Article of the Month July 2018
ಹಿಂದಿನ ಸಂಚಿಕೆಯಿಂದ ಮುಂದುವರಿಯುತ್ತಿದೆ )
ಧರ್ಮದ ಬೀಜಾಕ್ಷರಗಳು
–ಲಂಕಾ ಕೃಷ್ಣ ಮೂರ್ತಿ
ದಾನ
- ಸಂವಿಭಾಗ
ಮನುಸ್ಮೃತಿಯ 4ನೇ ಅಧ್ಯಾಯದ 32ನೇ ಶ್ಲೋಕವು ಗೃಹಸ್ಥ ಧರ್ಮಗಳಲ್ಲಿ ಸಂವಿಭಾಗವನ್ನು ಸೇರಿಸಿದೆ.
ಸಂವಿಭಾಗಶ್ಚ ಭೂತೇಭ್ಯಃ ಕರ್ತವ್ಯೋನುಪರೋಧಕಃ!!
ಅಂದರೆ, ತನಗೂ ತನ್ನ ಪೋಷ್ಯ ವರ್ಗಕ್ಕೂ ತೊಂದರೆಯುನ್ನುಂಟುಮಾಡಿಕೊಳ್ಳದೆ ಹೆಚ್ಚಗಿರುವುದನ್ನು ಇತರ ಪ್ರಾಣಿಗಳಿಗೆ ಹಂಚಬೇಕು ಎಂದು ಅಲ್ಲಿ ಹೇಳಲ್ಪಟ್ಟಿದೆ. ಭಾಗವತ ಪುರಾಣದ ಸಪ್ತಮಸ್ಕಂದದ 11ನೇ ಅಧ್ಯಾಯದಲ್ಲಿ ಸನಾತನ ಧಮವನ್ನು ವರ್ಣಿಸುತ್ತ ಸಮಸ್ತ ಮಾನವರೂ ಪರಿಪಾಲಿಸಬೇಕಾದ ಧರ್ಮಗಳಲ್ಲಿ-
ಅನ್ನದ್ಯಾದೇಃ ಸಂವಿಭಾಗೋ ಭೂತೇಭ್ಯಶ್ಚಯಥಾರ್ತಃ
ತೇಷ್ಟಾತ್ಮ ದೇವತಾ ಬುದ್ಧಿಃ ಸುತರಾಂ ನೃಷು ಪಾಂಡವ!!
ಅಂದರೆ ಆಹಾರ ಮುಂತಾದವುಗಳನ್ನು ಮನುಷ್ಯರೇ ಮೊದಲಾದ ಎಲ್ಲ ಪ್ರಾಣಿಗಳಿಗೂ ಅವುಗಳಿಗೆ ತಕ್ಕಂತೆ ಹಂಚಬೇಕೆಂದೂ, ಇವುಗಳಲ್ಲಿ ತಾನು ಉಪಾಸಿಸುವ ದೇವರನ್ನು ಕಾಣಬೇಕೆಂದೂ ಹೇಳಲ್ಪಟ್ಟಿದೆ.
ಮಹಾಭಾರತದ ಶಾಂತಿಪರ್ವದಲ್ಲಿನ ಪರಾಶರ ಗೀತೆಯಲ್ಲಿ (296ನೇ ಅಧ್ಯಾಯದಲ್ಲಿ) ಸರ್ವಮಾನವ ಸಾಧಾರಣಗಳಾದ ಧರ್ಮಗಳಲ್ಲಿ
“ ಸಂವಿಭಾಗಿತೆ” ಯನ್ನು ಸೇರಿಸಲಾಗಿದೆ.
ಅನೃಶಂಸ್ಯ ಮಹಿಂಸಾಚಾಪ್ರಮಾದಃ ಸಂವಿಭಾಗಿತಾ
ಶ್ರಾದ್ಧ ಕರ್ಮಾತಿಥೇಯಂ ಚ ಸತ್ಯಮಕ್ರೋಧಏವಚ!
ಸ್ವೇಷು ದಾರೇಷು ಸಂತೋಷಃ ಶೌಚಂ ನಿತ್ಯಾನಸೂಯತಾ!
ಆತ್ಮಜ್ಞಾನಂ ತಿತಿಕ್ಷಾಚ ಧರ್ಮಾಃ ಸಾಧಾರಣಾ ನೃಪ!!
ಇದರಿಂದ ಸಮಸ್ತ ಮಾನವರೂ ಆತ್ಮಜ್ಞಾನವನ್ನು ಸಂಪಾದಿಸಿ, ಶುಚಿರ್ಭೂತರಾಗಿ, ದಮ, ದಾನ ಮತ್ತು ದಯೆಯುಳ್ಳವರಾಗಿ, ದೇವ ಪಿತೃ ಕಾರ್ಯಾಸಕ್ತರಾಗಿ ಬಾಳಬೇಕೆಂಬುದು ಸನಾತನ ಧರ್ಮದ ಉದ್ದೇಶವೆಂದು ತಿಳಿಯುತ್ತಿರುವಾಗ ಧರ್ಮಪರರೂ ಜ್ಞಾನಿಗಳೂ ಆದ ಸಮಸ್ತ ಮಾನವರಲ್ಲೂ ಕೀಳು ಮೇಲು ಎಂಬ ಭಾವನೆಗೆ ಅವಕಾಶವೆಲ್ಲಿದೆ? ವರ್ಣಾಶ್ರಮಾದಿ ವಿಶೇಷ ಧರ್ಮಗಳನ್ನು, ಸುಗಮವಾಗಿ ಲೋಕ ವ್ಯವಹಾರ ನಡೆಯುವ ಉದ್ದೇಶವೆಂದಿಂದಲೂ, ಮಾನವ ಪ್ರಕೃತಿಯನ್ನು ಚೆನ್ನಾಗಿ ಗಮನಿಸಿ ಮಾನವರನ್ನು ಸಂಸ್ಕರಿಸಲು ಒಂದು ಉತ್ತಮವಿಧಾನವನ್ನಾಗಿಯು ಹೇಳಿದ್ದಾರೆ. ಮೇಲೆ ಹೇಳಿದ ಮಾನವ ಸಾಮಾನ್ಯ ಧರ್ಮಗಳಲ್ಲಿ ನಿಜವಾದ
ಆಸಕ್ತಿ ಉಳ್ಳ ಯಾವ ಮಾನವನೂ ವರ್ಣಾಶ್ರಮ ಧರ್ಮವನ್ನು ಆಕ್ಷೇಪಿಸುವುದಿಲ್ಲವೆಂದು ಧೃಢವಾಗಿ ಹೇಳಬಹುದು. ಅಂತಹವರು ಲೋಕವ್ಯವಹಾರಕ್ಕಾಗಿ ಆಯಾ ಮಾನವರಲ್ಲಿ ಏರ್ಪಟ್ಟಿರುವ ಬೇರೆ ಯಾವ ವಿಧವಾದ ಸಮಾಜರಚನೆಯನ್ನೂ ಆಕ್ಷೇಪಿಸುವುದಿಲ್ಲ. ಕಾರಣ ಸಮಾಜರಚನೆ ಹೆಚ್ಚು ಕಡಿಮೆ ಹೇಗಿದ್ದರೂ, ಮೇಲ್ಕಂಡ ಮಾನವಧರ್ಮವೊಂದು ತೇಜಸ್ವಿಯಾಗಿದ್ದರೆ ಯಾವಕುಂದು ಕೊರತೆಗಳಿಗೂ ಅವಕಾಶವಿರುವುದಿಲ್ಲ.
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)
Leave a Reply