಲ್ಲಿ ನಾನು ಜಪಯಜ್ಞ ಮತ್ತು ಚಲಿಸದ ವಸ್ತುಗಳಲ್ಲಿ ನಾನು ಹಿಮಾಲಯ ಪರ್ವತ.

अश्वत्थः सर्ववृक्षाणां

देवर्षीणां च नारदः।

गन्धर्वाणां चित्ररथः

सिद्धानां कपिलो मुनिः॥१०.२६॥

ಅಶ್ವತ್ಥಃ ಸರ್ವವೃಕ್ಷಾಣಾಂ

ದೇವರ್ಷೀಣಾಂ ಚ ನಾರದಃ ।

ಗಂಧರ್ವಾಣಾಂ ಚಿತ್ರರಥಃ 

ಸಿದ್ಧಾನಾಂ ಕಪಿಲೋ ಮುನಿಃ ॥ 10-26॥

अश्वत्थः सर्ववृक्षाणां देवर्षीणां च नारदः।

गन्धर्वाणां चित्ररथः सिद्धानां कपिलो मुनिः॥१०.२६॥

ಅಶ್ವತ್ಥಃ ಸರ್ವವೃಕ್ಷಾಣಾಂ ದೇವರ್ಷೀಣಾಂ ಚ ನಾರದಃ ।

ಗಂಧರ್ವಾಣಾಂ ಚಿತ್ರರಥಃ ಸಿದ್ಧಾನಾಂ ಕಪಿಲೋ ಮುನಿಃ ॥ 10-26॥

26.  Among the trees,

Know Me to be Aswatha;

I am Narada among the Devarshis;

Among the Gandharvas,

I am Chitraratha;

I am Kapila among the Siddhas –

Those who have, from the very birth,

 Attained perfection in knowledge,

detachment and lordship.

ಸಮಸ್ತ ವೃಕ್ಷಗಳಲ್ಲಿ ನಾನು ಅಶ್ವತ್ಥ ವೃಕ್ಷವೆಂದು ತಿಳಿ, ದೇವರ್ಷಿಗಳಲ್ಲಿ ನಾನು ನಾರದಮುನಿಯು, ಗಂಧರ್ವರಲ್ಲಿ ಚಿತ್ರರಥ ನಾನು, ಹುಟ್ಟಿನಿಂದಲೇ ಜ್ಞಾನದಲ್ಲಿ ಪರಿಪಕ್ವತೆ ಪಡೆದು, ನಿರ್ಲಿಪ್ತರಾಗಿರುವ ಮತ್ತು ಶ್ರೇಷ್ಠರಾಗಿ ಸಿದ್ಧಿ ಪಡೆದ ಸಿದ್ಧರಲ್ಲಿ ಕಪಿಲಮುನಿ ನಾನು.

उच्चैश्रवसमश्वानां

विद्धि माममृतोद्भवम्।

ऐरावतं गजेन्द्राणां

नराणां च नराधिपम्॥१०.२७॥

 ಉಚ್ಚೈಃಶ್ರವಸಮಶ್ವಾನಾಂ 

ವಿದ್ಧಿ ಮಾಮಮೃತೋದ್ಭವಮ್ ।

ಐರಾವತಂ ಗಜೇಂದ್ರಾಣಾಂ 

ನರಾಣಾಂ ಚ ನರಾಧಿಪಮ್ ॥ 10-27॥

उच्चैश्रवसमश्वानां विद्धि माममृतोद्भवम्।

ऐरावतं गजेन्द्राणां नराणां च नराधिपम्॥१०.२७॥

ಉಚ್ಚೈಃಶ್ರವಸಮಶ್ವಾನಾಂ ವಿದ್ಧಿ ಮಾಮಮೃತೋದ್ಭವಮ್ ।

ಐರಾವತಂ ಗಜೇಂದ್ರಾಣಾಂ ನರಾಣಾಂ ಚ ನರಾಧಿಪಮ್ ॥ 10-27॥

27.  Among the horses,

Know Me to be Uchaisrava,

Which was born of the Sea

When it was churned for Amrita;

I am Airavata among the stately elephants;

Among the human beings,

I am their Ruler.

ಕುದುರೆಗಳಲ್ಲಿ ಅಮೃತಕ್ಕಾಗಿ ಸಮುದ್ರವನ್ನು ಕಡೆದಾಗ ಉದ್ಭವವಾದ ಉಚ್ಚೈಃಶ್ರವ ಎಂಬ ಹೆಸರಿನ ಕುದುರೆಯು ನಾನು ಎಂದು ತಿಳಿದುಕೋ. ಉತ್ತಮವಾದ ಆನೆಗಳಲ್ಲಿ, ಐರಾವತವೆಂಬ ಹೆಸರಿನ ಆನೆಯು ನಾನು ಹಾಗೂ ಮನುಷ್ಯರಲ್ಲಿ ನಾನೇ ರಾಜನೆಂದು ತಿಳಿ.

आयुधानामहं वज्रं

धेनूनामस्मि कामधुक्।

प्रजनश्चास्मि कन्दर्पः

सर्पाणामस्मि वासुकिः॥१०.२८॥

ಆಯುಧಾನಾಮಹಂ ವಜ್ರಂ 

ಧೇನೂನಾಮಸ್ಮಿ ಕಾಮಧುಕ್ ।

ಪ್ರಜನಶ್ಚಾಸ್ಮಿ ಕಂದರ್ಪಃ 

ಸರ್ಪಾಣಾಮಸ್ಮಿ ವಾಸುಕಿಃ ॥ 10-28॥

आयुधानामहं वज्रं धेनूनामस्मि कामधुक्।

प्रजनश्चास्मि कन्दर्पः सर्पाणामस्मि वासुकिः॥१०.२८॥

ಆಯುಧಾನಾಮಹಂ ವಜ್ರಂ ಧೇನೂನಾಮಸ್ಮಿ ಕಾಮಧುಕ್ ।

ಪ್ರಜನಶ್ಚಾಸ್ಮಿ ಕಂದರ್ಪಃ ಸರ್ಪಾಣಾಮಸ್ಮಿ ವಾಸುಕಿಃ ॥ 10-28॥

28.  I am Vajra, wielded by Indra,

Among the weapons;

Among the cows, I am Kamadhenu,

The wish-fulfilling cow;

I am Kandarpa, among the begetters of offspring;

Among the serpents, I am Vasuki.

ಆಯುಧಗಳಲ್ಲಿ, ಇಂದ್ರನು ಝಳಪಿಸಿದ ವಜ್ರಾಯುಧ ನಾನು. ಗೋವುಗಳಲ್ಲಿ, ಇಷ್ಟಾರ್ಥಗಳನ್ನು ಕರುಣಿಸಿರುವ ಕಾಮಧೇನು ನಾನು. ಶಾಸ್ತ್ರೋಕ್ತವಾದ ರೀತಿಯಲ್ಲಿ ಸಂತಾನೋತ್ಪತ್ತಿಗೆ ಕಾರಣನಾದ ಕಾಮದೇವನಾದ ಕಂದರ್ಪ ನಾನು ಮತ್ತು ಸರ್ಪಗಳಲ್ಲಿ ಸರ್ಪರಾಜನಾದ ವಾಸುಕಿ ನಾನು.

अनन्तश्चास्मि नागानां

वरुणो यादसामहम्।

पितॄणामर्यमा चास्मि

यमः सम्यमतामहम् ॥१०.२९॥

ಅನಂತಶ್ಚಾಸ್ಮಿ ನಾಗಾನಾಂ 

ವರುಣೋ ಯಾದಸಾಮಹಮ್ ।

ಪಿತೄಣಾಮರ್ಯಮಾ ಚಾಸ್ಮಿ 

ಯಮಃ ಸಂಯಮತಾಮಹಮ್ ॥ 10-29॥

अनन्तश्चास्मि नागानां वरुणो यादसामहम्।

पितॄणामर्यमा चास्मि यमः सम्यमतामहम् ॥१०.२९॥

ಅನಂತಶ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್ ।

ಪಿತೄಣಾಮರ್ಯಮಾ ಚಾಸ್ಮಿ ಯಮಃ ಸಂಯಮತಾಮಹಮ್ ॥ 10-29॥

29.  Among the snakes, I am their head Ananta;

I am Varuna, the King of Water-Spirits;

Among the Pitrus, the Ancestal Spirits,

I am Aryama;

I am Yama among those who command.

ಬಹು ಹೆಡೆಗಳುಳ್ಳ ನಾಗಗಳಲ್ಲಿ ಅವರ ಮುಖ್ಯಸ್ಥನಾದ ಆದಿಶೇಷನಾದ, ಅನಂತನು.NN N ನಾನು ಜಲದೇವತೆಗಳ ರಾಜನಾದ ವರುಣ ನಾನು. ಪಿತೃದೇವತೆಗಳಲ್ಲಿ ಅರ್ಯಮಾ ಎಂಬ ಹೆಸರಿನ ಪಿತೃವು ನಾನು, ಮತ್ತು ಶಾಸನ ಮಾಡುವ ನಿಯಾಮಕರಲ್ಲಿ ಯಮಧರ್ಮನು ನಾನು.

प्रह्लादश्चास्मि दैत्यानां

कालः कलयतामहम्।

मृगाणां च मृगेन्द्रोऽहं

वैनतेयश्च पक्षिणाम्॥१०.३०॥

ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ 

ಕಾಲಃ ಕಲಯತಾಮಹಮ್ ।

ಮೃಗಾಣಾಂ ಚ ಮೃಗೇಂದ್ರೋಽಹಂ 

ವೈನತೇಯಶ್ಚ ಪಕ್ಷಿಣಾಮ್ ॥ 10-30॥

प्रह्लादश्चास्मि दैत्यानां कालः कलयतामहम्।

मृगाणां च मृगेन्द्रोऽहं वैनतेयश्च पक्षिणाम्॥१०.३०॥

 ಪ್ರಹ್ಲಾದಶ್ಚಾಸ್ಮಿ ದೈತ್ಯಾನಾಂ ಕಾಲಃ ಕಲಯತಾಮಹಮ್ ।

ಮೃಗಾಣಾಂ ಚ ಮೃಗೇಂದ್ರೋಽಹಂ ವೈನತೇಯಶ್ಚ ಪಕ್ಷಿಣಾಮ್ ॥ 10-30॥

30.  I am Prahlada among the Rakshasas;

I am Time among those that keep count;

I am the Lion among the beasts;

I am Vainateya or Garuda among the birds.

ದೈತ್ಯರಾದ ರಾಕ್ಷಸರಲ್ಲಿ ಪ್ರಹ್ಲಾದ ನಾನು. ಕಾಲ ಗಣನೆ ಮಾಡುವವರಲ್ಲಿ ಕಾಲಪುರುಷನು ನಾನು. ಮೃಗಗಳಲ್ಲಿ ಮೃಗರಾಜನಾದ ಸಿಂಹ ನಾನು, ಹಾಗೂ ಪಕ್ಷಿಗಳಲ್ಲಿ ವೈನತೇಯ ಎಂದು ಎಂದು ಕರೆಯಲ್ಪಡುವ ಗರುಡಪಕ್ಷಿ ನಾನು.

पवनः पवतामस्मि

रामः शस्त्रभृतामहम्।

झषाणां मकरश्चास्मि

स्रोतसामस्मि जाह्नवी॥१०.३१॥

ಪವನಃ ಪವತಾಮಸ್ಮಿ 

ರಾಮಃ ಶಸ್ತ್ರಭೃತಾಮಹಮ್ ।

ಝಷಾಣಾಂ ಮಕರಶ್ಚಾಸ್ಮಿ 

ಸ್ರೋತಸಾಮಸ್ಮಿ ಜಾಹ್ನವೀ ॥ 10-31॥

पवनः पवतामस्मि रामः शस्त्रभृतामहम्।

झषाणां मकरश्चास्मि स्रोतसामस्मि जाह्नवी॥१०.३१॥

 ಪವನಃ ಪವತಾಮಸ್ಮಿ ರಾಮಃ ಶಸ್ತ್ರಭೃತಾಮಹಮ್ ।

ಝಷಾಣಾಂ ಮಕರಶ್ಚಾಸ್ಮಿ ಸ್ರೋತಸಾಮಸ್ಮಿ ಜಾಹ್ನವೀ ॥ 10-31॥

31.   Among the purifiers, I am the Wind;

I am Rama among those who bear arms;

I am the Shark among the aquatic creatures;

I am the Ganga among the water-flows.

ಪರಿಶುದ್ಧಗೊಳಿಸುವ ಪಾವಕರಲ್ಲಿ ವಾಯು ನಾನು. ಶಸ್ತ್ರಧಾರಿಗಳಲ್ಲಿ ಶ್ರೀರಾಮನು ನಾನು. ಜಲಚರಗಳಲ್ಲಿ ಮಕರ ನಾನು ಮತ್ತು ಹರಿಯುವ ನದಿಗಳಲ್ಲಿ ಗಂಗಾನದಿಯು ನಾನು.

सर्गाणामादिरन्तश्च

मध्यं चैवाहमर्जुन।

अध्यात्मविद्या विद्यानां

वादः प्रवदतामहम्॥१०.३२॥

ಸರ್ಗಾಣಾಮಾದಿರಂತಶ್ಚ 

ಮಧ್ಯಂ ಚೈವಾಹಮರ್ಜುನ ।

ಅಧ್ಯಾತ್ಮವಿದ್ಯಾ ವಿದ್ಯಾನಾಂ 

ವಾದಃ ಪ್ರವದತಾಮಹಮ್ ॥ 10-32॥

सर्गाणामादिरन्तश्च मध्यं चैवाहमर्जुन।

अध्यात्मविद्या विद्यानां वादः प्रवदतामहम्॥१०.३२॥

ಸರ್ಗಾಣಾಮಾದಿರಂತಶ್ಚ ಮಧ್ಯಂ ಚೈವಾಹಮರ್ಜುನ ।

ಅಧ್ಯಾತ್ಮವಿದ್ಯಾ ವಿದ್ಯಾನಾಂ ವಾದಃ ಪ್ರವದತಾಮಹಮ್ ॥ 10-32॥

32.  O Arjuna,

I am the beginning, the end

As well as the middle of all the things

In Creation;

Among the sciences,

I am the science that deals with Knowledge

And Realisation of the Supreme Self;

Among various kinds of arguments,

Like tarka, vitanda and jalpa,

I represent tarka, the mode

Of reasoned discussion.

ಹೇ ಅರ್ಜುನಾ! ಎಲ್ಲ ಸೃಷ್ಟಿಗಳ ಆದಿ, ಮಧ್ಯ ಮತ್ತು ಅಂತ್ಯವು ನಾನೇ ಆಗಿದ್ದೇನೆ. ಎಲ್ಲ ವಿದ್ಯೆಗಳಲ್ಲಿ, ಆಧ್ಯಾತ್ಮ ವಿದ್ಯೆ ಅರ್ಥಾತ್ ಬ್ರಹ್ಮವಿದ್ಯೆ ನಾನು. ತರ್ಕ, ವಿತಂಡ ಮತ್ತು ಜಲ್ಪ ಎಂಬ ವಿವಿಧ ವಾದ ತತ್ವಗಳಲ್ಲಿ, ತಾರ್ಕಿಕರಲ್ಲಿ ತತ್ವ ನಿರ್ಣಯಕ್ಕಾಗಿ ಮಂಡಿಸುವ ವಾದಗಳಲ್ಲಿ, ತರ್ಕವನ್ನು ಪ್ರತಿನಿಧಿಸುತ್ತೇನೆ ನಾನು.

अक्षराणामकारोऽस्मि 

द्वन्द्वः सामासिकस्य च।

अहमेवाक्षयः कालो 

धाताहं विश्वतोमुखः॥१०.३३॥

ಅಕ್ಷರಾಣಾಮಕಾರೋಽಸ್ಮಿ 

ದ್ವಂದ್ವಃ ಸಾಮಾಸಿಕಸ್ಯ ಚ ।

ಅಹಮೇವಾಕ್ಷಯಃ ಕಾಲೋ 

ಧಾತಾಹಂ ವಿಶ್ವತೋಮುಖಃ ॥ 10-33॥

अक्षराणामकारोऽस्मि द्वन्द्वः सामासिकस्य च।

अहमेवाक्षयः कालो धाताहं विश्वतोमुखः॥१०.३३॥

ಅಕ್ಷರಾಣಾಮಕಾರೋಽಸ್ಮಿ ದ್ವಂದ್ವಃ ಸಾಮಾಸಿಕಸ್ಯ ಚ ।

ಅಹಮೇವಾಕ್ಷಯಃ ಕಾಲೋ ಧಾತಾಹಂ ವಿಶ್ವತೋಮುಖಃ ॥ 10-33॥

33.  I am the letter “अ” “a” among all the letters;

Among the compound expressions, samasas,

I am dwandwa – a compound expression

In which both the units are equal in importance;

I alone am the Imperishable Time;

I am Dhata, Dispenser of the fruits of actions

In the entire world.

ಎಲ್ಲ ಅಕ್ಷರಗಳಲ್ಲಿ “ಅ” ಕಾರವು ನಾನು. ಸಮಾಸಗಳಲ್ಲಿ, ಎರಡೂ ಪದಗಳಿಗೆ ಸಮಾನ ಪ್ರಾಧಾನ್ಯವನ್ನು ನೀಡಿ ಸಂಯೋಗಪದವಾಗುವ ದ್ವಂದ್ವ ಸಮಾಸವು ನಾನು. ಅಕ್ಷಯವಾದ ಕಾಲವು ನಾನೊಬ್ಬನೇ ಆಗಿದ್ದೇನೆ. ಸಮಸ್ತ ಜಗತ್ತಿನಲ್ಲಿ ಕರ್ಮಫಲವನ್ನು ಹಂಚುವ, ಸರ್ವಭರ್ತನು, ಸರ್ವವ್ಯಾಪಕನೂ ಆದ ಧಾತೃ ನಾನೇ.

मृत्युः सर्वहरश्चाहं

उद्भवश्च भविष्यताम्।

कीर्तिः श्रीर्वाक्च नरीणां

स्मृतिर्मेधा धृतिः क्षमा॥१०.३४॥

ಮೃತ್ಯುಃ ಸರ್ವಹರಶ್ಚಾಹಂ

ಉದ್ಭವಶ್ಚ ಭವಿಷ್ಯತಾಮ್ ।

ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ 

ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥ 10-34॥

मृत्युः सर्वहरश्चाहं उद्भवश्च भविष्यताम्।

कीर्तिः श्रीर्वाक्च नरीणां स्मृतिर्मेधा धृतिः क्षमा॥१०.३४॥

ಮೃತ್ಯುಃ ಸರ್ವಹರಶ್ಚಾಹಂ ಉದ್ಭವಶ್ಚ ಭವಿಷ್ಯತಾಮ್ ।

ಕೀರ್ತಿಃ ಶ್ರೀರ್ವಾಕ್ಚ ನಾರೀಣಾಂ ಸ್ಮೃತಿರ್ಮೇಧಾ ಧೃತಿಃ ಕ್ಷಮಾ ॥ 10-34॥

34.  Know Me to be Death

That carries everything away;

I am the Origin of things yet to be;

Of women, I am Fame, Glory,

Speech, Memory, Intelligence,

Endurance and Patience.

ನಾನು ಎಲ್ಲವನ್ನೂ ನಾಶಪಡಿಸಿ ಕೊಂಡೊಯ್ಯುವ ಮೃತ್ಯು ಎಂದು ತಿಳಿ. ಭವಿಷ್ಯದ ಉತ್ಪತ್ತಿಗೆ ಕಾರಣನು ನಾನು. ಸ್ತ್ರೀಯರಲ್ಲಿ ಕೀರ್ತಿ, ಭವ್ಯತೆ, ಮಾತಿನ ಮಾಧುರ್ಯ ಸ್ಮೃತಿ, ಮೇಧಾಶಕ್ತಿ, ಧೃಢತೆ ಮತ್ತು ಸಹನೆ ನಾನಾಗಿದ್ದೇನೆ.

बृहत्साम तथा साम्नां

गायत्री छन्दसामहम्।

मासानां मार्गशीर्षोऽहं

ऋतूनां कुसुमाकरः॥१०.३५॥ 

ಬೃಹತ್ಸಾಮ ತಥಾ ಸಾಮ್ನಾಂ 

ಗಾಯತ್ರೀ ಛಂದಸಾಮಹಮ್ ।

ಮಾಸಾನಾಂ ಮಾರ್ಗಶೀರ್ಷೋಹಂ

ಋತೂನಾಂ ಕುಸುಮಾಕರಃ ॥ 10-35॥

बृहत्साम तथा साम्नां गायत्री छन्दसामहम्।

मासानां मार्गशीर्षोऽहं ऋतूनां कुसुमाकरः॥१०.३५॥ 

ಬೃಹತ್ಸಾಮ ತಥಾ ಸಾಮ್ನಾಂ ಗಾಯತ್ರೀ ಛಂದಸಾಮಹಮ್ ।

ಮಾಸಾನಾಂ ಮಾರ್ಗಶೀರ್ಷೋಹಂ ಋತೂನಾಂ ಕುಸುಮಾಕರಃ ॥ 10-35॥

35.  Among the melodies of Sama Veda,

I am the chief one called Bruhat Sama;

Among the Vedic mantras,

I am Gayatri;

Among the months,

I am Margasirsha;

Among the seasons,

I am Spring or Vasanta,

Teeming with flowers.

ಗಾಯನ ಮಾಡಲು ಯೋಗ್ಯವಾದ ಸಾಮವೇದದಲ್ಲಿನ ಸ್ತೋತ್ರಗಳಲ್ಲಿ ಪ್ರಧಾನವಾದ ಬೃಹತ್ ಸಾಮ ನಾನಾಗಿದ್ದೇನೆ. ವೇದ ಮಂತ್ರಗಳ ಛಂದಸ್ಸುಗಳಲ್ಲಿ ಗಾಯತ್ರಿ ಛಂದಸ್ಸು ನಾನು. ಮಾಸಗಳಲ್ಲಿ ನಾನು ಮಾರ್ಗಶೀರ್ಷವಾಗಿದ್ದೇನೆ, ಮತ್ತು ಋತುಗಳಲ್ಲಿ ಪುಷ್ಪಗಳಿಂದ ನಳನಳಿಸುವ ವಸಂತ ನಾನು.

द्यूतं छलयतामस्मि

तेजस्तेजस्विनामहम्।

जयोऽस्मि व्यवसायोस्मि

सत्वं सत्ववतामहम्॥१०.३६॥

ದ್ಯೂತಂ ಛಲಯತಾಮಸ್ಮಿ 

ತೇಜಸ್ತೇಜಸ್ವಿನಾಮಹಮ್ ।

ಜಯೋಽಸ್ಮಿ ವ್ಯವಸಾಯೋಽಸ್ಮಿ 

ಸತ್ತ್ವಂ ಸತ್ತ್ವವತಾಮಹಮ್ ॥ 10-36॥

द्यूतं छलयतामस्मि तेजस्तेजस्विनामहम्।

जयोऽस्मि व्यवसायोस्मि सत्वं सत्ववतामहम्॥१०.३६॥

ದ್ಯೂತಂ ಛಲಯತಾಮಸ್ಮಿ ತೇಜಸ್ತೇಜಸ್ವಿನಾಮಹಮ್ ।

ಜಯೋಽಸ್ಮಿ ವ್ಯವಸಾಯೋಽಸ್ಮಿ ಸತ್ತ್ವಂ ಸತ್ತ್ವವತಾಮಹಮ್ ॥ 10-36॥

36.  For those who practice cheating,

I am the game of dice;

I am the Vigor of the Vigorous people;

I am the Victory of the Victorious persons;

I am the Resolve of the Resolute people;

I am the Virtue of the Virtuous persons.

ಕಪಟ ಮಾಡಿ ಮೋಸ ಕೃತ್ಯಗಳನ್ನು ಎಸಗುವವರ ಪಾಲಿಗೆ ದ್ಯೂತದ ಗರ ನಾನಾಗಿದ್ದೇನೆ. ತೇಜಶ್ಶಾಲಿಗಳಲ್ಲಿನ ತೇಜಸ್ಸು ನಾನು. ಜಯಶಾಲಿಗಳಲ್ಲಿನ ಜಯವು ನಾನು. ಧೃಢ ನಿಶ್ಚಯ ಮಾಡುವವರ ನಿಶ್ಚಯಾತ್ಮಕ ಬುದ್ಧಿ ನಾನು. ಸಾತ್ವಿಕ ಪುರುಷರ ಸಾತ್ವಿಕ ಭಾವ ನಾನು.

वृष्णीनां वासुदेवोऽस्मि

पाण्डवानां धनञ्जयः।

मुनीनामप्यहं व्यासः

कवीनामुशना कविः॥१०.३७॥

ವೃಷ್ಣೀನಾಂ ವಾಸುದೇವೋಽಸ್ಮಿ 

ಪಾಂಡವಾನಾಂ ಧನಂಜಯಃ ।

ಮುನೀನಾಮಪ್ಯಹಂ ವ್ಯಾಸಃ 

ಕವೀನಾಮುಶನಾ ಕವಿಃ ॥ 10-37॥

वृष्णीनां वासुदेवोऽस्मि पाण्डवानां धनञ्जयः।

मुनीनामप्यहं व्यासः कवीनामुशना कविः॥१०.३७॥

ವೃಷ್ಣೀನಾಂ ವಾಸುದೇವೋಽಸ್ಮಿ ಪಾಂಡವಾನಾಂ ಧನಂಜಯಃ ।

ಮುನೀನಾಮಪ್ಯಹಂ ವ್ಯಾಸಃ ಕವೀನಾಮುಶನಾ ಕವಿಃ ॥ 10-37॥

37.  I am Vasudeva

Among the members of Yadava clan;

I am Arjuna among the Pandavas;

I am Vyasa among the silent, contemplative sages;

I am Usana or Shukra

Among the far-sighted Rishis.

ವೃಷ್ಣಿವಂಶದ ಯಾದವ ಜನರಲ್ಲಿ ವಾಸುದೇವ ನಾನು. ಪಾಂಡವರಲ್ಲಿ ನಾನು ಅರ್ಜುನ. ಮೌನ ಮತ್ತು ಧ್ಯಾನಾಸಕ್ತ ಮುನಿಗಳಲ್ಲಿ ವೇದವ್ಯಾಸನು ನಾನು, ಹಾಗೂ ಮಹಾಚಿಂತಕರಾದ ಕವಿಗಳಲ್ಲಿ ಉಶನಾ ಎಂದು ಕರೆಯಲ್ಪಡುವ ಶುಕ್ರಾಚಾರ್ಯನು ನಾನು. 

दण्डो दमयतामस्मि

नीतिरस्मि जिगीषताम्।

मौनं चास्मि गुह्यानां

ज्ञानं ज्ञानवतामहम्॥१०.३८॥

ದಂಡೋ ದಮಯತಾಮಸ್ಮಿ 

ನೀತಿರಸ್ಮಿ ಜಿಗೀಷತಾಮ್ ।

ಮೌನಂ ಚೈವಾಸ್ಮಿ ಗುಹ್ಯಾನಾಂ 

ಜ್ಞಾನಂ ಜ್ಞಾನವತಾಮಹಮ್ ॥ 10-38॥

दण्डो दमयतामस्मि नीतिरस्मि जिगीषताम्।

मौनं चास्मि गुह्यानां ज्ञानं ज्ञानवतामहम्॥१०.३८॥

ದಂಡೋ ದಮಯತಾಮಸ್ಮಿ ನೀತಿರಸ್ಮಿ ಜಿಗೀಷತಾಮ್ ।

ಮೌನಂ ಚೈವಾಸ್ಮಿ ಗುಹ್ಯಾನಾಂ ಜ್ಞಾನಂ ಜ್ಞಾನವತಾಮಹಮ್ ॥ 10-38॥

38.  I am the rod used to inflict punishment;

I am the strategy for those

Who seek victory;

I am silence for those

Who maintain secrecy;

Of the learned people, I am the knowledge.

ಶಾಸನದ ಅವಿಧೇಯತೆಯನ್ನು ದಮನಿಸಲು ಶಿಕ್ಷೆಯನ್ನು ಜಾರಿಮಾಡಲು ಬಳಸುವ ದಂಡವು ನಾನು. ಜಯದ ಅಭಿಲಾಷಿಗಳಲ್ಲಿ ಇರುವಂತಹ ನೀತಿ ನಾನು. ಗೌಪ್ಯವನ್ನು ಉಳಿಸಿಕೊಳ್ಳುವವರ ಪಾಲಿನ ಮೌನ ನಾನು, ಮತ್ತು ಜ್ಞಾನವಂತರಲ್ಲಿನ ಜ್ಞಾನವು ನಾನೇ ಆಗಿದ್ದೇನೆ.

यच्चापि सर्वभूतानां

बीजं तदहमर्जुन।

न तदस्ति विना यत्स्यात्

मया भूतं चराचरम्॥१०.३९ll

ಯಚ್ಚಾಪಿ ಸರ್ವಭೂತಾನಾಂ 

ಬೀಜಂ ತದಹಮರ್ಜುನ ।

ನ ತದಸ್ತಿ ವಿನಾ ಯತ್ಸ್ಯಾತ್

ಮಯಾ ಭೂತಂ ಚರಾಚರಮ್ ॥ 10-39॥

यच्चापि सर्वभूतानां बीजं तदहमर्जुन।

न तदस्ति विना यत्स्यात् मया भूतं चराचरम्॥१०.३९ll

ಯಚ್ಚಾಪಿ ಸರ್ವಭೂತಾನಾಂ ಬೀಜಂ ತದಹಮರ್ಜುನ ।

ನ ತದಸ್ತಿ ವಿನಾ ಯತ್ಸ್ಯಾತ್ ಮಯಾ ಭೂತಂ ಚರಾಚರಮ್ ॥ 10-39॥

39.   Arjuna,

I am that which is the seed

or the root cause of all beings;

In fact, i am that without which

nothing, mobile or static, can ever exist.

ಅರ್ಜುನಾ, ಸರ್ವ ಭೂತಗಳಿಗೆ, ಅವುಗಳ ಉತ್ಪತ್ತಿ ಹಾಗೂ ಅಸ್ತಿತ್ವದ ಮೂಲ ಕಾರಣ ಬೀಜ ನಾನು. ಸರಿಯಾಗಿ ಹೇಳಬೇಕೆಂದರೆ ಚರಾಚರ ವಸ್ತುಗಳಲ್ಲಿ ನಾನಿಲ್ಲದ ವಸ್ತು ಯಾವುದೂ ಇಲ್ಲ.

नान्तोऽस्ति मम दिव्यानां

विभूतीनां परन्तप।

एष तूद्देशतः प्रोक्तो

विभूतेर्विस्तरो मया॥१०.४०॥

ನಾಂತೋಽಸ್ತಿ ಮಮ ದಿವ್ಯಾನಾಂ 

ವಿಭೂತೀನಾಂ ಪರಂತಪ ।

ಏಷ ತೂದ್ದೇಶತಃ ಪ್ರೋಕ್ತೋ 

ವಿಭೂತೇರ್ವಿಸ್ತರೋ ಮಯಾ ॥ 10-40॥

नान्तोऽस्ति मम दिव्यानां विभूतीनां परन्तप।

एष तूद्देशतः प्रोक्तो विभूतेर्विस्तरो मया॥१०.४०॥

ನಾಂತೋಽಸ್ತಿ ಮಮ ದಿವ್ಯಾನಾಂ ವಿಭೂತೀನಾಂ ಪರಂತಪ ।

ಏಷ ತೂದ್ದೇಶತಃ ಪ್ರೋಕ್ತೋ ವಿಭೂತೇರ್ವಿಸ್ತರೋ ಮಯಾ ॥ 10-40॥

40. Arjuna,

There is no limit to My Divine Powers.

What has been said so far

Is just illustrative of the extent

Of My Supreme Power.

ಅರ್ಜುನಾ! ನನ್ನ ದೈವಿಕ ಶಕ್ತಿಗಳಿಗೆ ಯಾವುದೇ ಪರಿಮಿತಿಯಿಲ್ಲ. ನನ್ನ ದಿವ್ಯ ವಿಭೂತಿಗಳಿಗೆ ಕೊನೆಯಿಲ್ಲ. ಇಲ್ಲಿಯವರಿಗೆ ನಿನಗೆ ಹೇಳಲಾದ ನನ್ನ ವಿಭೂತಿಯ ವಿಸ್ತಾರವು, ನಿನಗೆ ನನ್ನ ಅಲೌಕಿಕ ಶಕ್ತಿಯನ್ನು ವಿವರಿಸುವ ಸಂಕ್ಷಿಪ್ತ ಪರಿಚಯವಾಗಿದೆ.

यद्यद्विभूतिमत्सत्वं

श्रीमदूर्जितमेव वा।

तत्तदेवावगच्छ त्वं

मम तेजोंऽशसम्भवम्॥१०.४१

ಯದ್ಯದ್ವಿಭೂತಿಮತ್ಸತ್ತ್ವಂ 

ಶ್ರೀಮದೂರ್ಜಿತಮೇವ ವಾ ।

ತತ್ತದೇವಾವಗಚ್ಛ ತ್ವಂ 

ಮಮ ತೇಜೋಂಽಶಸಂಭವಮ್ ॥ 10-41॥

यद्यद्विभूतिमत्सत्वं श्रीमदूर्जितमेव वा।

तत्तदेवावगच्छ त्वं मम तेजोंऽशसम्भवम्॥१०.४१

ಯದ್ಯದ್ವಿಭೂತಿಮತ್ಸತ್ತ್ವಂ ಶ್ರೀಮದೂರ್ಜಿತಮೇವ ವಾ ।

ತತ್ತದೇವಾವಗಚ್ಛ ತ್ವಂ ಮಮ ತೇಜೋಂಽಶಸಂಭವಮ್ ॥ 10-41॥

41.  Whatever be the object or being

that has power, glory or energy,

know that to have been derived

from a part of My Divine Splendor.

ಯವ್ಯಾವುದು ವಿಭೂತಿಯುಕ್ತವಾಗಿವೆಯೋ, ಅರ್ಥಾತ್, ಐಶ್ವರ್ಯಯುಕ್ತವಾದ ಕಾಂತಿಯುಕ್ತವಾದ ಮತ್ತು ಶಕ್ತಿಯುಕ್ತವಾದ ವಸ್ತುಗಳಿವೆಯೋ ಅವೆಲ್ಲವೂ ನನ್ನ ತೇಜಸ್ಸಿನ ಒಂದು ಅಂಶದಿಂದ ಉಂಟಾದುದೆಂದು ತಿಳಿದುಕೋ.

अथवा बहुनैतेन  

किं ज्ञानेन तवार्जुन।

विष्टभ्याहमिदं कृत्स्नं

एकांशेन स्थितो जगत्॥१०.४२॥

ಅಥವಾ ಬಹುನೈತೇನ 

ಕಿಂ ಜ್ಞಾತೇನ ತವಾರ್ಜುನ ।

ವಿಷ್ಟಭ್ಯಾಹಮಿದಂ ಕೃತ್ಸ್ನಂ

ಏಕಾಂಶೇನ ಸ್ಥಿತೋ ಜಗತ್ ॥ 10-42॥

अथवा बहुनैतेन  किं ज्ञातेन तवार्जुन।

विष्टभ्याहमिदं कृत्स्नं एकांशेन स्थितो जगत्॥१०.४२॥

ಅಥವಾ ಬಹುನೈತೇನ ಕಿಂ ಜ್ಞಾತೇನ ತವಾರ್ಜುನ ।

ವಿಷ್ಟಭ್ಯಾಹಮಿದಂ ಕೃತ್ಸ್ನಂ ಏಕಾಂಶೇನ ಸ್ಥಿತೋ ಜಗತ್ ॥ 10-42॥

42.  Arjuna,

What benefit do you gain

By knowing all My Divine Powers?

Suffice it to know

That it is just with a fragment

Or a mere quarter of My Divine Power

And Glory

That I bring the entire Universe

Into Existence,

I spread Myself all over the Universe,

And keep it steady

By abiding in it.

ಅರ್ಜುನಾ, ನನ್ನ ಎಲ್ಲಾ ದೈವಿಕ ಶಕ್ತಿಯನ್ನು ಅರಿತುಕೊಂಡು ನಿನಗಾಗುವ ಪ್ರಯೋಜನವೇನು?

ನನ್ನ ದಿವ್ಯ ಶಕ್ತಿಯ ಕಾಲಂಶವನ್ನು ಅಥವಾ ಒಂದು ಭಾಗವನ್ನು ತಿಳಿದುಕೊಂಡರೆ ಸಾಕು. ನಾನೇ ಸಕಲ ಸೃಷ್ಟಿಗೆ ಕಾರಣಕರ್ತ. ಇಡೀ ವಿಶ್ವದಲ್ಲಿ ನಾನು ಪಸರಿಸಿದ್ದೇನೆ ಹಾಗೂ ಅದನ್ನು ಸ್ಥಿರವಾಗಿ ಒಂದಾಗಿ ಹಿಡಿದಿಟ್ಟು ಕೊಂಡಿದ್ದೇನೆ. ನಾನು ಈ ಸಂಪೂರ್ಣ ಜಗತ್ತನ್ನು ನನ್ನ ಯೋಗಶಕ್ತಿಯ ಒಂದಂಶ ಮಾತ್ರದಿಂದ ಧರಿಸಿಕೊಂಡು ಸ್ಥಿತನಾಗಿದ್ದೇನೆ.

ऒम् तत्सदिति                       ಓಂ ತತ್ಸದಿತಿ

श्रीमद्भगवद्गितासू                ಶ್ರೀಮದ್ಭಗವದ್ಗೀತಾಸೂ

उपनिषत्सु                               ಉಪನಿಷತ್ಸು

ब्रह्म विद्यायां                       ಬ್ರಹ್ಮವಿದ್ಯಾಯಾಂ

यॊगशास्त्रॆ                            ಯೋಗಶಾಸ್ತ್ರೇ

श्रीकृष्णार्जुनसंवादॆ               ಶ್ರೀಕೃಷ್ಣಾರ್ಜುನಸಂವಾದೇ

विभूतियोगो नाम                   ವಿಭೂತಿಯೋಗೋ ನಾಮ 

दशमोऽध्यायः                        ದಶಮೋಽಧ್ಯಾಯಃ 

 ऒं ततसत्                             ಓಂ ತತ್ಸತ್ 

 ಓಮ್ ತತ್ ಸತ್ ಇತಿ

ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಸ್ತ್ರವೂ, ಶ್ರೀ ಕ್ರೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ ವಿಭೂತಿಯೋಗವೆಂಬ ಹೆಸರಿನ ಹತ್ತನೆಯ ಅಧ್ಯಾಯವು ಮುಗಿದುದು.

Primary Sidebar

A SLOKA A DAY VISHNUSAHASRANAMA VIDEOS

Please select the video by clicking the Playlist.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21

Recent Articles

  • June 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 41
  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24

Copyright © 2025 · Lanka Krishna Murti Foundation