• Skip to primary navigation
  • Skip to main content
  • Skip to primary sidebar
Lanka Krishna Murti Foundation

Lanka Krishna Murti Foundation

  • Home
  • Aims & Objectives
  • Contact Us
  • Photos
  • Videos
  • E BOOKS
  • Disclaimer
  • SAADHANA MAARGA HANDBOOK ONE TO THREE
    • SAADHANA MAARGA HANDBOOK ONE (ENGLISH AND KANNADA)
      • INTRODUCTION
      • VANDE GURU PARAMPARAM – Guru Sishya Relationships
      • GURUVASTAKAM
    • SAADHANA MAARGA HANDOOK TWO(ENGLISH AND KANNADA)
      • Sanathana Dharma: Principles and Practices
      • Nitya Karma Anushthana
      • Prasnottara Rathnamaalikaa
      • SUBHASHTAS
      • A SHUBHASHITA A DAY (1-300)
    • SAADHANA MAARGA HANDBOOK THREE(ENGLISH AND KANNADA)
      • Hatha Yoga: Guide to Meditation
      • Guided Chakra Meditation
  • SAADHANA MAARGA HANDBOOK  FOUR AND FIVE
    • SAADHANA MAARGA HANDBOOK FOUR(ENGLISH AND KANNADA)
      • Introduction
      • Pratah Smarana Stotram
      • Nirvana Shatkam
      • NARAYANA  SUKTAM
      • Dvaa Suparna: Two Birds
      • Shiva Maanasa Pooja
      • Self-Awakening (Audio)
      • Dakshina Murti Stotram
      • Dasasloki
      • Purusha Suktam
      • Sree Suktam
      • Moha Mudgaram (Bhajagovindam)
    • SAADHANA MAARGA HANDBOOK FIVE(ENGLISH AND KANNADA)
      • Tattva Bodha
      • Aparoksanubhuti
  • Vishnushasranama A Sloka A Day
    • SRI VISHNUSAHASRANAMAM(Sanskrit, English and Kannada)
    • ಶ್ರೀ ವಿಷ್ಣುಸಹಸ್ರನಾಮ
  • Bhagavad Gita
    • SRIMAD BHAGAVAD GITA CHAPTER 1
    • SRIMAD BHAGAVAD GITA CHAPTER 2
    • SRIMAD BHAGAVAD GITA CHAPTER 3
    • SRIMAD BHAGAVADGITA CHAPTER 4
    • SRIMADBHAGAVADGITA CHAPTER 5
    • SRIMADBHAGAVADGITA CHAPTER 6
    • SRIMADBHAGAVADGITA CHAPTER 7
    • SRIMADBHAGAVADGITA CHAPTER 8
    • SRIMADBHAGAVADGITA CHAPTER 9
    • Srimadbhagavadgita Chapter 10
    • SRIMADBHAGAVADGITA CHAPTER 11
    • SRIMADBHAGAVADGITA CHAPTER 12
    • SRIMADBHAGAVADGITA CHAPTER 13
    • SRIMAD BHAGAVADGITA CHAPTER 14
    • SRIMADBHAGAVDGITA CHAPTER 15
    • SRIMADBHAGAVDGITA CHAPTER 16
    • SRIMADBHAGAVADGITA CHAPTER 17
    • SRIMADBHAGAVADGITA CHAPTER 18
    • AUDIOS OF CHAPTERS 1 TO 18 OF SRIMAD BHAGAVAD GITA
  • RECENT ARTICLES
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of Gayatri- ಗಾಯತ್ರಿ – Written by Late Lanka Krisna Murti
    • ನನ್ನ ಪ್ರೀತಿಯ ತಂದೆಯ ನೆನಪು
    • A Sloka A Day
  • Articles
    • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
    • All Articles Of Gayatri- ಗಾಯತ್ರಿ – Written by Late Lanka Krisna Murti
    • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
    • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
    • Tyagashilpa-Drama ತ್ಯಾಗ ಶಿಲ್ಪ – ನಾಟಕ ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
  • ARTICLE OF THE MONTH
    • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
    • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
    • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
    • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
    • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
    • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
    • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
    • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
    • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
    • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
    • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
    • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
    • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
    • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
    • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
    • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
    • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
    • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
    • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
    • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
    • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
    • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
    • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
    • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
    • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
    • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
    • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
    • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
    • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
    • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
    • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
    • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
    • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
    • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
    • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
    • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
    • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
    • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
    • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
    • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ಶ್ರೀ ವಿಷ್ಣುಸಹಸ್ರನಾಮ
  • ARCHIVES
    • bIjAkSara’s or the ‘Seed Words’ of Dharma
    • Universal Message of all Religions of the World By Lanka Krishna Murti
    • Common Aspects in Different Religions By Late L. Krishna Murti
    • Biographical sketch of Lanka Krishna Murti
    • ನಿಜಾಯಿತಿ (Nijayithi)- ಪಿ .ವೆಂಕಟಾಚಲಂ
    • ನನ್ನ ಪ್ರೀತಿಯ ತಂದೆಯ ನೆನಪು
    • ವಾನಪ್ರಸ್ಥ ಧರ್ಮ – ಸಂನ್ಯಾಸ ಧರ್ಮ ದಿ.ಲಂಕಾ ಕೃಷ್ಣಮೂರ್ತಿ
    • ವಿಶ್ವ ಸಂಗೀತ – ಲಂಕಾ ಕೃಷ್ಣಮೂರ್ತಿ
    • ವೆಲನಾಡು ಜನಾಂಗದ ವಿಶಿಷ್ಟತೆ – ದಿ॥ ಲಂಕಾ ಕೃಷ್ಣಮೂರ್ತಿ
    • ಶ್ರೀ ದ್ವೈಮಾತೃಕ – ದಿ.ಲಂಕಾ ಕೃಷ್ಣಮೂರ್ತಿ
    • Drama- Atteya Ettara ಅತ್ತೆಯ ಎತ್ತರ (ನಾಟಕ) ರಚನೆ: ದಿ.ಲಂಕಾ ಕೃಷ್ಣಮೂರ್ತಿ.
    • SOME ASPECTS OF SANATANA DHARMA – By Dr. L.Adinarayana
    • ಎಲ್ಲಾ ಜಲಮಯ-ಲಂಕಾ ಕೃಷ್ಣಮೂರ್ತಿ
    • ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದ್ದಂತಿದೆ- ದಿ.ಲಂಕಾ ಕೃಷ್ಣಮೂರ್ತಿ
  • News
  • Tribute to Dr L Adinarayana
  • Audios of entire Vishnusahasranama

SRIMADBHAGAVADGITA CHAPTER 18

Chapter 18.    मोक्षसन्यासयोगः Liberation through Renunciation

Introduction

In the course of His conversation with Arjuna, as reported by Sanjaya,             Sri Bhagawan has introduced a variety of concepts and practices for imparting Brahma Vidya and for inculcating Yoga Sastra to Arjuna. The major ones are:                        

1.     Delusion caused by Vishada;

2.     Kshetra and Kshetrajna;

3.     Prakruti and Purusha;

4.     Jeevatma and Paramatma;

5.     Purushottama;

6.     The Cosmic Vision;

7.     The Thrigunas: Sattva, Rajas and Tamas;

8.     The Divine Qualities and the Demonic Qualities;

9.     Shraddha: Sattvic, Rajasic and Tamasic;

10.                        Varnas: Brahmana, Kshatria, Vaishya and Shudra;

11.                        Swadharma

12.                        Thyaga;

13.                        Sanyasa;

14.                        Moksha or Realisation or Liberation; and

15.                        Yogic Practices like

a.     Karma Yoga;

b.     Bhakti Yoga;

c.      Gnana Yoga and

d.     Dhyana Yoga.

In the 18th Chapter entitled  मोक्षसन्यासयोग or  Liberation through Renunciation, all the above concepts and practices get integrated into a precise progression of observances that culminate in the attainment of Mukti or Liberation.

The Sadhana or Action Plan given by the Lord is as follows:

One’s ACTION or Karma should conform to one’s own Varna and Ashrama.(Swadharma)

He should practice detachment from the action with no desire for its fruits; (Karma Yoga)

With steady and determined mind, he should cultivate Bhakti and dedicate the fruits of the action to the Lord; (Bhakti Yoga)

This brings about purification of his Antahkarana.

It is followed by the dawning of Gnana. (Gnana Yoga)

He should then cultivate Sattvic Thyaga.

And with Sanyasa or Renunciation of his Ego, and by total surrender to the Supreme Self, Divine Grace descends on him. (Dhyana Yoga)

This results in Brahma-Anubhuti  or Realisation or Liberation or Mukti.

By listening attentively to Krishna’s Teaching, Arjuna undergoes transformation and he testifies to the efficacy of this Sadhana or Action-Plan when he says:

नष्टो मोहः स्मृतिर्लब्धा त्वत्प्रसादान्मयाच्युत।

स्थितोस्मि गतसन्देहः करिष्ये वचनं तव॥१८.७३॥ 

Krishna, gone is my delusion as well as my ignorance.

I have regained memory of Truth.

Due to Your Grace, all my doubts stand dispelled.

And I shall do your bidding.

This is the Message of Geeta Sastra.

After going through this Divine-Human discourse between Krishna and Arjuna,

We should be able to echo the sentiment expressed by Arjuna!

ಹದಿನೆಂಟನೆಯ ಅಧ್ಯಾಯ

ಮೋಕ್ಷ ಸನ್ಯಾಸ ಯೋಗ

ಅರ್ಜುನನಿಗೆ ಯೋಗಶಾಸ್ತ್ರವನ್ನು ಬೋಧಿಸುವಾಗ ಮತ್ತು ಬ್ರಹ್ಮವಿದ್ಯೆಯ ಬಗ್ಗೆ ತಿಳಿಹೇಳುವಾಗ, ಭಗವಂತನು ಬಗೆಬಗೆಯ ಪರಿಕಲ್ಪನೆಗಳನ್ನು ಮತ್ತು ಆಚರಣೆಗಳನ್ನು ಪರಿಚಯಿಸಿದನೆಂಬುದಾಗಿ ಸಂಜಯನು ಹೇಳುತ್ತಾನೆ. ಅವುಗಳಲ್ಲಿ ಪ್ರಮುಖವಾದವುಗಳು:

1. ವಿಷಾದದಿಂದ ಉಂಟಾದ ಭ್ರಮೆ ಅಥವಾ ತಪ್ಪು ತಿಳುವಳಿಕೆ.

2. ಕ್ಷೇತ್ರ ಮತ್ತು ಕ್ಷೇತ್ರಜ್ಞ.

3. ಪ್ರಕೃತಿ ಮತ್ತು ಪುರುಷ.

4. ಜೀವಾತ್ಮ ಮತ್ತು ಪರಮಾತ್ಮ.

5. ಪುರುಷೋತ್ತಮ.

6. ವಿಶ್ವರೂಪ ದರ್ಶನ.

7. ಸತ್ವಗುಣ, ರಜೋಗುಣ ಮತ್ತು ತಮೋಗುಣ ಎಂಬ ತ್ರಿಗುಣಗಳು.

8. ದೈವಿಕ ಗುಣಧರ್ಮ ಮತ್ತು ಆಸುರಿಕ ಗುಣಧರ್ಮ.

9. ಶ್ರದ್ಧಾತ್ರಯ: ಸಾತ್ವಿಕ, ರಾಜಸಿಕ ಮತ್ತು ತಾಮಸಿಕ

10. ಶಾಸ್ತ್ರ

11. ವರ್ಣಗಳು: ಬ್ರಾಹ್ಮಣ,  ಕ್ಷತ್ರಿಯ, ವೈಶ್ಯ ಮತ್ತು ಶೂದ್ರ.

12. ಸ್ವಧರ್ಮ.

13. ತ್ಯಾಗ.

14. ಸನ್ಯಾಸ.

15. ಮೋಕ್ಷ ಅಥವಾ ಗ್ರಹಿಕೆ ಅಥವಾ ಮುಕ್ತಿ.

16. ಯೋಗಾಚರಣೆಗಳು: (i) ಕರ್ಮಯೋಗ (ii) ಭಕ್ತಿಯೋಗ (iii) ಜ್ಞಾನಯೋಗ (iv) ಧ್ಯಾನಯೋಗ

“ಮೋಕ್ಷ ಸನ್ಯಾಸ ಯೋಗ” ಎಂಬ ಹದಿನೆಂಟನೆಯ ಅಧ್ಯಾಯದಲ್ಲಿ, ಮೇಲಿನ ಎಲ್ಲ ಪರಿಕಲ್ಪನೆಗಳ ಮತ್ತು ಆಚರಣೆಗಳ ಮೂಲಕ, ಮುಕ್ತಿ ಅಥವಾ ಮೋಕ್ಷದ ಶೃಂಗವನ್ನು ಸೇರಲು ಬೇಕಾದ, ನಿಖರವಾದ ಅನುಷ್ಠಾನದ ಬಗ್ಗೆ ಸಮಗ್ರವಾಗಿ ವಿವರಿಸಲಾಗಿದೆ.

ಸಾಧನೆಯ ಬಗ್ಗೆ ಭಗವಂತನು ನೀಡಿದ ರೂಪು ರೇಷೆಗಳು ಇಂತಿವೆ.

ಶಾಸ್ತ್ರಕ್ಕೆ ಅನುರೂಪವಾಗಿ ಮತ್ತು ತನ್ನ ವರ್ಣ ಮತ್ತು ಆಶ್ರಮಕ್ಕೆ ಅನುಗುಣವಾಗಿ ವ್ಯಕ್ತಿಯ ಕರ್ಮವು ಹೊಂದಿಕೊಳ್ಳಬೇಕು.

ಫಲಾಪೇಕ್ಷೆ ಇಲ್ಲದೆ ಕರ್ಮದಿಂದ ವಿರಕ್ತಿ ಹೊಂದುವುದನ್ನು ವ್ಯಕ್ತಿಯು ಅಭ್ಯಾಸಮಾಡಬೇಕು.(ಇದು ಕರ್ಮಯೋಗದಲ್ಲಿ ಹೇಳಲ್ಪಟ್ಟಿದೆ)

ಸ್ಥಿರ ಮತ್ತು ಧೃಢ ಮನಸ್ಸಿನಿಂದ, ಭಕ್ತಿಯನ್ನುಪಾಲಿಸಿ ಕರ್ಮಫಲವನ್ನು ದೇವರಿಗೆ ಸಮರ್ಪಿಸಬೇಕು.(ಇದು ಭಕ್ತಿಯೋಗದಲ್ಲಿ ಹೇಳಲ್ಪಟ್ಟಿದೆ)

ಹೀಗೆ ಮಾಡುವುದರಿಂದ ಆತನ ಅಂತಃಕರಣ ಶುದ್ಧಿಯಾಗುತ್ತದೆ. ಇದು ಜ್ಞಾನೋದಯವನ್ನು ಉಂಟುಮಾಡುತ್ತದೆ. (ಇದು ಜ್ಞಾನ ಯೋಗದಲ್ಲಿ ಹೇಳಲ್ಪಟ್ಟಿದೆ)

ಆಮೇಲೆ ಆತನು ಸಾತ್ವಿಕ ತ್ಯಾಗವನ್ನು ಪಾಲಿಸಬೇಕು.

ಅಹಂಭಾವವನ್ನು ತ್ಯಜಿಸಿ, ಸನ್ಯಾಸಿಯಾಗಿ, ಪರಮಾತ್ಮನಲ್ಲ್ಲಿ ಸಂಪೂರ್ಣ ಶರಣಾಗತನಾದ ನಂತರ ಆತನ ಮೇಲೆ ದೈವ ಕೃಪೆ ಉಂಟಾಗುತ್ತದೆ.(ಇದು ಧ್ಯಾನಯೋಗದಲ್ಲಿ ಹೇಳಲ್ಪಟ್ಟಿದೆ )

ಇದರಿಂದ ಬ್ರಹ್ಮಾನುಭೂತಿ ಅಥವಾ ಮೋಕ್ಷ ಪ್ರಾಪ್ತಿಯಾಗುತ್ತದೆ.

ಶ್ರೀ ಕೃಷ್ಣನ ಉಪದೇಶವನ್ನು ತತ್ಪರನಾಗಿ ಕೇಳಿ ಅರ್ಜುನನು ಪರಿವರ್ತನೆ ಹೊಂದುತ್ತಾನೆ ಮತ್ತು ಕೊನೆಯಲ್ಲಿ ಈ ಸಾಧನೆಯ ಅಥವಾ ಕಾರ್ಯವ್ಯೂಹದ ಗುಣಕ್ಕೆ ಸಾಕ್ಷೀಭೂತನಾಗಿ ಹೀಗೆಂದು ಹೇಳುತ್ತಾನೆ.

ಕೃಷ್ಣಾ, ನನ್ನ ಭ್ರಮೆ ಹಾಗೂ ಅಜ್ಞಾನ ಕಳೆಯಿತು. ಸತ್ಯದ ಸ್ಮೃತಿಯನ್ನು ನಾನು ಸ್ವಾಧೀನಕ್ಕೆ ಪಡೆದಿದ್ದೇನೆ. 

ನಿನ್ನ ಕೃಪಾಕಟಾಕ್ಷದಿಂದ ನನ್ನ ಎಲ್ಲ ಸಂದೇಹಗಳೂ ದೂರವಾದವು.

ನಿನ್ನ ಅಪ್ಪಣೆಯನ್ನು ನಾನು ಪಾಲಿಸುವೆ ಮತ್ತು ನಿನ್ನ ಉಪದೇಶದಂತಯೇ ನಡೆಯುತ್ತೇನೆ.

ಇದು ಗೀತಾಶಾಸ್ತ್ರದ ಸಂದೇಶವಾಕ್ಯ.

ಕೃಷ್ಣ ಮತ್ತು ಅರ್ಜುನ ಇವರ ನಡುವೆ ನಡೆದ ದೈವ-ಮಾನವ ಸಂಭಾಷಣೆಯನ್ನು ಮನನ ಮಾಡಿಕೊಂಡ ನಂತರ, ಅರ್ಜುನನಿಂದ ವ್ಯಕ್ತವಾದ ರಸಭಾವವು ನಮ್ಮಲ್ಲಿ ಸದಾ ಅನುರಣಿಸುತ್ತಿರಬೇಕು.

अर्जुन उवाच:

संन्यासस्य महाबाहो

तत्वमिच्छामि वेदितुम् l

त्यागस्य च हृषीकेश

पृथक्केशिनिषूदन॥१८.॥  

ಅರ್ಜುನ ಉವಾಚ ।

ಸಂನ್ಯಾಸಸ್ಯ ಮಹಾಬಾಹೋ 

ತತ್ತ್ವಮಿಚ್ಛಾಮಿ ವೇದಿತುಮ್ ।

ತ್ಯಾಗಸ್ಯ ಚ ಹೃಷೀಕೇಶ

ಪೃಥಕ್ಕೇಶಿನಿಷೂದನ ॥ 18-1॥

संन्यासस्य महाबाहो तत्वमिच्छामि वेदितुम् l

त्यागस्य च हृषीकेश पृथक्केशिनिषूदन॥१८.॥  

ಸಂನ್ಯಾಸಸ್ಯ ಮಹಾಬಾಹೋ ತತ್ತ್ವಮಿಚ್ಛಾಮಿ ವೇದಿತುಮ್ ।

ತ್ಯಾಗಸ್ಯ ಚ ಹೃಷೀಕೇಶ ಪೃಥಕ್ಕೇಶಿನಿಷೂದನ ॥ 18-1॥

Arjuna said:

1.      O Mighty-armed Krishna,

I wish to know what the term sanyasa  really means.

O Lord of the Senses and the Slayer of Kesin,

Tell me also what thyaga is, in truth.

ಅರ್ಜುನ ಹೇಳಿದನು:- ಎಲೈ ಮಹಾಬಾಹುವಾದ ಕೃಷ್ಣನೇ, ಕೇಶಿ ಎಂಬ ರಾಕ್ಷಸನನ್ನು ಕೊಂದ ಕೇಶಿ ನಿಷೂದನನೇ, ಇಂದ್ರಿಯಗಳ ಒಡೆಯನಾದ ಹೃಷೀಕೇಶನೇ, ಸನ್ಯಾಸ ಎಂಬ ಶಬ್ದದ ನಿಜವಾದ ಅರ್ಥವನ್ನು ನಾನು ತಿಳಿಯಬಯಸುತ್ತೇನೆ. ಹಾಗೆಯೇ ತ್ಯಾಗವೆಂದರೆ ಏನೆಂದು ನನಗೆ ಹೇಳು. ತ್ಯಾಗ ಮತ್ತು ಸನ್ಯಾಸ ಇವುಗಳ ಸ್ವರೂಪವನ್ನು ಬಿಡಿಬಿಡಿಯಾಗಿ ತಿಳಿಸು.                  

श्रीभगवानुवाच:

काम्यानां कर्मणां न्यासं

सन्यासं कवयो विदुः।

सर्वकर्मफलत्यागं

प्राहुस्त्यागं विचक्षणाः॥१८.२॥

ಶ್ರೀಭಗವಾನುವಾಚ ।

ಕಾಮ್ಯಾನಾಂ ಕರ್ಮಣಾಂ ನ್ಯಾಸಂ 

ಸಂನ್ಯಾಸಂ ಕವಯೋ ವಿದುಃ ।

ಸರ್ವಕರ್ಮಫಲತ್ಯಾಗಂ 

ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥ 18-2॥

काम्यानां कर्मणां न्यासं सन्यासं कवयो विदुः।

सर्वकर्मफलत्यागं प्राहुस्त्यागं विचक्षणाः॥१८.२॥

ಕಾಮ್ಯಾನಾಂ ಕರ್ಮಣಾಂ ನ್ಯಾಸಂ ಸಂನ್ಯಾಸಂ ಕವಯೋ ವಿದುಃ ।

ಸರ್ವಕರ್ಮಫಲತ್ಯಾಗಂ ಪ್ರಾಹುಸ್ತ್ಯಾಗಂ ವಿಚಕ್ಷಣಾಃ ॥ 18-2॥

Before expressing His own considered view on the two terms, sannyasa and thyaga,

Krishna refers to the meanings given by some learned people.

Sri Bhagawan says:

Some learned people say that sannyasa or renunciation is the rejection

of actions that are performed with a desire for the fruits; while some experts

declare that thyaga or relinquishment is the giving up of the fruits of all actions.

ಸನ್ಯಾಸ ಮತ್ತು ತ್ಯಾಗ ಎಂಬ ಎರಡು ಶಬ್ದಗಳ ಬಗ್ಗೆ ತನ್ನ ಸ್ವಂತ ಅಭಿಪ್ರಾಯವನ್ನು ಹೇಳುವುದಕ್ಕಿಂತ ಮೊದಲು ಕೃಷ್ಣನು ಕೆಲವು ವಿದ್ವಾಂಸರು ನೀಡಿರುವ ಅರ್ಥವನ್ನು ಉಲ್ಲೇಖಿಸುತ್ತಾನೆ.

ಭಗವಂತನು ಹೇಳಿದನು:-

ಐಹಿಕ ಬಯಕೆಯ ಅಧಾರವಿರುವ, ಸ್ವರ್ಗಾದಿ ಫಲಗಳನ್ನು ಕೊಡುವ, ಕಾಮ್ಯಕರ್ಮಗಳನ್ನು ತ್ಯಜಿಸುವುದಕ್ಕೆ ಸನ್ಯಾಸವೆಂದು ಕೆಲ ವಿದ್ವಾಂಸರು ಹೇಳುತ್ತಾರೆ. ಎಲ್ಲಾ ಕರ್ಮಗಳ ಫಲಗಳನ್ನು ಮತ್ತು ಫಲಾಪೇಕ್ಷೆಯನ್ನು ತ್ಯಜಿಸುವುದಕ್ಕೆ ತ್ಯಾಗವೆಂದು ಕೆಲ ಪಂಡಿತರು ಹೇಳುತ್ತಾರೆ. 

त्याज्यं दोषवदित्येके

कर्म प्राहुर्मनीषिणः।

यज्ञदानतपःकर्म

न त्याज्यमिति चापरे॥१८.३॥

ತ್ಯಾಜ್ಯಂ ದೋಷವದಿತ್ಯೇಕೇ

ಕರ್ಮ ಪ್ರಾಹುರ್ಮನೀಷಿಣಃ ।

ಯಜ್ಞದಾನತಪಃಕರ್ಮ 

ನ ತ್ಯಾಜ್ಯಮಿತಿ ಚಾಪರೇ ॥ 18-3॥

त्याज्यं दोषवदित्येके कर्म प्राहुर्मनीषिणः।

यज्ञदानतपःकर्म न त्याज्यमिति चापरे॥१८.३॥

ತ್ಯಾಜ್ಯಂ ದೋಷವದಿತ್ಯೇಕೇ ಕರ್ಮ ಪ್ರಾಹುರ್ಮನೀಷಿಣಃ ।

ಯಜ್ಞದಾನತಪಃಕರ್ಮ ನ ತ್ಯಾಜ್ಯಮಿತಿ ಚಾಪರೇ ॥ 18-3॥

Some intellectuals hold the opinion that

all faulty actions must be relinquished,

while some other wise people assert that

actions such as yagna, daana and tapas

should not be relinquished at all.

ಎಲ್ಲ ಬಗೆಯ ಕಾಮ್ಯಕರ್ಮಗಳು ದೋಷಯುಕ್ತ. ಹಾಗಾಗಿ ಅವುಗಳನ್ನು ಬಿಟ್ಟು ಬಿಡಬೇಕೆಂದು ಕೆಲವು ವಿದ್ವಾಂಸರು ಹೇಳುತ್ತಾರೆ. ಯಜ್ಞ, ದಾನ, ತಪಸ್ಸುಗಳು ಕರ್ಮಗಳೇ ಆಗಿದ್ದರೂ ಅವುಗಳನ್ನು ಬಿಡಲೇಬಾರದೆಂದು ಮತ್ತೆ ಕೆಲವು ಚಿಂತಕರು ಹೇಳುತ್ತಾರೆ.

  निश्चयं शृणु मे तत्र

त्यागे भरतसत्तम।

त्यागो हि पुरुषव्याघ्र

त्रिविधः सम्प्रकीर्तितः॥१८.४॥

ನಿಶ್ಚಯಂ ಶೃಣು ಮೇ ತತ್ರ 

ತ್ಯಾಗೇ ಭರತಸತ್ತಮ ।

ತ್ಯಾಗೋ ಹಿ ಪುರುಷವ್ಯಾಘ್ರ 

ತ್ರಿವಿಧಃ ಸಂಪ್ರಕೀರ್ತಿತಃ ॥ 18-4॥

 निश्चयं शृणु मे तत्र त्यागे भरतसत्तम।

त्यागो हि पुरुषव्याघ्र त्रिविधः सम्प्रकीर्तितः॥१८.४॥ 

ನಿಶ್ಚಯಂ ಶೃಣು ಮೇ ತತ್ರ ತ್ಯಾಗೇ ಭರತಸತ್ತಮ ।

ತ್ಯಾಗೋ ಹಿ ಪುರುಷವ್ಯಾಘ್ರ ತ್ರಿವಿಧಃ ಸಂಪ್ರಕೀರ್ತಿತಃ ॥ 18-4॥

O the Best of Bharatas,

Listen to my decisive opinion on thyaga.

O Heroic Arjuna,

Thyaga has been celebrated

as being three-fold.

ಭರತವಂಶದವರಲ್ಲಿ ಶ್ರೇಷ್ಠನಾದವನೇ, ತ್ಯಾಗದ ಬಗ್ಗೆ ನನ್ನ ನಿರ್ಣಯಾತ್ಮಕವಾದ ಅಭಿಪ್ರಾಯವನ್ನು ಕೇಳು. ಎಲೈ ಪುರುಷವ್ಯಾಘ್ರನೇ ತ್ಯಾಗವು ಮೂರು ಬಗೆಯೆದಾಗಿವೆಯೆಂದು ಶಾಸ್ತ್ರಗಳಲ್ಲಿ ಉಲ್ಲೇಖಿಸಲಾಗಿದೆ.

यज्ञदानतपःकर्म

न त्याज्यं कार्यमेव तत्।

यज्ञो दानं तपश्चैव 

पावनानि मनीषिणाम्॥१८.५॥

ಯಜ್ಞದಾನತಪಃಕರ್ಮ 

ನ ತ್ಯಾಜ್ಯಂ ಕಾರ್ಯಮೇವ ತತ್ ।

ಯಜ್ಞೋ ದಾನಂ ತಪಶ್ಚೈವ

ಪಾವನಾನಿ ಮನೀಷಿಣಾಮ್ ॥ 18-5॥

यज्ञदानतपःकर्म न त्याज्यं कार्यमेव तत्।

यज्ञो दानं तपश्चैव  पावनानि मनीषिणाम्॥१८.५॥

ಯಜ್ಞದಾನತಪಃಕರ್ಮ ನ ತ್ಯಾಜ್ಯಂ ಕಾರ್ಯಮೇವ ತತ್ ।

ಯಜ್ಞೋ ದಾನಂ ತಪಶ್ಚೈವ ಪಾವನಾನಿ ಮನೀಷಿಣಾಮ್ ॥ 18-5॥

Performance of action

in respect of yagna, daana and tapas

should not be given up.

By performing yagna, daana and tapas

wise people get purified.

ಯಜ್ಞ, ದಾನ, ತಪಸ್ಸು ಎಂಬ ಕರ್ಮಾಚರಣೆಯನ್ನು ಬಿಡಬಾರದು. ಮಾಡಲೇಬೇಕು. ಅದು ಅವಶ್ಯವಾದ ಕರ್ತವ್ಯವಾಗಿದೆ. ಏಕೆಂದರೆ ವಾಸ್ತವವಾಗಿ ಯಜ್ಞ, ದಾನ, ತಪಸ್ಸುಗಳನ್ನು ಮಾಡುವುದರಿಂದ ವಿವೇಕಿಗಳು ಪರಿಶುದ್ಧರಾಗುತ್ತಾರೆ. 

एतान्यपि तु कर्माणि

सङ्गं त्यक्त्वा फलानि च।

कर्तव्यानीति मे पार्थ

निश्चितं मतमुत्तमम्॥१८.६॥

ಏತಾನ್ಯಪಿ ತು ಕರ್ಮಾಣಿ 

ಸಂಗಂ ತ್ಯಕ್ತ್ವಾ ಫಲಾನಿ ಚ ।

ಕರ್ತವ್ಯಾನೀತಿ ಮೇ ಪಾರ್ಥ 

ನಿಶ್ಚಿತಂ ಮತಮುತ್ತಮಮ್ ॥ 18-6॥

एतान्यपि तु कर्माणि सङ्गं त्यक्त्वा फलानि च।

कर्तव्यानीति मे पार्थ निश्चितं मतमुत्तमम्॥१८.६॥

ಏತಾನ್ಯಪಿ ತು ಕರ್ಮಾಣಿ ಸಂಗಂ ತ್ಯಕ್ತ್ವಾ ಫಲಾನಿ ಚ ।

ಕರ್ತವ್ಯಾನೀತಿ ಮೇ ಪಾರ್ಥ ನಿಶ್ಚಿತಂ ಮತಮುತ್ತಮಮ್ ॥ 18-6॥

 Arjuna,

These actions of yagna, daana and tapas

should be performed without attachment to them

and without any desire for their fruits.

This is my firm, well-considered and exemplary opinion.

ಅರ್ಜುನಾ! ಈ ಯಜ್ಞ, ದಾನ ಮತ್ತು ತಪೋರೂಪವಾದ ಕರ್ಮಗಳನ್ನು, ಸಹ ಕರ್ತೃತ್ವ ಸಂಗವನ್ನು ಬಿಟ್ಟು ಫಲವ್ಯಾಮೋಹವಿಲ್ಲದೆ ಮಾಡುವುದು ಉತ್ತಮ. ಅವನ್ನು ಕರ್ತವ್ಯ ಎಂದು ಮಾಡಬೇಕು. ಇದು ನನ್ನ ದೃಢವಾದ, ಗಣನೀಯವಾದ ಮತ್ತು ಅನುಕರಣೀಯವಾದ ಅಭಿಪ್ರಾಯ. 

नियतस्य तु सन्यासः

कर्मणो नोपपद्यते।

मोहात्तस्य परित्याग:

तामसः परिकीर्तितः॥१८.७॥

ನಿಯತಸ್ಯ ತು ಸಂನ್ಯಾಸಃ 

ಕರ್ಮಣೋ ನೋಪಪದ್ಯತೇ ।

ಮೋಹಾತ್ತಸ್ಯ ಪರಿತ್ಯಾಗಃ

ತಾಮಸಃ ಪರಿಕೀರ್ತಿತಃ ॥ 18-7॥

नियतस्य तु सन्यासः कर्मणो नोपपद्यते।

मोहात्तस्य परित्याग: तामसः परिकीर्तितः॥१८.७॥

ನಿಯತಸ್ಯ ತು ಸಂನ್ಯಾಸಃ  ಕರ್ಮಣೋ ನೋಪಪದ್ಯತೇ ।

ಮೋಹಾತ್ತಸ್ಯ ಪರಿತ್ಯಾಗಃ ತಾಮಸಃ ಪರಿಕೀರ್ತಿತಃ ॥ 18-7॥

 It is not proper to renounce

obligatory works like yagna daana and tapas.

Renouncing such works,

out of delusion and ignorance,

is said to be tamasic.   

 ಶಾಸ್ತ್ರವು ವಿಧಿಸಿದ ನಿಯತ ಕರ್ಮಗಳಾದಯಜ್ಞ, ದಾನ ಮತ್ತು ತಪಸ್ಸು ಇವುಗಳನ್ನು ತ್ಯಜಿಸುವುದು

ಉಚಿತವಾದುದಲ್ಲ. ಮೂಢತ್ವದಿಂದ ಮತ್ತು ಮೋಹದಿಂದ ಅಂತಹ ಕರ್ಮಗಳನ್ನು ತ್ಯಜಿಸಿದರೆ, ಅಂತಹ ತ್ಯಾಗವನ್ನು “ತಾಮಸ ತ್ಯಾಗ”  ಎಂದೆನ್ನುತ್ತಾರೆ.

 दुःखमित्येव यत्कर्म

कायक्लेशभयात्त्यजेत्।

स कृत्वा राजसं त्यागं 

नैव त्यागफलं लभेत्॥१॥

ದುಃಖಮಿತ್ಯೇವ ಯತ್ಕರ್ಮ 

ಕಾಯಕ್ಲೇಶಭಯಾತ್ತ್ಯಜೇತ್ ।

ಸ ಕೃತ್ವಾ ರಾಜಸಂ ತ್ಯಾಗಂ 

ನೈವ ತ್ಯಾಗಫಲಂ ಲಭೇತ್ ॥ 18-8॥

दुःखमित्येव यत्कर्म कायक्लेशभयात्त्यजेत्।

स कृत्वा राजसं त्यागं  नैव त्यागफलं लभेत्॥१॥

ದುಃಖಮಿತ್ಯೇವ ಯತ್ಕರ್ಮ ಕಾಯಕ್ಲೇಶಭಯಾತ್ತ್ಯಜೇತ್ ।

ಸ ಕೃತ್ವಾ ರಾಜಸಂ ತ್ಯಾಗಂ ನೈವ ತ್ಯಾಗಫಲಂ ಲಭೇತ್ ॥ 18-8॥

If such obligatory duties as

yagna daana and tapas

are relinquished as troublesome

and as causing bodily fatigue,

such relinquishment is considered

Rajasic and the fruit of such relinquishment

does not come to the doer.

ಯಜ್ಞ, ದಾನ ಮತ್ತು ತಪಸ್ಸು ಇಂತಹ ನಿಯತ ಕರ್ಮಗಳನ್ನು ಕ್ಲೇಶದಾಯಕವೆಂದಾಗಲೀ, ದೇಹಾಯಾಸದ ಭಯದಿಂದಾಗಲೀ ಬಿಟ್ಟುಬಿಟ್ಟಲ್ಲಿ ಅಂತಹ ತ್ಯಾಗವನ್ನು “ರಾಜಸಿಕ ತ್ಯಾಗ” ಎಂದು ಪರಿಗಣಿಸಲಾಗುತ್ತದೆ. ಅದನ್ನು ಬಿಟ್ಟಿದ್ದರ ಫಲವಾಗಿ ಎಂದಿಗೂ ಅಂತಹವನಿಗೆ ತ್ಯಾಗಫಲವಾದ ಮೋಕ್ಷವು ದೊರೆಯುವುದಿಲ್ಲ. 

कार्यमित्येव यत्कर्म

नियतं क्रियतेऽर्जुन। 

सङ्गं त्यक्त्वा फलं चैव

स त्यागः सात्विको मतः॥१८.९॥

ಕಾರ್ಯಮಿತ್ಯೇವ ಯತ್ಕರ್ಮ 

ನಿಯತಂ ಕ್ರಿಯತೇಽರ್ಜುನ ।

ಸಂಗಂ ತ್ಯಕ್ತ್ವಾ ಫಲಂ ಚೈವ 

ಸ ತ್ಯಾಗಃ ಸಾತ್ತ್ವಿಕೋ ಮತಃ ॥ 18-9॥

कार्यमित्येव यत्कर्म नियतं क्रियतेऽर्जुन। 

सङ्गं त्यक्त्वा फलं चैव स त्यागः सात्विको मतः॥१८.९॥

ಕಾರ್ಯಮಿತ್ಯೇವ ಯತ್ಕರ್ಮ ನಿಯತಂ ಕ್ರಿಯತೇಽರ್ಜುನ ।

ಸಂಗಂ ತ್ಯಕ್ತ್ವಾ ಫಲಂ ಚೈವ ಸ ತ್ಯಾಗಃ ಸಾತ್ತ್ವಿಕೋ ಮತಃ ॥ 18-9॥

If one performs the obligatory duties

such as yagna, daana and tapas

without getting attached to them

and without desire for their fruits,

such relinquishment is known to be Sattvic. 

ಎಲೈ ಅರ್ಜುನಾ! ಯಜ್ಞ, ದಾನ ಮತ್ತು ತಪಸ್ಸು ಎಂಬ ಮಾಡಬೇಕಾದ ವಿಹಿತ ಕರ್ಮಗಳನ್ನು ಮಾಡುತ್ತಾ, ಅವುಗಳಿಂದ ಬಂಧಿತನಾಗದೆ ಕರ್ಮಫಲಾಪೇಕ್ಷೆಯನ್ನೂ, ಎಲ್ಲ ಐಹಿಕ ಸಂಗವನ್ನೂ, ತ್ಯಜಿಸಿದಾಗ ಅದನ್ನು “ಸಾತ್ವಿಕ ತ್ಯಾಗ” ಎಂದು ಹೇಳುತ್ತಾರೆ.

 न द्वेष्ट्यकुशलं कर्म

कुशले नानुषज्यते।

त्यागी सत्वसमाविष्टो

मेधावी छिन्नसंशयः॥१८.१०॥

ನ ದ್ವೇಷ್ಟ್ಯಕುಶಲಂ ಕರ್ಮ 

ಕುಶಲೇ ನಾನುಷಜ್ಜತೇ ।

ತ್ಯಾಗೀ ಸತ್ತ್ವಸಮಾವಿಷ್ಟೋ 

ಮೇಧಾವೀ ಛಿನ್ನಸಂಶಯಃ ॥ 18-10॥

न द्वेष्ट्यकुशलं कर्म कुशले नानुषज्यते।

त्यागी सत्वसमाविष्टो मेधावी छिन्नसंशयः॥१८.१०॥

ನ ದ್ವೇಷ್ಟ್ಯಕುಶಲಂ ಕರ್ಮ ಕುಶಲೇ ನಾನುಷಜ್ಜತೇ ।

ತ್ಯಾಗೀ ಸತ್ತ್ವಸಮಾವಿಷ್ಟೋ ಮೇಧಾವೀ ಛಿನ್ನಸಂಶಯಃ ॥ 18-10॥

The Relinquisher who is well-established in Sattva,

who is free from all doubts,

and who is intelligent,

neither hates unmeritorious actions

nor gets attached to meritorious actions.

ಮೇಧಾವಿಯೂ, ಸಂಶಯರಹಿತನೂ ಆದ ಸಾತ್ವಿಕ ತ್ಯಾಗಿಯು, ಸ್ತುತ್ಯವಲ್ಲದ ಕಾಮ್ಯಕರ್ಮಗಳನ್ನು ದ್ವೇಶಿಸುವುದಿಲ್ಲ ಅಥವಾ ಶ್ಲಾಘನೀಯವಾದ ನಿತ್ಯಕರ್ಮಗಳಲ್ಲಿ ಆಸಕ್ತನಾಗುವುದಿಲ್ಲ. ಸಾತ್ವಿಕ ಗುಣದಲ್ಲಿ ನೆಲೆಗೊಂಡಿರುವ ಇಂತಹ ಬುದ್ಧಿವಂತ ತ್ಯಾಗಿಯು ಕರ್ಮದ ವಿಷಯವಾಗಿ ಸಂದೇಹಗಳನ್ನು ಹೊಂದಿರುವುದಿಲ್ಲ.

न हि देहभृतां शक्यं

त्यक्तुं कर्माण्यशेषतः।

यस्तु कर्मफलत्यगी

स त्यागीत्यभिधीयते॥१८.११॥  

ನ ಹಿ ದೇಹಭೃತಾಂ ಶಕ್ಯಂ

ತ್ಯಕ್ತುಂ ಕರ್ಮಾಣ್ಯಶೇಷತಃ ।

ಯಸ್ತು ಕರ್ಮಫಲತ್ಯಾಗೀ 

ಸ ತ್ಯಾಗೀತ್ಯಭಿಧೀಯತೇ ॥ 18-11॥

न हि देहभृतां शक्यं त्यक्तुं कर्माण्यशेषतः।

यस्तु कर्मफलत्यगी स त्यागीत्यभिधीयते॥१८.११॥  

ನ ಹಿ ದೇಹಭೃತಾಂ ಶಕ್ಯಂ ತ್ಯಕ್ತುಂ ಕರ್ಮಾಣ್ಯಶೇಷತಃ ।

ಯಸ್ತು ಕರ್ಮಫಲತ್ಯಾಗೀ ಸ ತ್ಯಾಗೀತ್ಯಭಿಧೀಯತೇ ॥ 18-11॥

An embodied person –

one who has a body –

cannot completely renounce all actions.

But he who relinquishes the fruits of actions

is said to a Thyagi.

ದೇಹಧಾರಿಯಾದವನಿಗೆ ಎಲ್ಲ ಕರ್ಮಗಳನ್ನು ಆದ್ಯಂತವಾಗಿ ತ್ಯಜಿಸುವುದು ಸಾಧ್ಯವಿಲ್ಲ. ಆದರೆ ಕರ್ಮಫಲಗಳನ್ನು ತ್ಯಜಿಸಿದವನೇ ನಿಜವಾದ ತ್ಯಾಗಿ ಎಂದೆನಿಕೊಳ್ಳುವನು.

अनिष्टमिष्टं मिश्रं च

त्रिविधं कर्मणः फलम्।

भवत्यत्यागिनां प्रेत्य

न तु सन्यासिनां क्वचित्॥१८.१२॥

ಅನಿಷ್ಟಮಿಷ್ಟಂ ಮಿಶ್ರಂ ಚ 

ತ್ರಿವಿಧಂ ಕರ್ಮಣಃ ಫಲಮ್ ।

ಭವತ್ಯತ್ಯಾಗಿನಾಂ ಪ್ರೇತ್ಯ

ನ ತು ಸಂನ್ಯಾಸಿನಾಂ ಕ್ವಚಿತ್ ॥ 18-12॥

अनिष्टमिष्टं मिश्रं च त्रिविधं कर्मणः फलम्।

भवत्यत्यागिनां प्रेत्य न तु सन्यासिनां क्वचित्॥१८.१२॥

ಅನಿಷ್ಟಮಿಷ್ಟಂ ಮಿಶ್ರಂ ಚ ತ್ರಿವಿಧಂ ಕರ್ಮಣಃ ಫಲಮ್ ।

ಭವತ್ಯತ್ಯಾಗಿನಾಂ ಪ್ರೇತ್ಯ ನ ತು ಸಂನ್ಯಾಸಿನಾಂ ಕ್ವಚಿತ್ ॥ 18-12॥

Actions bear three kinds of fruits after death:

disagreeable, agreeable and mixed.

This happens in the case of those

who have not relinquished the fruits of their actions,

but not for those who have renounced

the fruits of their actions.

ಸಾವಿನ ನಂತರ ಕರ್ಮಗಳು ಮೂರು ವಿಧದ ಫಲಗಳನ್ನು ಹೊಂದಿರುತ್ತವೆ. ಪ್ರಿಯವಾದದ್ದು, ಅಪ್ರಿಯವಾದದ್ದು ಮತ್ತು ಮಿಶ್ರವಾದದ್ದು. ತ್ಯಾಗ ಮಾಡದಿರುವವರಿಗೆ ದೇಹಾವಸಾನದ ನಂತರ ಈ ಮೂರು ಬಗೆಯ ಕರ್ಮಫಲಗಳು ಲಭಿಸುತ್ತವೆ. ಆದರೆ ಕರ್ಮಫಲಗಳನ್ನು ತ್ಯಾಗ ಮಾಡಿದ ಸನ್ಯಾಸಿಗಳಿಗೆ ಸುಖಪಡುವ ಅಥವಾ ದುಖಃಪಡುವ ಫಲ ಯಾವುದೂ ಇರುವುದಿಲ್ಲ.  

पञ्चैतानि महाबाहो

कारणानि निबोध मे।

साङ्ख्ये कृतान्ते प्रोक्तानि

सिद्धयेसर्वकर्मणाम्॥१८.१३॥                                                                 

ಪಂಚೈತಾನಿ ಮಹಾಬಾಹೋ

ಕಾರಣಾನಿ ನಿಬೋಧ ಮೇ ।

ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ 

ಸಿದ್ಧಯೇ ಸರ್ವಕರ್ಮಣಾಮ್ ॥ 18-13॥

पञ्चैतानि महाबाहो कारणानि निबोध मे।

साङ्ख्ये कृतान्ते प्रोक्तानि सिद्धयेसर्वकर्मणाम्॥१८.१३॥ 

ಪಂಚೈತಾನಿ ಮಹಾಬಾಹೋ ಕಾರಣಾನಿ ನಿಬೋಧ ಮೇ ।

ಸಾಂಖ್ಯೇ ಕೃತಾಂತೇ ಪ್ರೋಕ್ತಾನಿ ಸಿದ್ಧಯೇ ಸರ್ವಕರ್ಮಣಾಮ್ ॥ 18-13॥

After elucidating the distinction between thyaga and sannyasa,

Krishna begins to explain Action or Karma and its causes:

Arjuna,

Know from Me that

there are FIVE causes

for the accomplishment of all actions,

as set forth in the Sankhya System of Philosophy.

ತ್ಯಾಗ ಮತ್ತು ಸನ್ಯಾಸದ ನಡುವೆ ಇರುವ ವ್ಯತ್ಯಾಸಗಳ ಮೇಲೆ ಬೆಳಕುಚೆಲ್ಲಿದ ಮೇಲೆ ಕರ್ಮ ಮತ್ತು ಅದರ ಪರಿಣಾಮಗಳ ಬಗ್ಗೆ ವಿವರಿಸುವುದಕ್ಕೆ ತೊಡಗುತ್ತಾನೆ ಕೃಷ್ಣ. ಅರ್ಜುನಾ ವೇದಾಂತ ಶಾಸ್ತ್ರವಾದ ಸಾಂಖ್ಯ ಶಾಸ್ತ್ರದಲ್ಲಿ ಮಂಡಿಸಿರುವಂತೆ ಎಲ್ಲ ಕರ್ಮಗಳ ಸಿದ್ಧಿಗಾಗಿ ಈ ಐದು ಕಾರಣಗಳು ಹೇಳಲ್ಪಟ್ಟಿವೆ. ಅವುಗಳನ್ನು ನನ್ನಿಂದ ತಿಳಿದುಕೋ.

अधिष्ठानं तथा कर्ता

करणं च पृथग्विधम्।

विविधाश्च पृथक्चेष्टा

दैवं चैवात्र पञ्चमम्॥१८.१४॥

ಅಧಿಷ್ಠಾನಂ ತಥಾ ಕರ್ತಾ 

ಕರಣಂ ಚ ಪೃಥಗ್ವಿಧಮ್ ।

ವಿವಿಧಾಶ್ಚ ಪೃಥಕ್ಚೇಷ್ಟಾ 

ದೈವಂ ಚೈವಾತ್ರ ಪಂಚಮಮ್ ॥ 18-14॥

अधिष्ठानं तथा कर्ता करणं च पृथग्विधम्।

विविधाश्च पृथक्चेष्टा दैवं चैवात्र पञ्चमम्॥१८.१४॥

ಅಧಿಷ್ಠಾನಂ ತಥಾ ಕರ್ತಾ ಕರಣಂ ಚ ಪೃಥಗ್ವಿಧಮ್ ।

ವಿವಿಧಾಶ್ಚ ಪೃಥಕ್ಚೇಷ್ಟಾ ದೈವಂ ಚೈವಾತ್ರ ಪಂಚಮಮ್ ॥ 18-14॥

The Five Causes for the accomplishment of any action are:

a.  The Body as the Field or Ground where the action takes place.

b. The Doer, the Ego or Ahankara,

c.  The Instruments: the Organs of Action and those of Perception

plus Mind and Intellect. 12 in all.

d. The Movements of the Vital Airs, or Pancha Pranas:

Prana, Apana, Vyana, Udana and Samana;

e.  The Presiding Deities of all the instruments guiding and supervising

their functions.

Ears: Digdevatas or Deities of the Directions

Skin: Sameerana or the god of Wind

Eyes: Arka the Sun god

Tongue: Varuna the god of Water

Nose:       Aswinikumars, the twin gods of Medicine.

Speech:  Agni the god of Fire

Hands:   Indra

Feet:   Vishnu

Anus:  Yama

Sex organ: Prajapati

Mind: the Moon

Intellect:  Chaturmukha Brahma.

ಯಾವುದೇ ಕರ್ಮದ ಸಿದ್ಧಿಗಾಗಿ ಇರುವ ಐದು ಕಾರಣಗಳು ಯಾವುವೆಂದರೆ:

ಕರ್ಮಸ್ಥಳವಾದ ದೇಹ ಅಂದರೆ ಅಧಿಷ್ಠಾನ

ಕರ್ತ, ಅಹಂಕಾರ

ಕರ್ಮ ಸಾಧನವಾಗಿರುವ ಕರ್ಮೇಂದ್ರಿಯಗಳು ಮತ್ತು ಜ್ಞಾನೇಂದ್ರಿಯಗಳು ಮತ್ತು ಮನಸ್ಸು, ಹಾಗೂ ಪ್ರಜ್ಞೆ ಮುಂತಾದ 12 ಕರಣಗಳು.

ಪ್ರಾಣ, ಅಪಾನ, ವ್ಯಾನ, ಉದಾನ ಮತ್ತು ಸಮಾನ ಎಂಬ ಪಂಚ ಪ್ರಾಣಗಳು.

ಇವೆಲ್ಲವುಗಳ ಮೇಲ್ವಿಚಾರಕ ಹಾಗೂ ಮಾರ್ಗದರ್ಶಕರಾದ ಅಧಿದೇವತಾ ಶಕ್ತಿಗಳು

ಕಿವಿಗಳು:- ದಿಗ್ದೇವತೆಗಳು

ಚರ್ಮ:- ಸಮೀರಣ ಅಥವಾ ವಾಯುದೇವತೆ

ಕಣ್ಣುಗಳು:- ಸೂರ್ಯದೇವನಾದ ಅರ್ಕ

ನಾಲಿಗೆ:- ಜಲದೇವತೆಯಾದ ವರುಣ

ಮೂಗು:- ಔಷಧಗಳ ಅವಳಿ ದೇವತೆಗಳಾದ ಅಶ್ವಿನಿ ಕುಮಾರರು 

ವಾಕ್ಕು:- ಬೆಂಕಿಯ ದೇವತೆಯಾದ ಅಗ್ನಿ

ಕೈಗಳು:- ಇಂದ್ರ

ಕಾಲ್ಗಳು:- ವಿಷ್ಣು

ಅಪಾನ:- ಯಮ

ಜನನೇಂದ್ರಿಯ:- ಪ್ರಜಾಪತಿ

ಮನಸ್ಸು:- ಚಂದ್ರ

ಬುದ್ಧಿ ಅಥವಾ ಪ್ರಜ್ಞೆ:- ಚತುರ್ಮುಖ ಬ್ರಹ್ಮ

शरीरवाङ्मनोभिर्यत्

कर्म प्रारभते नरः।

 न्याय्यं वा विपरीतं वा

पञ्चैते तत्र हेतवः॥१८.१५॥

ಶರೀರವಾಙ್ಮನೋಭಿರ್ಯತ್

ಕರ್ಮ ಪ್ರಾರಭತೇ ನರಃ ।

ನ್ಯಾಯ್ಯಂ ವಾ ವಿಪರೀತಂ ವಾ 

ಪಂಚೈತೇ ತಸ್ಯ ಹೇತವಃ ॥ 18-15॥

शरीरवाङ्मनोभिर्यत् कर्म प्रारभते नरः।

 न्याय्यं वा विपरीतं वा पञ्चैते तत्र हेतवः॥१८.१५॥

ಶರೀರವಾಙ್ಮನೋಭಿರ್ಯತ್ ಕರ್ಮ ಪ್ರಾರಭತೇ ನರಃ ।

ನ್ಯಾಯ್ಯಂ ವಾ ವಿಪರೀತಂ ವಾ ಪಂಚೈತೇ ತಸ್ಯ ಹೇತವಃ ॥ 18-15॥

Arjuna, know that

those are the  Five Causes

for a man to initiate Action,

righteous or unrighteous,

with the help of his body, speech and mind.

(Trikaranas)

ಅರ್ಜುನ, ಕಾಯಾ- ಅಂದರೆ ಶರೀರದಿಂದ, ವಾಚಾ- ಅಂದರೆ ಮಾತಿನಿಂದ, ಮನಸಾ- ಅಂದರೆ ಮನಸ್ಸಿನಿಂದ ಹೀಗೆ ತ್ರಿಕರಣಗಳ ಮೂಲಕ ಮನುಷ್ಯನು ಮಾಡುವ ಒಳ್ಳೆಯ ಹಾಗೂ ಕೆಟ್ಟ ಕರ್ಮಗಳಿಗೆಲ್ಲಾ ಈ ಐದು ಅಂಶಗಳೇ ಕಾರಣವಾಗಿವೆ ಎಂದು ತಿಳಿ.

तत्रैवं सति कर्तारम्

आत्मानं केवलं तु यः।

पस्यत्यकृतबुद्धित्वात्       

न स पस्यति दुर्मतिः॥१८.१६॥

ತತ್ರೈವಂ ಸತಿ ಕರ್ತಾರಮ್

ಆತ್ಮಾನಂ ಕೇವಲಂ ತು ಯಃ ।

ಪಶ್ಯತ್ಯಕೃತಬುದ್ಧಿತ್ವಾತ್

ನ ಸ ಪಶ್ಯತಿ ದುರ್ಮತಿಃ ॥ 18-16॥

तत्रैवं सति कर्तारम् आत्मानं केवलं तु यः।

पस्यत्यकृतबुद्धित्वात् न स पस्यति दुर्मतिः॥१८.१६॥

ತತ್ರೈವಂ ಸತಿ ಕರ್ತಾರಮ್ ಆತ್ಮಾನಂ ಕೇವಲಂ ತು ಯಃ ।

ಪಶ್ಯತ್ಯಕೃತಬುದ್ಧಿತ್ವಾತ್ ನ ಸ ಪಶ್ಯತಿ ದುರ್ಮತಿಃ ॥ 18-16॥

 When that is the case,

that is, when all action is prompted

and accomplished by the five causes,

described earlier,

he who considers the pure Self alone

as the Doer, sees not at all –

he lacks proper understanding

and his intellect lacks disciplined reasoning.

ವಿಷಯವು ಹೀಗಿರುವಾಗ, ಅಂದರೆ ಮುಂಚೆ ವಿವರಿಸಿದಂತೆ ಎಲ್ಲ ಕರ್ಮಗಳಿಗೂ ಕಾರಣೀಭೂತವಾದ  ಐದು ಕಾರಣಗಳು ಇರುವಾಗ, ಸಂಸ್ಕಾರ ಬುದ್ಧಿಯಿಲ್ಲದ, ಮೂಢರು ಕೇವಲ ಸ್ವರೂಪನಾದ ಆತ್ಮನನ್ನೇ ಕರ್ತ ಎಂದು ಭಾವಿಸುತ್ತಾರೆ. ಅವರಿಗೆ ವಾಸ್ತವ ಜ್ಞಾನವಿಲ್ಲ.

यस्य नाहंकृतो भावो

बुद्धिर्यस्य न लिप्यते।

हत्वापि स इमांल्लोकान्

न हन्ति न निबध्यते॥१८.१७॥

ಯಸ್ಯ ನಾಹಂಕೃತೋ ಭಾವೋ 

ಬುದ್ಧಿರ್ಯಸ್ಯ ನ ಲಿಪ್ಯತೇ ।

ಹತ್ವಾಽಪಿ ಸ ಇಮಾँಲ್ಲೋಕಾನ್

ನ ಹಂತಿ ನ ನಿಬಧ್ಯತೇ ॥ 18-17॥

यस्य नाहंकृतो भावो बुद्धिर्यस्य न लिप्यते।

हत्वापि स इमांल्लोकान् न हन्ति न निबध्यते॥१८.१७॥

ಯಸ್ಯ ನಾಹಂಕೃತೋ ಭಾವೋ  ಬುದ್ಧಿರ್ಯಸ್ಯ ನ ಲಿಪ್ಯತೇ ।

ಹತ್ವಾಽಪಿ ಸ ಇಮಾँಲ್ಲೋಕಾನ್ ನ ಹಂತಿ ನ ನಿಬಧ್ಯತೇ ॥ 18-17॥

If one is free from the egoistic attitude

that “I am the doer”

and if his intellect is unattached

to the fruits of actions,

though such person kills all the people,

he is not the killer

and he is not tainted and bound by any sin.

ಯಾರಿಗೆ “ನಾನೇ ಕರ್ತೃ” ಎಂಬ ಅಹಂಕಾರಭಾವವಿರುವುದಿಲ್ಲವೋ, ಯಾರಿಗೆ ಬುದ್ಧಿ ಲಿಪ್ತವಾಗಿರುವುದಿಲ್ಲವೋ, ಯಾರ ಬುದ್ಧಿಗೆ ಕರ್ಮಫಲದಲ್ಲಿ ಬಂಧವಿರುವುದಿಲ್ಲವೋ, ಅಂತಹವನು ಈ ಜಗತ್ತಿನಲ್ಲಿ ಎಲ್ಲ ಮನುಷ್ಯರನ್ನು ಕೊಂದರೂ ಅವನು ಕೊಲೆಗಾರನಾಗುವುದಿಲ್ಲ. ಅವನು ಪಾಪದಿಂದ ಕಳಂಕಿತನಾಗುವುದಿಲ್ಲ ಮತ್ತು ಬಂಧಿತನಾಗುವುದಿಲ್ಲ. 

ज्ञानं ज्ञेयं परिज्ञाता

त्रिविधा कर्मचोदना।

करणं कर्म कर्तेति

त्रिविधः कर्मसङ्ग्रहः॥१८.१८॥

ಜ್ಞಾನಂ ಜ್ಞೇಯಂ ಪರಿಜ್ಞಾತಾ 

ತ್ರಿವಿಧಾ ಕರ್ಮಚೋದನಾ ।

ಕರಣಂ ಕರ್ಮ ಕರ್ತೇತಿ 

ತ್ರಿವಿಧಃ ಕರ್ಮಸಂಗ್ರಹಃ ॥ 18-18॥

ज्ञानं ज्ञेयं परिज्ञाता त्रिविधा कर्मचोदना।

करणं कर्म कर्तेति त्रिविधः कर्मसङ्ग्रहः॥१८.१८॥

ಜ್ಞಾನಂ ಜ್ಞೇಯಂ ಪರಿಜ್ಞಾತಾ ತ್ರಿವಿಧಾ ಕರ್ಮಚೋದನಾ ।

ಕರಣಂ ಕರ್ಮ ಕರ್ತೇತಿ ತ್ರಿವಿಧಃ ಕರ್ಮಸಂಗ್ರಹಃ ॥ 18-18॥

Factor that induce Karma or Action

are three in number:

a.      Knowledge,

b.     the Object of Knowledge and

c.      the Knower.

The constituents of Karma or Action are also three in number:

a.      the Instruments of Action,

b.     the Action and

c.      the Doer of Action.

ಕರ್ಮವನ್ನು ಪ್ರೇರೇಪಿಸುವ ಮೂರು ಅಂಶಗಳು ಯಾವುವೆಂದರೆ:-

1.ಜ್ಞಾನ ಅಂದರೆ ಅರಿವು

2.ಜ್ಞೇಯ ಅಂದರೆ ಅರಿಯಬೇಕಾದುದು

3.ಪರಿಜ್ಞಾತಾ ಅಂದರೆ ಅರಿಯುವವನು.

ಕರ್ಮದ ಘಟಕಗಳು ಸಹ ಸಂಖ್ಯೆಯಲ್ಲಿ ಮೂರಿವೆ.

1.ಕರ್ಮದ ಕರಣಗಳು ಅಂದರೆ ಇಂದ್ರಿಯಗಳು.

2.ಕರ್ಮ

3.ಕರ್ತೃ 

ज्ञानं कर्म च कर्ता च

त्रिधैव गुणभेदतः।

प्रोच्यते गुणसङ्ख्याने

यथावच्छृणु तान्यपि॥१८.१९॥

ಜ್ಞಾನಂ ಕರ್ಮ ಚ ಕರ್ತಾ ಚ 

ತ್ರಿಧೈವ ಗುಣಭೇದತಃ ।

ಪ್ರೋಚ್ಯತೇ ಗುಣಸಂಖ್ಯಾನೇ 

ಯಥಾವಚ್ಛೃಣು ತಾನ್ಯಪಿ ॥ 18-19॥

ज्ञानं कर्म च कर्ता च त्रिधैव गुणभेदतः।

प्रोच्यते गुणसङ्ख्याने यथावच्छृणु तान्यपि॥१८.१९॥

ಜ್ಞಾನಂ ಕರ್ಮ ಚ ಕರ್ತಾ ಚ ತ್ರಿಧೈವ ಗುಣಭೇದತಃ ।

ಪ್ರೋಚ್ಯತೇ ಗುಣಸಂಖ್ಯಾನೇ ಯಥಾವಚ್ಛೃಣು ತಾನ್ಯಪಿ ॥ 18-19॥

 According to Sankhya System of Philosophy,

Gnanam, Karma and Karta, that is,

Knowledge, Action and Doer, are three-fold

in respect of the Constituents or Gunas of Prakruti.

Arjunae, listen to Me while I describe them as they are.

ಸಾಂಖ್ಯಶಾಸ್ತ್ರದ ತತ್ವದ ಪ್ರಕಾರ ಜ್ಞಾನ, ಕರ್ಮ ಮತ್ತು ಕರ್ತ ಎಂಬುವುಗಳು ಗುಣಭೇದದಿಂದ ಮೂರು ವಿಧವೆಂದು, ಗುಣ ಮತ್ತು ಪ್ರಕೃತಿಯ ಮೂಲಭೂತ ಪ್ರಕಾರದ ಕರ್ಮಸಂಗ್ರಹ ಎಂದು ಹೇಳಲಾಗಿದೆ.

ಅರ್ಜುನಾ, ಅವುಗಳನ್ನು ಯಥಾವತ್ತಾಗಿ ಹೇಳುವೆನು ಕೇಳು.   

सर्वभूतेषु येनैकं

भावमव्ययमीक्षते।

अविभक्तं विभक्तेषु

तज्ज्ञानं विद्धि सात्विकम्॥१८.२०॥

ಸರ್ವಭೂತೇಷು ಯೇನೈಕಂ 

ಭಾವಮವ್ಯಯಮೀಕ್ಷತೇ ।

ಅವಿಭಕ್ತಂ ವಿಭಕ್ತೇಷು 

ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥ 18-20॥

सर्वभूतेषु येनैकं भावमव्ययमीक्षते।

अविभक्तं विभक्तेषु तज्ज्ञानं विद्धि सात्विकम्॥१८.२०॥

ಸರ್ವಭೂತೇಷು ಯೇನೈಕಂ ಭಾವಮವ್ಯಯಮೀಕ್ಷತೇ ।

ಅವಿಭಕ್ತಂ ವಿಭಕ್ತೇಷು ತಜ್ಜ್ಞಾನಂ ವಿದ್ಧಿ ಸಾತ್ತ್ವಿಕಮ್ ॥ 18-20॥

Arjuna, understand that

the Knowledge by which

one observes a single, undivided,

unchanging Existence in all beings,

though the beings are separate and divided,

such Knowledge is Sattvic.

ಅರ್ಜುನಾ, ಜೀವಿಗಳಲ್ಲಿ ಅಸಂಖ್ಯಾತ ರೂಪಗಳು, ಭಿನ್ನಭಿನ್ನವಾಗಿ ತೋರುವ ಸರ್ವಭೂತಗಳು ಇದ್ದರೂ ಸಹ ಅವೆಲ್ಲವುಗಳಲ್ಲಿ ಒಂದೇ ಅಭಿನ್ನವೂ ಅವ್ಯವವೂ ಆದ ಸ್ವಭಾವವನ್ನೂ, ಗ್ರಹಿಕೆಯನ್ನೂ, ಕಾಣುವ ಜ್ಞಾನವೇ ಸಾತ್ವಿಕ ಜ್ಞಾನ ಎಂದು ತಿಳಿದುಕೋ. 

पृथक्त्वेन तु यज्ज्ञानं

नानाभावान्पृथग्विधान्।

वेत्ति सर्वेषु भूतेषु

तज्ज्ञानं विद्धि राजसम्॥१८.२१॥

ಪೃಥಕ್ತ್ವೇನ ತು ಯಜ್ಜ್ಞಾನಂ 

ನಾನಾಭಾವಾನ್ಪೃಥಗ್ವಿಧಾನ್ ।

ವೇತ್ತಿ ಸರ್ವೇಷು ಭೂತೇಷು 

ತಜ್ಜ್ಞಾನಂ ವಿದ್ಧಿ ರಾಜಸಮ್ ॥ 18-21॥

पृथक्त्वेन तु यज्ज्ञानं नानाभावान्पृथग्विधान्।

वेत्ति सर्वेषु भूतेषु तज्ज्ञानं विद्धि राजसम्॥१८.२१॥

ಪೃಥಕ್ತ್ವೇನ ತು ಯಜ್ಜ್ಞಾನಂ ನಾನಾಭಾವಾನ್ಪೃಥಗ್ವಿಧಾನ್ ।

ವೇತ್ತಿ ಸರ್ವೇಷು ಭೂತೇಷು ತಜ್ಜ್ಞಾನಂ ವಿದ್ಧಿ ರಾಜಸಮ್ ॥ 18-21॥

Arjuna, understand that

that Knowledge by means of which

one sees different selves

in different beings,

all distinct from one another,

is said to be Rajasic.

ಅರ್ಜುನಾ, ಯಾವ ಜ್ಞಾನವು ಸಮಸ್ತ ಪ್ರಾಣಿಗಳಲ್ಲಿಯೂ, ಭಿನ್ನ ಲಕ್ಷಣವುಳ್ಳ ನಾನಾ ಆತ್ಮಗಳನ್ನು ಬೇರೆಬೇರೆಯಾಗಿ ಗುರುತಿಸುತ್ತದೆಯೋ, ಆ ಜ್ಞಾನವನ್ನು ರಾಜಸ ಜ್ಞಾನವೆಂದು ತಿಳಿ.

यत्तु कृत्स्नवदेकस्मिन्

कार्ये सक्तमहेतुकम्।

अतत्वार्थवदल्पं च

तत्तामसमुदाहृतम्॥१८.२२॥

ಯತ್ತು ಕೃತ್ಸ್ನವದೇಕಸ್ಮಿನ್

ಕಾರ್ಯೇ ಸಕ್ತಮಹೈತುಕಮ್ ।

ಅತತ್ತ್ವಾರ್ಥವದಲ್ಪಂ ಚ 

ತತ್ತಾಮಸಮುದಾಹೃತಮ್ ॥ 18-22॥

यत्तु कृत्स्नवदेकस्मिन् कार्ये सक्तमहेतुकम्।

अतत्वार्थवदल्पं च तत्तामसमुदाहृतम्॥१८.२२॥

ಯತ್ತು ಕೃತ್ಸ್ನವದೇಕಸ್ಮಿನ್ ಕಾರ್ಯೇ ಸಕ್ತಮಹೈತುಕಮ್ ।

ಅತತ್ತ್ವಾರ್ಥವದಲ್ಪಂ ಚ  ತತ್ತಾಮಸಮುದಾಹೃತಮ್ ॥ 18-22॥

That knowledge is said to be Tamasic

which confines itself solely

to a single object or image

and takes it to be everything –

this attitude is unreasonable,

untruthful and petty.

ಯಾವ ಬುದ್ಧಿಯು ಪ್ರಕೃತಿ ಕಾರ್ಯದಲ್ಲಿಯೇ ಎಲ್ಲವೂ ಇದೆ ಅಂದರೆ ಸತ್ಯದ ತಿಳುವಳಿಕೆಯಿಲ್ಲದೆ ಒಂದು ಬಗೆಯ ಕರ್ಮವೇ ಸರ್ವಸ್ವ ಎಂದು ಭಾವಿಸುತ್ತದೆಯೋ, ಅದರಲ್ಲೇ ಆಸಕ್ತಿ ಹೊಂದಿದೆಯೋ, ಅಂತಹ ಅವಿವೇಕದ, ಅಸತ್ಯದ ಮತ್ತು ಕ್ಷುಲ್ಲಕ ಜ್ಞಾನವು ತಾಮಸ ಜ್ಞಾನ ಎಂದು ಹೇಳಲ್ಪಟ್ಟಿದೆ.    

 नियतं सङ्गरहितं

अरागद्वेषतः कृतम्।

अफलप्रेप्सुना कर्म

यत्तत्सात्विकमुच्यते॥१८.२३॥

ನಿಯತಂ ಸಂಗರಹಿತಂ

ಅರಾಗದ್ವೇಷತಃ ಕೃತಮ್ ।

ಅಫಲಪ್ರೇಪ್ಸುನಾ ಕರ್ಮ 

ಯತ್ತತ್ಸಾತ್ತ್ವಿಕಮುಚ್ಯತೇ ॥ 18-23॥

नियतं सङ्गरहितं अरागद्वेषतः कृतम्।

अफलप्रेप्सुना कर्म यत्तत्सात्विकमुच्यते॥१८.२३॥

ನಿಯತಂ ಸಂಗರಹಿತಂ ಅರಾಗದ್ವೇಷತಃ ಕೃತಮ್ ।

ಅಫಲಪ್ರೇಪ್ಸುನಾ ಕರ್ಮ ಯತ್ತತ್ಸಾತ್ತ್ವಿಕಮುಚ್ಯತೇ ॥ 18-23॥

Three Kinds of Karma 

When one takes up the obligatory work

and acts without attachment and aversion

towards anyone,

and without desire for the fruit –

such work is said to be Sattvic.

ಮೂರು ವಿಧದ ಕರ್ಮಗಳು

ಫಲದ ಮೇಲೆ ಆಸೆಯಿಲ್ಲದೆ, ಕರ್ತೃತ್ವಾಭಿಮಾನವಿಲ್ಲದೆ, ರಾಗದ್ವೇಷಗಳಿಗೆ ಒಳಪಡದೆ, ನಿಯತವಾಗಿ ಯಾವ ಮೋಹವಿಲ್ಲದೆ ಮಾಡುವ ವಿಹಿತ ಕರ್ಮವು ಸಾತ್ವಿಕ ಕರ್ಮವೆಂದು ಹೇಳಲ್ಪಡುತ್ತದೆ.                                             

यत्तु कामेप्सुना कर्म

साहङ्कारेण वा पुनः।

क्रियते बहुलायासं

तद्राजसमुदाहृतम्॥१८.२४॥

ಯತ್ತು ಕಾಮೇಪ್ಸುನಾ ಕರ್ಮ 

ಸಾಹಂಕಾರೇಣ ವಾ ಪುನಃ ।

ಕ್ರಿಯತೇ ಬಹುಲಾಯಾಸಂ

ತದ್ರಾಜಸಮುದಾಹೃತಮ್ ॥ 18-24॥

यत्तु कामेप्सुना कर्म साहङ्कारेण वा पुनः।

क्रियते बहुलायासं तद्राजसमुदाहृतम्॥१८.२४॥

ಯತ್ತು ಕಾಮೇಪ್ಸುನಾ ಕರ್ಮ ಸಾಹಂಕಾರೇಣ ವಾ ಪುನಃ ।

ಕ್ರಿಯತೇ ಬಹುಲಾಯಾಸಂ ತದ್ರಾಜಸಮುದಾಹೃತಮ್ ॥ 18-24॥

 When work is done by an egoistic person

With passion for its fruit,

And which involves much labour,

it is said to be Rajasic work. 

ಆದರೆ ಫಲಾಕಾಂಕ್ಷೆಯುಳ್ಳವನಾದ ಅಹಂಕಾರಿಯು ಯಾವ ಕರ್ಮವನ್ನು ಮಾಡುತ್ತಾನೆಯೋ ಹಾಗೂ ಬಹಳ ದುಡಿಮೆಯನ್ನು ಬೇಡುವ ಕರ್ಮ ಅದಾಗಿರುತ್ತದೆಯೋ ಅಂತಹ ಕರ್ಮವನ್ನು ರಾಜಸಿಕ ಕರ್ಮ ಎನ್ನಲಾಗುತ್ತದೆ.                       अनुबन्धं क्षयं हिंसां

अनवेक्ष्य च पौरुषम्।

मोहादारभ्यते कर्म

यत्तत्तामसमुच्यते॥१८.२५॥

ಅನುಬಂಧಂ ಕ್ಷಯಂ ಹಿಂಸಾಂ

ಅನಪೇಕ್ಷ್ಯ ಚ ಪೌರುಷಮ್ ।

ಮೋಹಾದಾರಭ್ಯತೇ ಕರ್ಮ 

ಯತ್ತತ್ತಾಮಸಮುಚ್ಯತೇ ॥ 18-25॥

अनुबन्धं क्षयं हिंसां अनवेक्ष्य च पौरुषम्।

मोहादारभ्यते कर्म यत्तत्तामसमुच्यते॥१८.२५॥

ಅನುಬಂಧಂ ಕ್ಷಯಂ ಹಿಂಸಾಂ ಅನಪೇಕ್ಷ್ಯ ಚ ಪೌರುಷಮ್ ।

ಮೋಹಾದಾರಭ್ಯತೇ ಕರ್ಮ ಯತ್ತತ್ತಾಮಸಮುಚ್ಯತೇ ॥ 18-25॥

When one takes up work

through delusion,

or lack of discrimination,

without caring for its consequences,

like loss and violence,

and without competence, —

such work is said to be Tamasic.

ಹಿಂದು ಮುಂದು ನೋಡದೆ, ಕಷ್ಟ ನಿಷ್ಠುರಗಳನ್ನು ಗಮನಿಸದೆ, ತನ್ನಿಂದಾಗುತ್ತದೆಯೋ ಇಲ್ಲವೋ ಎಂಬುದನ್ನೂ ಗಮನಿಸದೆ, ಕರ್ಮಕ್ಕೆ ಬೇಕಾಗುವ ಶಕ್ತಿ ಕ್ಷಯ, ಹಿಂಸೆ, ಸಾಮರ್ಥ್ಯ ಇವುಗಳನ್ನು ಲೆಕ್ಕಿಸದೆ ಮೋಹದಿಂದ ಮಾಡುವ ಕರ್ಮ ತಾಮಸಿಕ ಕರ್ಮ ಎಂದು ಅನಿಸಿಕೊಳ್ಳುತ್ತದೆ.                                                                                    

मुक्तसङ्गोऽनहंवादी

धृत्युत्साहसमन्वितः।

सिध्यसिध्योर्निर्विकारः

कर्ता सात्विक उच्यते॥१८.२६॥

ಮುಕ್ತಸಂಗೋಽನಹಂವಾದೀ 

ಧೃತ್ಯುತ್ಸಾಹಸಮನ್ವಿತಃ ।

ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ 

ಕರ್ತಾ ಸಾತ್ತ್ವಿಕ ಉಚ್ಯತೇ ॥ 18-26॥

मुक्तसङ्गोऽनहंवादी धृत्युत्साहसमन्वितः।

सिध्यसिध्योर्निर्विकारः कर्ता सात्विक उच्यते॥१८.२६॥

ಮುಕ್ತಸಂಗೋಽನಹಂವಾದೀ ಧೃತ್ಯುತ್ಸಾಹಸಮನ್ವಿತಃ ।

ಸಿದ್ಧ್ಯಸಿದ್ಧ್ಯೋರ್ನಿರ್ವಿಕಾರಃ ಕರ್ತಾ ಸಾತ್ತ್ವಿಕ ಉಚ್ಯತೇ ॥ 18-26॥

 Three different Kinds of Doers of Work

 He who is without attachment and

without egoism, but full of courage

and enthusiasm, and

who remains unperturbed by success or failure –

such a doer is Sattvic.

ಮೂರು ವಿಧದ ಕರ್ತರು 

 ಫಲಾಪೇಕ್ಷೆಯಿಲ್ಲದೆ, ಯಾವುದೇ ಬಂಧವಿಲ್ಲದೆ, ಅಹಂಕಾರವಿಲ್ಲದೆ, ಸೋಲು ಅಥವಾ ಗೆಲುವಿನಿಂದ ವಿಚಲಿತನಾಗದೆ, ಧೃಢನಿಶ್ಚಯ ಮತ್ತು ಉತ್ಸಾಹದಿಂದ ಎದೆಗುಂದದೆ ತನ್ನ ಕರ್ಮವನ್ನು ಮಾಡುವವನು ಸಾತ್ವಿಕ ಕರ್ತನೆನಿಸುತ್ತಾನೆ.     

रागी कर्मफलप्रेप्सु:

लुब्धो हिंसात्मकोऽशुचिः।

हर्षशोकान्वितः कर्ता

राजसः परिकीर्तितः॥१८.२७॥

ರಾಗೀ ಕರ್ಮಫಲಪ್ರೇತ್ಸುಃ

ಲುಬ್ಧೋ ಹಿಂಸಾತ್ಮಕೋಽಶುಚಿಃ ।

ಹರ್ಷಶೋಕಾನ್ವಿತಃ ಕರ್ತಾ 

ರಾಜಸಃ ಪರಿಕೀರ್ತಿತಃ ॥ 18-27॥

रागी कर्मफलप्रेप्सु: लुब्धो हिंसात्मकोऽशुचिः।

हर्षशोकान्वितः कर्ता राजसः परिकीर्तितः॥१८.२७॥

ರಾಗೀ ಕರ್ಮಫಲಪ್ರೇತ್ಸುಃ ಲುಬ್ಧೋ ಹಿಂಸಾತ್ಮಕೋಽಶುಚಿಃ ।

ಹರ್ಷಶೋಕಾನ್ವಿತಃ ಕರ್ತಾ ರಾಜಸಃ ಪರಿಕೀರ್ತಿತಃ ॥ 18-27॥

One who has attachment to the fruit of his actions,

one who is greedy, violent and unclean,

and one who feels glad when his desire is fulfilled,

but feels sad if it is not fulfilled, —

such a person is called Rajasic in his his actions.

ಆಸಕ್ತಿಯುಳ್ಳವನೂ, ಕರ್ಮಫಲವನ್ನು ಅಪೇಕ್ಷಿಸುವವನೂ, ಲೋಭಿಯೂ, ದುರಾಸೆಯುಳ್ಳವನೂ, ಸದಾ ಅಸೂಯೆಪಡುವವನೂ, ಹಿಂಸಾಸ್ವಭಾವವುಳ್ಳವನೂ, ಶುಚಿತ್ವವಿಲ್ಲದವನೂ, ಹರ್ಷಶೋಕಗಳಿಂದ ಕೂಡಿದವನೂ ಆದ ಕರ್ತೃವು ರಾಜಸಿಕ ಕರ್ತನೆನಿಸುತ್ತಾನೆ.                                                                                          

अयुक्तः प्राकृतः स्तब्धः

शठो नैष्कृतिकोऽलसः।

विषादी दीर्घसूत्री च

कर्ता तामस उच्यते॥१८.२८॥

ಅಯುಕ್ತಃ ಪ್ರಾಕೃತಃ ಸ್ತಬ್ಧಃ 

ಶಠೋ ನೈಷ್ಕೃತಿಕೋಽಲಸಃ ।

ವಿಷಾದೀ ದೀರ್ಘಸೂತ್ರೀ ಚ 

ಕರ್ತಾ ತಾಮಸ ಉಚ್ಯತೇ ॥ 18-28॥

अयुक्तः प्राकृतः स्तब्धः शठो नैष्कृतिकोऽलसः।

विषादी दीर्घसूत्री च कर्ता तामस उच्यते॥१८.२८॥

ಅಯುಕ್ತಃ ಪ್ರಾಕೃತಃ ಸ್ತಬ್ಧಃ ಶಠೋ ನೈಷ್ಕೃತಿಕೋಽಲಸಃ ।

ವಿಷಾದೀ ದೀರ್ಘಸೂತ್ರೀ ಚ ಕರ್ತಾ ತಾಮಸ ಉಚ್ಯತೇ ॥ 18-28॥

A Tamasic doer is found to be

un-concentrated, childish, unbending,

deceitful, malicious, lazy,

pessimistic, negligent and procrastinating.

ಸ್ಥಿರಚಿತ್ತವಿಲ್ಲದವನೂ, ಬಾಲಿಶಸ್ವಭಾವದವನೂ, ಹಟಮಾರಿಯೂ, ಕಪಟಿಯೂ, ಮಾತ್ಸರ್ಯವುಳ್ಳವನೂ, ಸೋಮಾರಿಯೂ, ನಿರಾಶಾವಾದಿಯೂ, ಅಸಡ್ಡೆಯಾಗಿರುವನೂ, ಕಾಲಹರಣ ಮಾಡುವವನೂ, ಶಾಸ್ತ್ರಸಂಸ್ಕಾರವಿಲ್ಲದವನೂ, ಇನ್ನೊಬ್ಬರ ವೃತ್ತಿಯನ್ನು ನಾಶಮಾಡುವವನೂ ಆದ ಕರ್ತನನ್ನು ತಾಮಸಿಕ ಕರ್ತನೆನ್ನುತ್ತಾರೆ.                                                                                                                  बुद्धेर्भेदं धृतेश्चैव

गुणतस्त्रिविधं श्रुणु।

प्रोच्यमानमशेषेण

पृथक्त्वेन धनंजय॥१८.२९॥

ಬುದ್ಧೇರ್ಭೇದಂ ಧೃತೇಶ್ಚೈವ

ಗುಣತಸ್ತ್ರಿವಿಧಂ ಶೃಣು ।

ಪ್ರೋಚ್ಯಮಾನಮಶೇಷೇಣ 

ಪೃಥಕ್ತ್ವೇನ ಧನಂಜಯ ॥ 18-29॥

बुद्धेर्भेदं धृतेश्चैव गुणतस्त्रिविधं श्रुणु।

प्रोच्यमानमशेषेण पृथक्त्वेन धनंजय॥१८.२९॥

ಬುದ್ಧೇರ್ಭೇದಂ ಧೃತೇಶ್ಚೈವ ಗುಣತಸ್ತ್ರಿವಿಧಂ ಶೃಣು ।

ಪ್ರೋಚ್ಯಮಾನಮಶೇಷೇಣ ಪೃಥಕ್ತ್ವೇನ ಧನಂಜಯ ॥ 18-29॥

Three Kinds of Buddhi and Dhruti or Intellect and Determination.

  Arjuna,

 Listen to the three-fold differences

 in respect of Buddhi and Dhruti, or

 Intellect and Determination,

 according to the operation of the Three Gunas,

 Sattva, Rajas and Tamas,

 as are elucidated fully and separately.

ಮೂರು ವಿಧದ ಬುದ್ಧಿ ಮತ್ತು ಧೃತಿ ಅಥವಾ ಧೃಢ ಸಂಕಲ್ಪ

 ಅರ್ಜುನಾ, ಬುದ್ಧಿಯ ಮತ್ತು ಧೃತಿಯ ಭೇದವು ಗುಣದಿಂದಲೇ ಮೂರು ವಿಧವಾಗಿವೆ. ತ್ರಿಗುಣಗಳಾದ ಸತ್ವಗುಣ, ರಜೋಗುಣ ಹಾಗೂ ತಮೋಗುಣದ ಕ್ರಿಯೆಯ ಅನುಸಾರವಾಗಿ ಅದನ್ನು ಸಂಪೂರ್ಣವಾಗಿ ಬೇರೆಬೇರೆಯಾಗಿ ವಿಂಗಡಿಸಿ ಹೇಳುತ್ತೇನೆ, ಕೇಳು.     

प्रव्रुत्तिं च निवृत्तिं च

कार्याकlर्ये भयाभये।

बन्धं मोक्षं च या वेत्ति

बुद्धिः सा पार्थ सात्विकी॥१८.३०॥

ಪ್ರವೃತ್ತಿಂ ಚ ನಿವೃತ್ತಿಂ ಚ 

ಕಾರ್ಯಾಕಾರ್ಯೇ ಭಯಾಭಯೇ ।

ಬಂಧಂ ಮೋಕ್ಷಂ ಚ ಯಾ ವೇತ್ತಿ 

ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥ 18-30॥

प्रव्रुत्तिं च निवृत्तिं च कार्याकlर्ये भयाभये।

बन्धं मोक्षं च या वेत्ति बुद्धिः सा पार्थ सात्विकी॥१८.३०॥

ಪ್ರವೃತ್ತಿಂ ಚ ನಿವೃತ್ತಿಂ ಚ ಕಾರ್ಯಾಕಾರ್ಯೇ ಭಯಾಭಯೇ ।

ಬಂಧಂ ಮೋಕ್ಷಂ ಚ ಯಾ ವೇತ್ತಿ ಬುದ್ಧಿಃ ಸಾ ಪಾರ್ಥ ಸಾತ್ತ್ವಿಕೀ ॥ 18-30॥

Arjuna,

That Intellect or Buddhi is Sattvic

Which is able to distinguish between

action and inaction,

duty and non-duty,

fear and fearlessness and

bondage and liberation.

ಅರ್ಜುನಾ, ಇದು ಪ್ರವೃತ್ತಿ ಮಾರ್ಗ, ಇದು ನಿವೃತ್ತಿ ಮಾರ್ಗ.

ಇದನ್ನು ಮಾಡಬೇಕು, ಇದನ್ನು ಮಾಡಬಾರದು.

ಇದಕ್ಕೆ ಅಂಜಬೇಕು, ಇದಕ್ಕೆ ಅಂಜಬಾರದು.

ಇದು ಬಂಧ, ಇದು ಮೋಕ್ಷ- ಎಂದು ಯಾವ ಬುದ್ಧಿಯು ತಿಳಿಯಬಲ್ಲದೋ ಅದೇ ಸಾತ್ವಿಕ ಬುದ್ಧಿಯಾಗಿದೆ.           यया धर्ममधर्मं च

कार्यं चाकार्यमेव च।

अयथावत्प्रजानाति

बुद्धिः सा पार्थ राजसी॥१८.३१॥

ಯಯಾ ಧರ್ಮಮಧರ್ಮಂ ಚ 

ಕಾರ್ಯಂ ಚಾಕಾರ್ಯಮೇವ ಚ ।

ಅಯಥಾವತ್ಪ್ರಜಾನಾತಿ 

ಬುದ್ಧಿಃ ಸಾ ಪಾರ್ಥ ರಾಜಸೀ ॥ 18-31॥

यया धर्ममधर्मं च कार्यं चाकार्यमेव च।

अयथावत्प्रजानाति बुद्धिः सा पार्थ राजसी॥१८.३१॥

ಯಯಾ ಧರ್ಮಮಧರ್ಮಂ ಚ ಕಾರ್ಯಂ ಚಾಕಾರ್ಯಮೇವ ಚ ।

ಅಯಥಾವತ್ಪ್ರಜಾನಾತಿ ಬುದ್ಧಿಃ ಸಾ ಪಾರ್ಥ ರಾಜಸೀ ॥ 18-31॥

Arjuna,

Rajasic Buddhi is that

by which one has wrong understanding

of Dharma and Adharma,

and Duty and non-Duty.

ಧರ್ಮ- ಅಧರ್ಮಗಳ ನಡುವೆ ಮಾಡಬಹುದಾದ ಮತ್ತು ಮಾಡಬಾರದ ಕಾರ್ಯಗಳ ನಡುವೆ ವ್ಯತ್ಯಾಸವನ್ನು ಗ್ರಹಿಸದ ಬುದ್ಧಿಯು ರಾಜಸಿಕ ಬುದ್ಧಿ ಎನಿಸುತ್ತದೆ.                                                                                                                 

अधर्मं धर्ममिति या

मन्यते तमसावृता।

सर्वार्थान्विपरीतांश्च

बुद्धिः सा पार्थ तामसी॥१८.३२॥

ಅಧರ್ಮಂ ಧರ್ಮಮಿತಿ ಯಾ 

ಮನ್ಯತೇ ತಮಸಾವೃತಾ ।

ಸರ್ವಾರ್ಥಾನ್ವಿಪರೀತಾಂಶ್ಚ 

ಬುದ್ಧಿಃ ಸಾ ಪಾರ್ಥ ತಾಮಸೀ ॥ 18-32॥

अधर्मं धर्ममिति या मन्यते तमसावृता।

सर्वार्थान्विपरीतांश्च बुद्धिः सा पार्थ तामसी॥१८.३२॥

ಅಧರ್ಮಂ ಧರ್ಮಮಿತಿ ಯಾ ಮನ್ಯತೇ ತಮಸಾವೃತಾ ।

ಸರ್ವಾರ್ಥಾನ್ವಿಪರೀತಾಂಶ್ಚ ಬುದ್ಧಿಃ ಸಾ ಪಾರ್ಥ ತಾಮಸೀ ॥ 18-32॥

 Arjuna,

When the Buddhi is clouded

By ignorance and considers

what is Dharma as Adharma

and understands all things contrarily,

such Buddhi is Tamasic.

ಅರ್ಜುನಾ, ಅಜ್ಞಾನವೆಂಬ ಕತ್ತಲೆಯ ಮುಸುಕಿನಿಂದ ಆವರಿಸಲ್ಪಟ್ಟು, ಯಾವ ಬುದ್ಧಿಯು ಅಧರ್ಮವನ್ನು ಧರ್ಮವನ್ನಾಗಿ ತಿಳಿಯುತ್ತದೆಯೋ ಹಾಗೂ ಯಾವ ವಿಷಯವನ್ನೇ ಆಗಲಿ ವಿರುದ್ಧವಾಗಿ ಗ್ರಹಿಸುವುದೋ ಅದು ತಾಮಸ ಬುದ್ಧಿಯಾಗಿದೆ.                                                                                                                

धृत्या यया धारयते

मनःप्राणेन्द्रियक्रियाः।

योगेनाव्यभिचारिण्या

धृतिः सा पार्थ सात्विकी॥१८.३३॥

ಧೃತ್ಯಾ ಯಯಾ ಧಾರಯತೇ 

ಮನಃಪ್ರಾಣೇಂದ್ರಿಯಕ್ರಿಯಾಃ ।

ಯೋಗೇನಾವ್ಯಭಿಚಾರಿಣ್ಯಾ 

ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥ 18-33॥

धृत्या यया धारयते मनःप्राणेन्द्रियक्रियाः।

योगेनाव्यभिचारिण्या धृतिः सा पार्थ सात्विकी॥१८.३३॥

ಧೃತ್ಯಾ ಯಯಾ ಧಾರಯತೇ ಮನಃಪ್ರಾಣೇಂದ್ರಿಯಕ್ರಿಯಾಃ ।

ಯೋಗೇನಾವ್ಯಭಿಚಾರಿಣ್ಯಾ ಧೃತಿಃ ಸಾ ಪಾರ್ಥ ಸಾತ್ತ್ವಿಕೀ ॥ 18-33॥

 Arjuna,

If one’s determination is unwavering

and fully concentrated

to carry out the functions of the mind,

vital airs and senses,

in a proper way,

such determination is Sattvic.

ಅರ್ಜುನಾ, ಇಂದ್ರಿಯ, ಪ್ರಾಣ, ಮನೋವ್ಯಾಪಾರಗಳನ್ನು ಚೆಲ್ಲಾಪಿಲ್ಲಿಯಾಗದಂತೆ ನಿಯಂತ್ರಿಸುವ, ಒಂದೇ ನಿಟ್ಟಿನಲ್ಲಿ ಕೇಂದ್ರೀಕರಿಸಿ ಇಟ್ಟುಕೊಳ್ಳಬಲ್ಲ ಧೃತಿ ಅಥವಾ ಸಂಕಲ್ಪವನ್ನು ಸಾತ್ವಿಕ ಧೃತಿಯೆನ್ನುತ್ತಾರೆ.                                            

यया तु धर्मकामार्थान्

धृत्या धारयतेऽर्जुन।

प्रसङ्गेन फलाकाङ्क्षी

धृतिः सा पार्थ राजसी॥१८.३४॥

ಯಯಾ ತು ಧರ್ಮಕಾಮಾರ್ಥಾನ್

ಧೃತ್ಯಾ ಧಾರಯತೇಽರ್ಜುನ ।

ಪ್ರಸಂಗೇನ ಫಲಾಕಾಂಕ್ಷೀ 

ಧೃತಿಃ ಸಾ ಪಾರ್ಥ ರಾಜಸೀ ॥ 18-34॥

यया तु धर्मकामार्थान् धृत्या धारयतेऽर्जुन।

प्रसङ्गेन फलाकाङ्क्षी धृतिः सा पार्थ राजसी॥१८.३४॥

ಯಯಾ ತು ಧರ್ಮಕಾಮಾರ್ಥಾನ್ ಧೃತ್ಯಾ ಧಾರಯತೇಽರ್ಜುನ ।

ಪ್ರಸಂಗೇನ ಫಲಾಕಾಂಕ್ಷೀ  ಧೃತಿಃ ಸಾ ಪಾರ್ಥ ರಾಜಸೀ ॥ 18-34॥

Arjuna,

If one shows his Determination

to uphold Dharma, Artha and Kama only,

with desire for fruits of actions,

such Determination is Rajasic.

ಅರ್ಜುನಾ, ಫಲಾಕಾಂಕ್ಷಿಯು ಅತ್ಯಂತ ಆಸಕ್ತಿಯಿಂದ ಧರ್ಮ, ಅರ್ಥ, ಕಾಮಗಳನ್ನು ಮಾತ್ರ ಎತ್ತಿ ಹಿಡಿಯುತ್ತಾನೆಯೋ, ಅವಕ್ಕೆ ಬಲವಾಗಿ ಧೃಢ ಸಂಕಲ್ಪದಿಂದ ಅಂಟಿಕೊಂಡಿರುತ್ತಾನೆಯೋ, ಅಂತಹ ಸಂಕಲ್ಪಕ್ಕೆ ರಾಜಸಿಕ ಧೃತಿ ಎನ್ನುತ್ತಾರೆ.                                                                                                           

यया स्वप्नं भयं शोकं

विषादं मदमेव च।

न विमुञ्चति दुर्मेधा

धृतिः सा पार्थ तामसी॥१८.३५॥

ಯಯಾ ಸ್ವಪ್ನಂ ಭಯಂ ಶೋಕಂ 

ವಿಷಾದಂ ಮದಮೇವ ಚ ।

ನ ವಿಮುಂಚತಿ ದುರ್ಮೇಧಾ 

ಧೃತಿಃ ಸಾ ಪಾರ್ಥ ತಾಮಸೀ ॥ 18-35॥

ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥ 18-35॥

यया स्वप्नं भयं शोकं विषादं मदमेव च।

न विमुञ्चति दुर्मेधा धृतिः सा पार्थ तामसी॥१८.३५॥

ಯಯಾ ಸ್ವಪ್ನಂ ಭಯಂ ಶೋಕಂ ವಿಷಾದಂ ಮದಮೇವ ಚ ।

ನ ವಿಮುಂಚತಿ ದುರ್ಮೇಧಾ ಧೃತಿಃ ಸಾ ಪಾರ್ಥ ತಾಮಸೀ ॥ 18-35॥

 Arjuna,

Tamasic is that Determination

with which a mean-minded person

does not give up, but clings to,

sleep, fear, grief, dejection and

indulgence in pleasures.

ಅರ್ಜುನಾ, ದುಷ್ಟ ಬುದ್ಧಿಯುಳ್ಳ ಮನುಷ್ಯನು ಯಾವ ಧಾರಣ ಶಕ್ತಿಯ ಮೂಲಕ ನಿದ್ರೆ, ಭಯ, ಶೋಕ, ವಿಷಾದ, ಜುಗುಪ್ಸೆ ಮತ್ತು ಉನ್ಮತ್ತತೆ ಇವುಗಳನ್ನು ಬಿಡಲಾಗುವುದಿಲ್ಲವೋ ಅರ್ಥಾತ್ ಧಾರಣೆ ಮಾಡಿರುತ್ತಾನೆಯೋ ಆ ಧಾರಣ ಶಕ್ತಿಯನ್ನು ತಾಮಸಿಕ ಧೃತಿ ಎನ್ನುತ್ತಾರೆ.      

सुखं त्विदानीं त्रिविधं

शृणु मे भरतर्षभ।

अभ्यासाद्रमते यत्र

दुःखान्तं च निगच्छति॥१८.३६॥

ಸುಖಂ ತ್ವಿದಾನೀಂ ತ್ರಿವಿಧಂ 

ಶೃಣು ಮೇ ಭರತರ್ಷಭ ।

ಅಭ್ಯಾಸಾದ್ರಮತೇ ಯತ್ರ 

ದುಃಖಾಂತಂ ಚ ನಿಗಚ್ಛತಿ ॥ 18-36॥

सुखं त्विदानीं त्रिविधं शृणु मे भरतर्षभ।

अभ्यासाद्रमते यत्र दुःखान्तं च निगच्छति॥१८.३६॥

ಸುಖಂ ತ್ವಿದಾನೀಂ ತ್ರಿವಿಧಂ ಶೃಣು ಮೇ ಭರತರ್ಷಭ ।

ಅಭ್ಯಾಸಾದ್ರಮತೇ ಯತ್ರ ದುಃಖಾಂತಂ ಚ ನಿಗಚ್ಛತಿ ॥ 18-36॥

यत्तदग्रे विषमिव

परिणामेऽमृतोपमम्।

तत्सुखं सात्विकं प्रोक्तम्

आत्मबुद्धिप्रसादजम्॥१८.३७॥

ಯತ್ತದಗ್ರೇ ವಿಷಮಿವ 

ಪರಿಣಾಮೇಽಮೃತೋಪಮಮ್ ।                   

ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್

ಆತ್ಮಬುದ್ಧಿಪ್ರಸಾದಜಮ್ ॥ 18-37॥

यत्तदग्रे विषमिव परिणामेऽमृतोपमम्।

तत्सुखं सात्विकं प्रोक्तम् आत्मबुद्धिप्रसादजम्॥१८.३७॥

ಯತ್ತದಗ್ರೇ ವಿಷಮಿವ ಪರಿಣಾಮೇಽಮೃತೋಪಮಮ್ ।                   

ತತ್ಸುಖಂ ಸಾತ್ತ್ವಿಕಂ ಪ್ರೋಕ್ತಮ್ ಆತ್ಮಬುದ್ಧಿಪ್ರಸಾದಜಮ್ ॥ 18-37॥

Now, listen, Arjuna,

Sukham, Pleasure, is also of three kinds:

Sattvic pleasure is that which is acquired

through practice.

When the initial pain comes to an end,

one takes delight in such Pleasure.

It seems like poison in the beginning

but feels like Amruta in the end.

Such Pleasure is born of the clarity of one’s mind.

ಹೇ ಅರ್ಜುನಾ! ಗುಣಭೇದಕ್ಕನುಸಾರವಾಗಿ ಈಗ ಮೂರು ಬಗೆಯಾದ ಸುಖವನ್ನು ಹೇಳುತ್ತೇನೆ.

ಕೇಳು. ಸಾತ್ವಿಕ ಸುಖಃ ಎನ್ನುವುದು ಮತ್ತೆ ಮತ್ತೆ ಅಭ್ಯಾಸ ಮಾಡುವುದರಿಂದ ದೊರಕುತ್ತದೆ. ಪ್ರಾರಂಭದಲ್ಲಿದ್ದ ಬಾಧೆಯು ಅಂತ್ಯಕಂಡಾಗ ಸುಖದ ಅನುಭೂತಿ ಉಂಟಾಗುತ್ತದೆ. ಮೊದಲಿಗೆ ಅದು ವಿಷದಂತೆ ಕಂಡರೂ ಕಡೆಯಲ್ಲಿ ಅದು ಅಮೃತಸಮಾನವಾಗಿರುತ್ತದೆ. 

ತಿಳಿಯಾದ ಬುದ್ಧಿಯಲ್ಲಿ ಆವಿರ್ಭವಿಸುವ, ಆತ್ಮಬುದ್ಧಿಯ ಪ್ರಸನ್ನತೆಯಿಂದ ಹುಟ್ಟುವ ಆ ಸುಖವನ್ನು ಸಾತ್ವಿಕ ಸುಖಃ ಎನ್ನುತ್ತಾರೆ.          

विषयेन्द्रियसंयोगात्

यत्तदग्रेऽमृतोपमम्।

परिणामे विषमिव

तत्सुखं राजसं स्मृतम्॥१८.३८॥

ವಿಷಯೇಂದ್ರಿಯಸಂಯೋಗಾತ್

ಯತ್ತದಗ್ರೇಽಮೃತೋಪಮಮ್ ।

ಪರಿಣಾಮೇ ವಿಷಮಿವ 

ತತ್ಸುಖಂ ರಾಜಸಂ ಸ್ಮೃತಮ್ ॥ 18-38॥

विषयेन्द्रियसंयोगात् यत्तदग्रेऽमृतोपमम्।

परिणामे विषमिव तत्सुखं राजसं स्मृतम्॥१८.३८॥

ವಿಷಯೇಂದ್ರಿಯಸಂಯೋಗಾತ್ ಯತ್ತದಗ್ರೇಽಮೃತೋಪಮಮ್ ।

ಪರಿಣಾಮೇ ವಿಷಮಿವ ತತ್ಸುಖಂ ರಾಜಸಂ ಸ್ಮೃತಮ್ ॥ 18-38॥

Rajasic Pleasure is that which comes

due to contact between senses and their objects

like sound, sight, etc.

It is felt Amruta-like in the beginning

but in the end turns out poison-like.

ಇಂದ್ರಿಯಗಳು ತಮ್ಮ ವಸ್ತುವಿನೊಡನೆ ಅಂದರೆ ಸ್ಪರ್ಶ, ಶಬ್ದ, ನೋಟ ಇತ್ಯಾದಿಗಳೊಡನೆ ಸಂಪರ್ಕ ಪಡೆಯುವುದರಿಂದ ಒಂದು ಬಗೆಯ ಸುಖವು ಉಂಟಾಗುತ್ತದೆ. ಅಂತಹ ವಿಷಯೇಂದ್ರಿಯಗಳ ಸಂಯೋಗದಿಂದ ಯಾವ ಸುಖವು ಮೊದಲು ಅಮೃತಸದೃಶವಾಗಿಯೂ ಕೊನೆಯಲ್ಲಿ ವಿಷದಂತಾಗುವುದೋ ಆ ಸುಖವು ರಾಜಸಿಕ ಸುಖ ಎಂದೆನಿಸುತ್ತದೆ.                                                                                                              

यदग्रे चानुबन्धे च

सुखं मोहनमात्मनः।

निद्रालस्यप्रमादोत्थं

तत्तामसमुदाहृतम्॥१८.३९॥

ಯದಗ್ರೇ ಚಾನುಬಂಧೇ ಚ 

ಸುಖಂ ಮೋಹನಮಾತ್ಮನಃ ।

ನಿದ್ರಾಲಸ್ಯಪ್ರಮಾದೋತ್ಥಂ 

ತತ್ತಾಮಸಮುದಾಹೃತಮ್ ॥ 18-39॥

यदग्रे चानुबन्धे च सुखं मोहनमात्मनः।

निद्रालस्यप्रमादोत्थं तत्तामसमुदाहृतम्॥१८.३९॥

ಯದಗ್ರೇ ಚಾನುಬಂಧೇ ಚ ಸುಖಂ ಮೋಹನಮಾತ್ಮನಃ ।

ನಿದ್ರಾಲಸ್ಯಪ್ರಮಾದೋತ್ಥಂ ತತ್ತಾಮಸಮುದಾಹೃತಮ್ ॥ 18-39॥

Tamasic Pleasure is that

which causes delusion,

both in the beginning

and thereafter till the end.

It arises from sleep, laziness and error.

ಯಾವ ಸುಖವು ಆರಂಭದಲ್ಲಿ ಮತ್ತು ಅಲ್ಲಿಂದ ಕೊನೆಯವರೆಗೂ ಮೋಹವನ್ನು ಉಂಟುಮಾಡುತ್ತದೆಯೋ, ನಿದ್ರೆ, ಆಲಸ್ಯ, ಪ್ರಮಾದ- ಇವುಗಳಿಂದ ಉಂಟಾದ ಆ ಸುಖವು ತಾಮಸಿಕ ಸುಖ ಎಂದು ಹೇಳಲ್ಪಟ್ಟಿದೆ.   

न तदस्ति पृथिव्यां वा

दिवि देवेषु वा पुनः।

सत्वं प्रकृतिजैर्मुक्तं

यदेभिः स्यात्त्रिभिर्गुणैः॥१८.४०॥

ನ ತದಸ್ತಿ ಪೃಥಿವ್ಯಾಂ ವಾ 

ದಿವಿ ದೇವೇಷು ವಾ ಪುನಃ ।

ಸತ್ತ್ವಂ ಪ್ರಕೃತಿಜೈರ್ಮುಕ್ತಂ 

ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ ॥ 18-40॥

न तदस्ति पृथिव्यां वा दिवि देवेषु वा पुनः।

सत्वं प्रकृतिजैर्मुक्तं यदेभिः स्यात्त्रिभिर्गुणैः॥१८.४०॥

ನ ತದಸ್ತಿ ಪೃಥಿವ್ಯಾಂ ವಾ ದಿವಿ ದೇವೇಷು ವಾ ಪುನಃ ।

ಸತ್ತ್ವಂ ಪ್ರಕೃತಿಜೈರ್ಮುಕ್ತಂ ಯದೇಭಿಃ ಸ್ಯಾತ್ತ್ರಿಭಿರ್ಗುಣೈಃ ॥ 18-40॥

There is no being free from

the Three Constituents or Gunas

of Prakruti – that is,

Sattva, Rajas and Tamas,

among the humans in this world

or among the gods in Heaven.

ಪ್ರಕೃತಿಯಿಂದ ಹುಟ್ಟಿದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಈ ಮೂರು ಗುಣಗಳಿಂದ ಮುಕ್ತವಾಗಿರುವ ಪ್ರಾಣಿ ಸಮೂಹವು ಪೃಥ್ವಿಯಲ್ಲಾಗಲೀ, ಸ್ವರ್ಗದಲ್ಲಿರುವ ದೇವತೆಗಳಲ್ಲಾಗಲೀ ಇಲ್ಲ.        

ब्राह्मणक्षत्रियविशां

शूद्राणां च परंतप।

कर्माणि प्रविभक्तानि

स्वभावप्रभवैर्गुणैः॥१८.४१॥

ಬ್ರಾಹ್ಮಣಕ್ಷತ್ರಿಯವಿಶಾಂ 

ಶೂದ್ರಾಣಾಂ ಚ ಪರಂತಪ ।

ಕರ್ಮಾಣಿ ಪ್ರವಿಭಕ್ತಾನಿ 

ಸ್ವಭಾವಪ್ರಭವೈರ್ಗುಣೈಃ ॥ 18-41॥

 ब्राह्मणक्षत्रियविशां शूद्राणां च परंतप।

कर्माणि प्रविभक्तानि स्वभावप्रभवैर्गुणैः॥१८.४१॥

ಬ್ರಾಹ್ಮಣಕ್ಷತ್ರಿಯವಿಶಾಂ ಶೂದ್ರಾಣಾಂ ಚ ಪರಂತಪ ।

ಕರ್ಮಾಣಿ ಪ್ರವಿಭಕ್ತಾನಿ ಸ್ವಭಾವಪ್ರಭವೈರ್ಗುಣೈಃ ॥ 18-41॥

 The functions and activities

of the four classes of people,

namely Brahmanas, Kshatriyas, Vaishyas and Shudras,

are determined, and allotted to them,

on the basis of their Gunas:

Sattva, Rajas and Tamas.

ಹೇ ಪರಂತಪನೇ! ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಮತ್ತು ಶೂದ್ರರು ಎಂಬ ನಾಲ್ಕು ವರ್ಣದವರ ಚಟುವಟಿಕೆ ಮತ್ತು ಕರ್ತವ್ಯಗಳನ್ನು ಅವರವರ ಸ್ವಭಾವದಿಂದ ಹುಟ್ಟಿದ, ಪ್ರಕೃತಿಜನ್ಯವಾದ ಸಾತ್ವಿಕ, ರಾಜಸಿಕ ಮತ್ತು ತಾಮಸಿಕ ಎಂಬ ಗುಣಗಳ ಆಧಾರದ ಮೇಲೆ ನಿರ್ಧರಿಸಿ ವಿಭಾಗಿಸಲ್ಪಟ್ಟಿದೆ.

शमो दमस्तपः शौचं

क्षान्तिरार्जवमेव च।

ज्ञानं विज्ञानमास्तिक्यं

ब्रह्मकर्म स्वभावजम्॥१८.४२॥

ಶಮೋ ದಮಸ್ತಪಃ ಶೌಚಂ 

ಕ್ಷಾಂತಿರಾರ್ಜವಮೇವ ಚ ।

ಜ್ಞಾನಂ ವಿಜ್ಞಾನಮಾಸ್ತಿಕ್ಯಂ 

ಬ್ರಹ್ಮಕರ್ಮ ಸ್ವಭಾವಜಮ್ ॥ 18-42॥

शमो दमस्तपः शौचं क्षान्तिरार्जवमेव च।

ज्ञानं विज्ञानमास्तिक्यं ब्रह्मकर्म स्वभावजम्॥१८.४२॥

ಶಮೋ ದಮಸ್ತಪಃ ಶೌಚಂ ಕ್ಷಾಂತಿರಾರ್ಜವಮೇವ ಚ ।

ಜ್ಞಾನಂ ವಿಜ್ಞಾನಮಾಸ್ತಿಕ್ಯಂ ಬ್ರಹ್ಮಕರ್ಮ ಸ್ವಭಾವಜಮ್ ॥ 18-42॥

These are the qualities that characterize

Brahmanas by virtue of the Gunas inherent in them:

shama: control over the internal instruments;

dama: restraint of the external senses

tapah: austerity;

saucham: cleanliness;

kshanti: forgiveness;

aarjavam: straightforwardness;

gnanam: knowledge;

vignanam: realsisation;

aastikyam: faith in the Scriptures.

ಈ ಕೆಳಗಿನವುಗಳು ಬ್ರಾಹ್ಮಣರಿಗೆ ಪ್ರಕೃತಿಸಹಜವಾಗಿ ಬಂದಿರುವ ಗುಣಗಳಾಗಿವೆ. 

ಈ ಗುಣಗಳಿಂದ ಅವರು ಕರ್ಮವನ್ನು ಮಾಡುತ್ತಾರೆ.

ಶಮ:- ಆಂತರಿಕ ತುಮುಲಗಳನ್ನು ಹತೋಟಿಯಲ್ಲಿರಿಸಿಕೊಳ್ಳಲು ಸಹಾಯಕವಾದ ಶಾಂತಿ ಸ್ವಭಾವ.

ದಮ:- ಬಾಹ್ಯೇಂದ್ರಿಯಗಳ ಹತೋಟಿ ಅಥವಾ ಆತ್ಮ ಸಂಯಮ.

ತಪ:- ಉಗ್ರ ಸಂಯಮವಾದ ತಪಃಚರ್ಯೆ.

ಶೌಚ:- ಶುಚಿತ್ವ.

ಕ್ಷಾಂತಿ:- ಕ್ಷಮೆ, ಮನ್ನಿಸುವಿಕೆ.

ಆರ್ಜವಂ:- ಪ್ರಾಮಾಣಿಕತೆ.

ಜ್ಞಾನಂ:- ಅರಿವು, ತಿಳುವಳಿಕೆ.

ವಿಜ್ಞಾನಂ:- ಸ್ಪಷ್ಟವಾಗಿ ಗ್ರಹಿಸುವಿಕೆ, ವಿಜ್ಞಾನ.

ಆಸ್ತಿಕ್ಯಂ:- ಧಾರ್ಮಿಕತೆ, ಶಾಸ್ತ್ರಗಳಲ್ಲಿ ಸಂಪೂರ್ಣ ನಂಬಿಕೆ.

  शौर्यं तेजो धृतिर्दाक्ष्यं

युद्धे चापलायनम्।

दानमीश्वरभावश्च

क्षात्रकर्मस्वभावजम्॥१८.४३॥

ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ 

ಯುದ್ಧೇ ಚಾಪ್ಯಪಲಾಯನಮ್ ।

ದಾನಮೀಶ್ವರಭಾವಶ್ಚ 

ಕ್ಷಾತ್ರಂ ಕರ್ಮ ಸ್ವಭಾವಜಮ್ ॥ 18-43॥

शौर्यं तेजो धृतिर्दाक्ष्यं युद्धे चापलायनम्।

दानमीश्वरभावश्च क्षात्रकर्मस्वभावजम्॥१८.४३॥

ಶೌರ್ಯಂ ತೇಜೋ ಧೃತಿರ್ದಾಕ್ಷ್ಯಂ ಯುದ್ಧೇ ಚಾಪ್ಯಪಲಾಯನಮ್ ।

ದಾನಮೀಶ್ವರಭಾವಶ್ಚ ಕ್ಷಾತ್ರಂ ಕರ್ಮ ಸ್ವಭಾವಜಮ್ ॥ 18-43॥

 Kshatriyas are characterized by the following qualities:

 shauryam: courage;

tejah: power;

dhruti: determination;

daakshyam: skillfulness;

yuddhe apalaayanam: not running away

from the battle-field;

daana: generosity;

Ishwara bhavah: lordliness.

ಕ್ಷತ್ರಿಯರನ್ನು ಈ ಕೆಳಗಿನ ಸಹಜ ಗುಣಗಳಿಂದ ಗುರುತಿಸಲಾಗುತ್ತದೆ.

ಶೌರ್ಯಂ:- ಧೈರ್ಯ, ನಿರ್ಭಯತೆ, ಶೂರತ್ವ.

ತೇಜ:- ತೇಜಸ್ಸು, ಕಾಂತಿ.

ಧೃತಿ:- ಧೃಢ ಸಂಕಲ್ಪ, ನಿರ್ಧಾರ.

ದಾಕ್ಷ್ಯಂ:- ವ್ಯಾವಹಾರಿಕ ಜಾಣತನ, ದಕ್ಷತೆ.

ಯುದ್ಧೇ ಆಪಲಾಯನಂ- ಯುದ್ಧರಂಗದಿಂದ ಪಲಾಯನ ಮಾಡದೇ ಇರುವುದು.

ದಾನಂ:- ಧಾರಾಳತನ, ಔದಾರ್ಯ.

ಈಶ್ವರಭಾವ:- ನಾಯಕತ್ವದ ಸ್ವಭಾವವು ಎಲ್ಲರಿಗೂ ರಕ್ಷಣೆ ಕೊಡುವುದು.                    

कृषिगोरक्ष्यवाणिज्यं

वैश्यकर्मस्वभावजम्।

परिचर्यात्मकं कर्म

शूद्रस्यापि स्वभावजम्॥१८.४४॥

ಕೃಷಿಗೌರಕ್ಷ್ಯವಾಣಿಜ್ಯಂ 

ವೈಶ್ಯಕರ್ಮ ಸ್ವಭಾವಜಮ್ ।

ಪರಿಚರ್ಯಾತ್ಮಕಂ ಕರ್ಮ 

ಶೂದ್ರಸ್ಯಾಪಿ ಸ್ವಭಾವಜಮ್ ॥ 18-44॥

कृषिगोरक्ष्यवाणिज्यं वैश्यकर्मस्वभावजम्।

परिचर्यात्मकं कर्म शूद्रस्यापि स्वभावजम्॥१८.४४॥

ಕೃಷಿಗೌರಕ್ಷ್ಯವಾಣಿಜ್ಯಂ ವೈಶ್ಯಕರ್ಮ ಸ್ವಭಾವಜಮ್ ।

ಪರಿಚರ್ಯಾತ್ಮಕಂ ಕರ್ಮ ಶೂದ್ರಸ್ಯಾಪಿ ಸ್ವಭಾವಜಮ್ ॥ 18-44॥

Agriculture, rearing of cattle and trade

are the qualities of the Vaishyas,

because of their inherent nature.

In the case of Shudras,

Service-oriented activity

is propelled by their Gunas.

ವ್ಯವಸಾಯ, ಪಶುಸಂರಕ್ಷಣೆ ಮತ್ತು ವ್ಯಾಪಾರ, ಇವು ವೈಶ್ಯರಿಗೆ ಪ್ರಕೃತಿಸಹಜವಾದ ಕರ್ಮಗಳಾಗಿವೆ. 

ಶ್ರಮ ಮತ್ತು ಪರಿಚರ್ಯಾರೂಪವಾದ ಇತರರಿಗೆ ಸೇವೆಯನ್ನು ಮಾಡುವ ಕರ್ಮವು ಶೂದ್ರರಿಗೆ ಸ್ವಭಾವದಿಂದ ಉಂಟಾಗಿದೆ. 

स्वे स्वे कर्मण्यभिरतः

संसिद्धिं लभते नरः।

स्वकर्मनिरतः सिद्धिं

यथा विन्दति तच्छृणु॥१८.४५॥

ಸ್ವೇ ಸ್ವೇ ಕರ್ಮಣ್ಯಭಿರತಃ 

ಸಂಸಿದ್ಧಿಂ ಲಭತೇ ನರಃ ।

ಸ್ವಕರ್ಮನಿರತಃ ಸಿದ್ಧಿಂ 

ಯಥಾ ವಿಂದತಿ ತಚ್ಛೃಣು ॥ 18-45॥

स्वे स्वे कर्मण्यभिरतः संसिद्धिं लभते नरः।

स्वकर्मनिरतः सिद्धिं यथा विन्दति तच्छृणु॥१८.४५॥

ಸ್ವೇ ಸ್ವೇ ಕರ್ಮಣ್ಯಭಿರತಃ ಸಂಸಿದ್ಧಿಂ ಲಭತೇ ನರಃ ।

ಸ್ವಕರ್ಮನಿರತಃ ಸಿದ್ಧಿಂ ಯಥಾ ವಿಂದತಿ ತಚ್ಛೃಣು ॥ 18-45॥

Through complete devotion to one’s own work

that is prompted by his nature

and specific to the class he belongs to,

man achieves Siddhi or perfection

through such devotion.

ಸ್ವಭಾವಜನ್ಯ ಗುಣದಿಂದ ಪ್ರೇರಿತನಾಗಿ ತಾನು ಸೇರಿರುವ ವರ್ಣಕ್ಕೆ ಅನುಗುಣವಾಗಿ ತನಗೆ ನಿಯಮಿತವಾದ ಕರ್ಮಗಳನ್ನು ಸಂಪೂರ್ಣ ನಿಷ್ಠೆಯಿಂದ ನಿರ್ವಹಿಸುವ ಮನುಷ್ಯನು ಉತ್ತಮ ಸಿದ್ಧಿಯನ್ನು ಪಡೆಯಬಲ್ಲನು. ಆ ವಿಧಾನವನ್ನು ಹೇಳುತ್ತೇನೆ, ಕೇಳು.

यतः प्रवृत्तिर्भूतानां

येन सर्वमिदं ततम्।

स्वकर्मणा तमभ्यर्च्य

सिद्धिं विन्दति मानवः॥१८.४६॥

ಯತಃ ಪ್ರವೃತ್ತಿರ್ಭೂತಾನಾಂ 

ಯೇನ ಸರ್ವಮಿದಂ ತತಮ್ ।

ಸ್ವಕರ್ಮಣಾ ತಮಭ್ಯರ್ಚ್ಯ

ಸಿದ್ಧಿಂ ವಿಂದತಿ ಮಾನವಃ ॥ 18-46॥

यतः प्रवृत्तिर्भूतानां येन सर्वमिदं ततम्।

स्वकर्मणा तमभ्यर्च्य सिद्धिं विन्दति मानवः॥१८.४६॥

ಯತಃ ಪ್ರವೃತ್ತಿರ್ಭೂತಾನಾಂ ಯೇನ ಸರ್ವಮಿದಂ ತತಮ್ ।

ಸ್ವಕರ್ಮಣಾ ತಮಭ್ಯರ್ಚ್ಯ ಸಿದ್ಧಿಂ ವಿಂದತಿ ಮಾನವಃ ॥ 18-46॥

 It is He from whom all beings have come,

and it is He that pervades the whole Universe.

By worshipping Him through performing actions

allotted to his particular class,

man achieves perfection.

ಸಂಪೂರ್ಣ ಪ್ರಾಣಿಗಳ ಉತ್ಪತ್ತಿ ಈತನಿಂದಲೇ ಆಗಿರುವುದು ಮತ್ತು ಸಮಸ್ತ ಜಗತ್ತು ಈತನಿಂದಲೇ ವ್ಯಾಪ್ತವಾಗಿರುವುದು. ಹಾಗಾಗಿ ತನಗೆ ಪ್ರಾಪ್ತಿಯಾದ ವರ್ಣಕ್ಕೆ ನಿಯತವಾದ ತನ್ನ ಸ್ವಕರ್ಮದಿಂದ ಪರಮೇಶ್ವರನಾದ ಈತನನ್ನು ಆರಾಧಿಸುವುದರಿಂದ ಮನುಷ್ಯನು ಸಿದ್ಧಿಯನ್ನು ಪಡೆಯುತ್ತಾನೆ. 

श्रेयान्स्वधर्मो विगुणः

परधर्मात्स्वनुष्ठितात्।

स्वभावनियतं कर्म

कुर्वन्नाप्नोति किल्बिषम्॥१८.४७॥

ಶ್ರೇಯಾನ್ಸ್ವಧರ್ಮೋ ವಿಗುಣಃ 

ಪರಧರ್ಮಾತ್ಸ್ವನುಷ್ಠಿತಾತ್ ।

ಸ್ವಭಾವನಿಯತಂ ಕರ್ಮ 

ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥ 18-47॥

श्रेयान्स्वधर्मो विगुणः परधर्मात्स्वनुष्ठितात्।

स्वभावनियतं कर्म कुर्वन्नाप्नोति किल्बिषम्॥१८.४७॥

ಶ್ರೇಯಾನ್ಸ್ವಧರ್ಮೋ ವಿಗುಣಃ ಪರಧರ್ಮಾತ್ಸ್ವನುಷ್ಠಿತಾತ್ ।

ಸ್ವಭಾವನಿಯತಂ ಕರ್ಮ ಕುರ್ವನ್ನಾಪ್ನೋತಿ ಕಿಲ್ಬಿಷಮ್ ॥ 18-47॥

 One’s Swadharma, though defective,

is better than Paradharma,

another’s Dharma,

however well-observed that might be.

No one incurs sin by doing work

that is prompted by one’s own nature

or Svabhava.

ಒಳ್ಳೆಯ ರೀತಿಯಲ್ಲಿ ಆಚರಿಸಲಾದ, ಚೆನ್ನಾಗಿ ಅನುಷ್ಠಾನ ಮಾಡಿದ ಪರಧರ್ಮಕ್ಕಿಂತಲೂ, ನ್ಯೂನತೆಯುಳ್ಳದ್ದಾದರೂ ಸಹ ಸ್ವಧರ್ಮವೇ ಶ್ರೇಯಸ್ಕರವಾದುದು. ಏಕೆಂದರೆ ತನ್ನ ಸ್ವಭಾವಕ್ಕೆ ಯೋಗ್ಯವಾದ ಕರ್ಮವನ್ನು ಮಾಡುವವನು ಪಾಪವನ್ನು ಪಡೆಯುವುದಿಲ್ಲ.

सहजं कर्म कौन्तेय

सदोषमपि न त्यजेत्।

सर्वारम्भा हि दोषेण

धूमेनाग्निरिवावृताः॥१८.४८॥

ಸಹಜಂ ಕರ್ಮ ಕೌಂತೇಯ 

ಸದೋಷಮಪಿ ನ ತ್ಯಜೇತ್ ।

ಸರ್ವಾರಂಭಾ ಹಿ ದೋಷೇಣ 

ಧೂಮೇನಾಗ್ನಿರಿವಾವೃತಾಃ ॥ 18-48॥

 सहजं कर्म कौन्तेय सदोषमपि न त्यजेत्।

सर्वारम्भा हि दोषेण धूमेनाग्निरिवावृताः॥१८.४८॥

ಸಹಜಂ ಕರ್ಮ ಕೌಂತೇಯ ಸದೋಷಮಪಿ ನ ತ್ಯಜೇತ್ ।

ಸರ್ವಾರಂಭಾ ಹಿ ದೋಷೇಣ ಧೂಮೇನಾಗ್ನಿರಿವಾವೃತಾಃ ॥ 18-48॥

 Arjuna,

It is not proper to give up

one’s Swadharma,

one’s duty as determined by nature.

All activities, indeed, are shrouded in defects,

Like fire covered by smoke.

ಕೌಂತೇಯಾ! ದೋಷಯುಕ್ತವಾದರೂ ಕೂಡ ಸಹಜವಾದ ಸ್ವಧರ್ಮವನ್ನು ತ್ಯಜಿಸಬಾರದು. ಏಕೆಂದರೆ ಹೊಗೆಯಿಂದ ಬೆಂಕಿಯು ಆವರಿಸಲ್ಪಟ್ಟಿರುವ ಹಾಗೆ ಸಮಸ್ತ ಕರ್ಮಗಳು ದೋಷದಿಂದ ಆವೃತವಾಗಿರುತ್ತವೆ.      असक्तबुद्धिः सर्वत्र

जितात्मा विगतस्पृहः।

नैष्कर्म्यसिद्धिं परमां

संन्यासेनाधिगच्छति॥१८.४९॥

ಅಸಕ್ತಬುದ್ಧಿಃ ಸರ್ವತ್ರ 

ಜಿತಾತ್ಮಾ ವಿಗತಸ್ಪೃಹಃ ।

ನೈಷ್ಕರ್ಮ್ಯಸಿದ್ಧಿಂ ಪರಮಾಂ 

ಸಂನ್ಯಾಸೇನಾಧಿಗಚ್ಛತಿ ॥ 18-49॥

असक्तबुद्धिः सर्वत्र जितात्मा विगतस्पृहः।

नैष्कर्म्यसिद्धिं परमां संन्यासेनाधिगच्छति॥१८.४९॥

ಅಸಕ್ತಬುದ್ಧಿಃ ಸರ್ವತ್ರ ಜಿತಾತ್ಮಾ ವಿಗತಸ್ಪೃಹಃ ।

ನೈಷ್ಕರ್ಮ್ಯಸಿದ್ಧಿಂ ಪರಮಾಂ ಸಂನ್ಯಾಸೇನಾಧಿಗಚ್ಛತಿ ॥ 18-49॥

  A person whose intellect

remains unattached to the objects

and who keeps a disciplined mind

free from all desires –

such a person reaches a state of Perfection

by attaining naishkarmya siddhi –

a state of worklessness

through renunciation.

ಯಾವ ಪ್ರಾಪಂಚಿಕ ವಿಷಯಗಳಲ್ಲೂ ಆಸಕ್ತಿಯಿಲ್ಲದೆ, ಮನಸ್ಸನ್ನು ನಿಗ್ರಹಿಸಿ ಅಂತಃಕರಣವನ್ನು ಜಯಿಸಿದವನು, ಕೋರಿಕೆಗಳಿಲ್ಲದವನು, ಕರ್ಮಫಲವನ್ನೂ, ಕರ್ತೃಭಾವವನ್ನೂ ಬಿಟ್ಟು ಸನ್ಯಾಸದಿಂದ ನೈಷ್ಕರ್ಮ್ಯಸಿದ್ಧಿ ಅಂದರೆ ಉತ್ತಮವಾದ ಕರ್ಮಾತೀತ ಸ್ಥಿತಿಯನ್ನು ಪಡೆಯುತ್ತಾನೆ.       

सिद्धिं प्राप्तो यथा ब्रह्म

तथाप्नोति निबोध मे।

समासेनैव कौन्तेय

निष्ठा ज्ञानस्य या परा॥१८.५०॥

ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ 

ತಥಾಪ್ನೋತಿ ನಿಬೋಧ ಮೇ ।

ಸಮಾಸೇನೈವ ಕೌಂತೇಯ 

ನಿಷ್ಠಾ ಜ್ಞಾನಸ್ಯ ಯಾ ಪರಾ ॥ 18-50॥

सिद्धिं प्राप्तो यथा ब्रह्म तथाप्नोति निबोध मे।

समासेनैव कौन्तेय निष्ठा ज्ञानस्य या परा॥१८.५०॥

ಸಿದ್ಧಿಂ ಪ್ರಾಪ್ತೋ ಯಥಾ ಬ್ರಹ್ಮ ತಥಾಪ್ನೋತಿ ನಿಬೋಧ ಮೇ ।

ಸಮಾಸೇನೈವ ಕೌಂತೇಯ ನಿಷ್ಠಾ ಜ್ಞಾನಸ್ಯ ಯಾ ಪರಾ ॥ 18-50॥

 Arjuna,

Hear from Me briefly

how the Seeker, after reaching

a state of Perfection,

attains Brahman –

which happens to be the culmination

of the Discipline of Gnana or Knowledge.

ಅರ್ಜುನಾ! ಸಿದ್ಧಿಯನ್ನು ಹೊಂದಿದವನು ಜ್ಞಾನದ ಪರಮ ನಿಷ್ಠೆಯಾದ ಪರಬ್ರಹ್ಮವನ್ನು ಯಾವ ವಿಧವಾಗಿ ಪಡೆದುಕೊಳ್ಳುವನು ಎಂಬುದಾಗಿ ಸಂಕ್ಷೇಪವಾಗಿ ಹೇಳುತ್ತೇನೆ ಕೇಳು. 

ಸೂಕ್ತವಾದ ಆಚರಣೆಗಳ ಮೂಲಕ ಅನ್ವೇಷಕನು ಬ್ರಹ್ಮ ಸಾಕ್ಷಾತ್ಕಾರವನ್ನು ಹೊಂದಲು ಹೇಗೆ ಅರ್ಹನಾಗುತ್ತಾನೆಂಬುದನ್ನು ಭಗವಂತನು ಮುಂದಿನ ಮೂರು ಶ್ಲೋಕಗಳಲ್ಲಿ ವಿವರಿಸುತ್ತಾನೆ.               बुद्ध्या विशुद्धया युक्तो

धृत्यात्मानं नियम्य च।

शब्दादीन्विषयांस्त्यक्त्वा

रागद्वेषौ व्युदस्य च॥१८.५१॥

ಬುದ್ಧ್ಯಾ ವಿಶುದ್ಧಯಾ ಯುಕ್ತೋ 

ಧೃತ್ಯಾತ್ಮಾನಂ ನಿಯಮ್ಯ ಚ ।

ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ 

ರಾಗದ್ವೇಷೌ ವ್ಯುದಸ್ಯ ಚ ॥ 18-51॥

विविक्तसेवी लघ्वाशी

यतवाक्कायमानसः।

ध्यानयोगपरो नित्यं

वैराग्यं समुपाश्रितः॥१८.५२॥

ವಿವಿಕ್ತಸೇವೀ ಲಘ್ವಾಶೀ

ಯತವಾಕ್ಕಾಯಮಾನಸಃ ।

ಧ್ಯಾನಯೋಗಪರೋ ನಿತ್ಯಂ 

ವೈರಾಗ್ಯಂ ಸಮುಪಾಶ್ರಿತಃ ॥ 18-52॥

अहङ्कारं बलं दर्पं

कामं क्रोधं परिग्रहम्।

विमुच्य निर्ममः शान्तो

ब्रह्मभूयाय कल्पते॥१८.५३॥

ಅಹಂಕಾರಂ ಬಲಂ ದರ್ಪಂ ಕಾಮಂ 

ಕಾಮಂ ಕ್ರೋಧಂ ಪರಿಗ್ರಹಮ್ ।

ವಿಮುಚ್ಯ ನಿರ್ಮಮಃ ಶಾಂತೋ 

ಬ್ರಹ್ಮಭೂಯಾಯ ಕಲ್ಪತೇ ॥ 18-53॥

बुद्ध्या विशुद्धया युक्तो धृत्यात्मानं नियम्य च।

शब्दादीन्विषयांस्त्यक्त्वा रागद्वेषौ व्युदस्य च॥१८.५१॥

ಬುದ್ಧ್ಯಾ ವಿಶುದ್ಧಯಾ ಯುಕ್ತೋ ಧೃತ್ಯಾತ್ಮಾನಂ ನಿಯಮ್ಯ ಚ ।

ಶಬ್ದಾದೀನ್ವಿಷಯಾಂಸ್ತ್ಯಕ್ತ್ವಾ ರಾಗದ್ವೇಷೌ ವ್ಯುದಸ್ಯ ಚ ॥ 18-51॥

विविक्तसेवी लघ्वाशी यतवाक्कायमानसः।

ध्यानयोगपरो नित्यं वैराग्यं समुपाश्रितः॥१८.५२॥

ವಿವಿಕ್ತಸೇವೀ ಲಘ್ವಾಶೀ ಯತವಾಕ್ಕಾಯಮಾನಸಃ ।

ಧ್ಯಾನಯೋಗಪರೋ ನಿತ್ಯಂ ವೈರಾಗ್ಯಂ ಸಮುಪಾಶ್ರಿತಃ ॥ 18-52॥

अहङ्कारं बलं दर्पं कामं क्रोधं परिग्रहम्।

विमुच्य निर्ममः शान्तो ब्रह्मभूयाय कल्पते॥१८.५३॥

ಅಹಂಕಾರಂ ಬಲಂ ದರ್ಪಂ ಕಾಮಂ ಕ್ರೋಧಂ ಪರಿಗ್ರಹಮ್ ।

ವಿಮುಚ್ಯ ನಿರ್ಮಮಃ ಶಾಂತೋ ಬ್ರಹ್ಮಭೂಯಾಯ ಕಲ್ಪತೇ ॥ 18-53॥

In the next three Shlokas, Sri Bhagawan explains

how the Seeker, by taking certain steps,

becomes eligible to attain

the Status of Brahman:

The Seeker

by possessing purified intellect,

bringing the self under control

with determination,

rejecting the sense-objects like sound, etc.,

giving up both attachment and aversion,

choosing a solitary place,

taking limited food,

exercising control over body, speech and mind,

always engaged in practicing meditation and yoga,

taking recourse to Vairagya or Dispassion,

giving up Ahankara, or Egoism,

force, pride, lust and possessiveness,

getting rid of Mamakara, Ownership of things,

and remaining calm and serene –

the Seeker thus becomes eligible

to attain the Status of Brahman.

ಪರಿಶುದ್ಧವಾದ ಬುದ್ಧಿಯನ್ನು ಹೊಂದಿದವನಾಗಿ, ಧೃತಿಯಿಂದ ಮನಸ್ಸನ್ನು ನಿಗ್ರಹಿಸಿದವನಾಗಿ. ಶಬ್ದಾದಿ ವಿಷಯಗಳನ್ನು ಬಿಟ್ಟು, ರಾಗದ್ವೇಷಗಳನ್ನು ತ್ಯಜಿಸಿ, ನಿರ್ಜನ ಪ್ರದೇಶದಲ್ಲಿ ಏಕಾಂತವಾಗಿ ವಾಸ ಮಾಡುವವನಾಗಿ, ಮಿತಾಹಾರಿಯಾಗಿ, ಶರೀರ ವಾಕ್ಕು ಮತ್ತು ಮನಸ್ಸನ್ನು ನಿಗ್ರಹಿಸಿದವನಾಗಿ, ಯಾವಾಗಲೂ ಧ್ಯಾನಯೋಗ ಪರಾಯಣನಾಗಿ, ವೈರಾಗ್ಯವನ್ನು ಆಶ್ರಯಿಸಿದವನಾಗಿ, ಅಹಂಕಾರ, ಅಭಿಮಾನ, ಬಲ, ದರ್ಪ, ಕಾಮ, ಕ್ರೋಧ, ವಸ್ತು ಸಂಗ್ರಹ ಇವುಗಳನ್ನು ತ್ಯಜಿಸಿದವನಾಗಿ, ಮಮಕಾರರಹಿತನಾಗಿ, ಶಾಂತನಾಗಿ ಇರುವ ಭಗವದನ್ವೇಷಕನು ಬ್ರಹ್ಮ ಸ್ವರೂಪವನ್ನು ಪಡೆಯಲು ಸಮರ್ಥನಾಗುತ್ತಾನೆ.

ब्रह्मभूतः प्रसन्नात्मा

न शोचति न काङ्क्षति।

समः सर्वेषु भूतेषु

मद्भक्तिं लभते पराम्॥१८.५४॥

ಬ್ರಹ್ಮಭೂತಃ ಪ್ರಸನ್ನಾತ್ಮಾ 

ನ ಶೋಚತಿ ನ ಕಾಂಕ್ಷತಿ ।

ಸಮಃ ಸರ್ವೇಷು ಭೂತೇಷು 

ಮದ್ಭಕ್ತಿಂ ಲಭತೇ ಪರಾಮ್ ॥ 18-54॥

ब्रह्मभूतः प्रसन्नात्मा न शोचति न काङ्क्षति।

समः सर्वेषु भूतेषु मद्भक्तिं लभते पराम्॥१८.५४॥

ಬ್ರಹ್ಮಭೂತಃ ಪ್ರಸನ್ನಾತ್ಮಾ ನ ಶೋಚತಿ ನ ಕಾಂಕ್ಷತಿ ।

ಸಮಃ ಸರ್ವೇಷು ಭೂತೇಷು ಮದ್ಭಕ್ತಿಂ ಲಭತೇ ಪರಾಮ್ ॥ 18-54॥

Having become eligible

to attain the Status of Brahman,

he should remain calm and peaceful,

without grieving or craving.

He should maintain equanimity

towards all beings.

Thereby he earns Supreme Devotion to Me.

ಹೀಗೆ ಬ್ರಹ್ಮಭಾವವನ್ನು ಹೊಂದಲು ಅರ್ಹತೆ ಪಡೆದವನು ಸದಾ ಪ್ರಸನ್ನ ಚಿತ್ತನಾಗಿರಬೇಕು. ಯಾವುದಕ್ಕೂ ದುಃಖಿಸಬಾರದು ಮತ್ತು ಯಾವುದನ್ನೂ ಬಯಸಬಾರದು. ಇಂತಹವನು ಸರ್ವಭೂತಗಳಲ್ಲಿ ಸಮಭಾವವುಳ್ಳವನಾಗಿ ನನ್ನಲ್ಲಿ ಪರಮಭಕ್ತಿಯನ್ನು ಹೊಂದುತ್ತಾನೆ.          

भक्त्या मामभिजानाति

यावान् यश्चास्मि तत्वतः।

ततो मां तत्वतो ज्ञात्वा

विशते तदनन्तरम्॥१८.५५॥ 

ಭಕ್ತ್ಯಾ ಮಾಮಭಿಜಾನಾತಿ 

ಯಾವಾನ್ಯಶ್ಚಾಸ್ಮಿ ತತ್ತ್ವತಃ ।

ತತೋ ಮಾಂ ತತ್ತ್ವತೋ ಜ್ಞಾತ್ವಾ 

ವಿಶತೇ ತದನಂತರಮ್ ॥ 18-55॥

भक्त्या मामभिजानाति यावान् यश्चास्मि तत्वतः।

ततो मां तत्वतो ज्ञात्वा विशते तदनन्तरम्॥१८.५५॥ 

 ಭಕ್ತ್ಯಾ ಮಾಮಭಿಜಾನಾತಿ ಯಾವಾನ್ಯಶ್ಚಾಸ್ಮಿ ತತ್ತ್ವತಃ ।

ತತೋ ಮಾಂ ತತ್ತ್ವತೋ ಜ್ಞಾತ್ವಾ ವಿಶತೇ ತದನಂತರಮ್ ॥ 18-55॥

Such a person,

by means of devotion to Me,

knows Me,

what my extent is

and who I really am.

Having thus known the Truth about Me,

he enters Me there and then.

ಅಂತಹ ವ್ಯಕ್ತಿಯು ನನ್ನ ಮೇಲಿನ ಭಕ್ತಿಯಿಂದ ನನ್ನ ಸ್ವರೂಪ ಪ್ರಭಾವವನ್ನು ಹಾಗೂ ನಿಜವಾಗಿ ನಾನು ಯಾರೆಂಬುದನ್ನು ಅರಿತುಕೊಳ್ಳುತ್ತಾನೆ. ನನ್ನ ಸ್ವರೂಪದ ವಾಸ್ತವ ಜ್ಞಾನದಿಂದ, ನನ್ನ ಬಗೆಗಿನ ಸತ್ಯದ ಅರಿವಿನ ನಂತರ ಅವನು ಅಲ್ಲಿಂದ ಆಗಲೇ ನನ್ನನ್ನು ಪ್ರವೇಶಿಸುತ್ತಾನೆ.   

सर्वकर्माण्यपि सदा

कुर्वाणो मद्व्यपाश्रयः।

मत्प्रसादादवाप्नोति

शाश्वतं पदमव्ययम्॥१८.५६॥

ಸರ್ವಕರ್ಮಾಣ್ಯಪಿ ಸದಾ 

ಕುರ್ವಾಣೋ ಮದ್ವ್ಯಪಾಶ್ರಯಃ ।

ಮತ್ಪ್ರಸಾದಾದವಾಪ್ನೋತಿ 

ಶಾಶ್ವತಂ ಪದಮವ್ಯಯಮ್ ॥ 18-56॥

सर्वकर्माण्यपि सदा कुर्वाणो मद्व्यपाश्रयः।

मत्प्रसादादवाप्नोति शाश्वतं पदमव्ययम्॥१८.५६॥

ಸರ್ವಕರ್ಮಾಣ್ಯಪಿ ಸದಾ ಕುರ್ವಾಣೋ ಮದ್ವ್ಯಪಾಶ್ರಯಃ ।

ಮತ್ಪ್ರಸಾದಾದವಾಪ್ನೋತಿ ಶಾಶ್ವತಂ ಪದಮವ್ಯಯಮ್ ॥ 18-56॥

While performing all actions continuously

and always depending on Me,

my Devotee, due to my Grace,

will attain the Eternal and Immortal Status.

ಸಕಲ ಕರ್ಮಗಳನ್ನು ಸತತವಾಗಿ ಮಾಡುತ್ತಾ ಮತ್ತು ಸದಾ ನನ್ನ ಮೇಲೆ ಅವಲಂಬಿತನಾಗಿರುವ ನನ್ನ ಭಕ್ತನು, ನನ್ನ ಅನುಗ್ರಹದಿಂದ ಶಾಶ್ವತವೂ, ಅವ್ಯಯವೂ ಆದ ಮೋಕ್ಷವನ್ನು ಪಡೆಯುತ್ತಾನೆ.           

चेतसा सर्वकर्माणि

मयि संन्यस्य मत्परः।

बुद्धियोगमुपाश्रित्य

मच्चित्तः सततं भव॥१८.५७॥  

ಚೇತಸಾ ಸರ್ವಕರ್ಮಾಣಿ 

ಮಯಿ ಸಂನ್ಯಸ್ಯ ಮತ್ಪರಃ ।

ಬುದ್ಧಿಯೋಗಮುಪಾಶ್ರಿತ್ಯ 

ಮಚ್ಚಿತ್ತಃ ಸತತಂ ಭವ ॥ 18-57॥

चेतसा सर्वकर्माणि मयि संन्यस्य मत्परः।

बुद्धियोगमुपाश्रित्य मच्चित्तः सततं भव॥१८.५७॥  

ಚೇತಸಾ ಸರ್ವಕರ್ಮಾಣಿ ಮಯಿ ಸಂನ್ಯಸ್ಯ ಮತ್ಪರಃ ।

ಬುದ್ಧಿಯೋಗಮುಪಾಶ್ರಿತ್ಯ ಮಚ್ಚಿತ್ತಃ ಸತತಂ ಭವ ॥ 18-57॥

Arjuna,

Surrender all your actions

to Me mentally.

Keep the intellect

concentrated on Me.

Fix your mind always on Me.

ಅರ್ಜುನಾ! ನಿನ್ನ ಎಲ್ಲ ಕರ್ಮಗಳನ್ನು ಹೃದಯಪೂರ್ವಕವಾಗಿ ನನಗೆ ಅರ್ಪಿಸಿ, ನಿನ್ನ ಚಿತ್ತವನ್ನು ನನ್ನಲ್ಲೇ ಕೇಂದ್ರೀಕರಿಸಿ, ಬುದ್ಧಿಯೋಗವನ್ನು ಅವಲಿಂಬಿಸಿದವನಾಗಿ ನನ್ನನ್ನು ಶರಣುಹೊಂದು.       

मच्चित्तः सर्वदुर्गाणि

मत्प्रसादात्तरिष्यसि।

अथ चेत्वमहङ्कारात्

न श्रोष्यसि विनक्ष्यसि॥१८.५८॥

ಮಚ್ಚಿತ್ತಃ ಸರ್ವದುರ್ಗಾಣಿ 

ಮತ್ಪ್ರಸಾದಾತ್ತರಿಷ್ಯಸಿ ।

ಅಥ ಚೇತ್ತ್ವಮಹಂಕಾರಾತ್

ನ ಶ್ರೋಷ್ಯಸಿ ವಿನಂಕ್ಷ್ಯಸಿ ॥ 18-58॥

मच्चित्तः सर्वदुर्गाणि मत्प्रसादात्तरिष्यसि।

अथ चेत्वमहङ्कारात् न श्रोष्यसि विनक्ष्यसि॥१८.५८॥

 ಮಚ್ಚಿತ್ತಃ ಸರ್ವದುರ್ಗಾಣಿ  ಮತ್ಪ್ರಸಾದಾತ್ತರಿಷ್ಯಸಿ ।

ಅಥ ಚೇತ್ತ್ವಮಹಂಕಾರಾತ್ ನ ಶ್ರೋಷ್ಯಸಿ ವಿನಂಕ್ಷ್ಯಸಿ ॥ 18-58॥

 If you keep your mind fixed on Me always,

you will overcome all obstacles

due to my Grace.

On the other hand,

if, egotistically, you don’t care for Me,

you wiil perish.

ನೀನು ನನ್ನಲ್ಲಿಯೇ ಸದಾ ಚಿತ್ತವನ್ನಿಟ್ಟರೆ, ನನ್ನ ಅನುಗ್ರಹದಿಂದ, ಸಮಸ್ತ ಸಂಕಟಗಳಿಂದ ಪಾರಾಗುವೆ. ಹಾಗಲ್ಲದೆ ಅಹಂಕಾರದಿಂದ ನನ್ನನ್ನು ನಿರ್ಲಕ್ಷಿಸಿದರೆ, ನನ್ನ ಮಾತನ್ನು ಕೇಳದೆ ಹೋದರೆ ನೀನು ನಾಶವಾಗುವೆ.                                                                                              यद्यहङ्कारमाश्रित्य

न योत्स्य इति मन्यसे।

मिथ्यैष व्यवसायस्ते

प्रकृतिस्त्वां नियोक्ष्यति॥१८.५९॥

ಯದಹಂಕಾರಮಾಶ್ರಿತ್ಯ 

ನ ಯೋತ್ಸ್ಯ ಇತಿ ಮನ್ಯಸೇ ।

ಮಿಥ್ಯೈಷವ್ ವ್ಯವಸಾಯಸ್ತೇ 

ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥ 18-59॥

यद्यहङ्कारमाश्रित्य न योत्स्य इति मन्यसे।

मिथ्यैष व्यवसायस्ते प्रकृतिस्त्वां नियोक्ष्यति॥१८.५९॥

ಯದಹಂಕಾರಮಾಶ್ರಿತ್ಯ ನ ಯೋತ್ಸ್ಯ ಇತಿ ಮನ್ಯಸೇ ।

ಮಿಥ್ಯೈಷವ್ ವ್ಯವಸಾಯಸ್ತೇ ಪ್ರಕೃತಿಸ್ತ್ವಾಂ ನಿಯೋಕ್ಷ್ಯತಿ ॥ 18-59॥

 Arjuna,

If you say,

in an egotistical manner,

“I will not fight’,

it is wrong to say so,

because your nature as Kshatriya

will force you to fight.

ಅರ್ಜುನಾ! ನೀನು ದುರಭಿಮಾನ ವಶನಾಗಿ “ನಾನು ಯುದ್ಧವನ್ನು ಮಾಡಲಾರೆ” ಎಂದು ಹೇಳಿದರೆ ಅದು ತಪ್ಪಾಗುವುದು ಏಕೆಂದರೆ ರಜೋಪ್ರಧಾನವಾದ ನಿನ್ನ ಕ್ಷತ್ರಿಯ ಸ್ವಭಾವವು ನಿನ್ನಿಂದ ಯುದ್ಧವನ್ನು ಮಾಡಿಸುವುದು.           

स्वभावजेन कौन्तेय

निबद्धः स्वेन कर्मणा।

कर्तुं नेच्छसि यन्मोहात्  

करिष्यस्यवशोऽपि तत्॥१८.६०॥

ಸ್ವಭಾವಜೇನ ಕೌಂತೇಯ 

ನಿಬದ್ಧಃ ಸ್ವೇನ ಕರ್ಮಣಾ ।

ಕರ್ತುಂ ನೇಚ್ಛಸಿ ಯನ್ಮೋಹಾತ್

ಕರಿಷ್ಯಸ್ಯವಶೋಽಪಿ ತತ್ ॥ 18-60॥

स्वभावजेन कौन्तेय निबद्धः स्वेन कर्मणा।

कर्तुं नेच्छसि यन्मोहात् करिष्यस्यवशोऽपि तत्॥१८.६०॥

ಸ್ವಭಾವಜೇನ ಕೌಂತೇಯ  ನಿಬದ್ಧಃ ಸ್ವೇನ ಕರ್ಮಣಾ ।

ಕರ್ತುಂ ನೇಚ್ಛಸಿ ಯನ್ಮೋಹಾತ್ ಕರಿಷ್ಯಸ್ಯವಶೋಽಪಿ ತತ್ ॥ 18-60

Arjuna,

What you do not wish to do,

because of delusion,

you will be compelled to do the same

by your own Kshatria nature,

because you are bound by your own work.

ಅರ್ಜುನಾ! ಮೋಹದಿಂದ, ಭ್ರಾಂತಿಯಿಂದ ನೀನು ಯಾವುದನ್ನು ಮಾಡಲು ಇಚ್ಛಿಸುವುದಿಲ್ಲವೋ, ನಿನ್ನ ಕ್ಷತ್ರಿಯ ಗುಣದಿಂದಾಗಿ, ಸ್ವಭಾವದಿಂದ ಹುಟ್ಟಿದ ನಿನ್ನ ಕರ್ಮದಿಂದ ಕಟ್ಟಲ್ಪಟ್ಟವನಾಗಿ ಅದನ್ನು ಪರವಶನಾಗಿ ನಿರ್ಬಂಧವಾಗಿಯಾದರೂ ಮಾಡುವೆ.            

ईश्वरः सर्वभूतानां

हृद्देशेऽर्जुन तिष्ठति।

भ्रामयन् सर्वभूतानि

यन्त्रारूढानि मायया॥१८.६१॥

ಈಶ್ವರಃ ಸರ್ವಭೂತಾನಾಂ 

ಹೃದ್ದೇಶೇಽರ್ಜುನ ತಿಷ್ಠತಿ ।

ಭ್ರಾಮಯನ್ಸರ್ವಭೂತಾನಿ 

ಯಂತ್ರಾರೂಢಾನಿ ಮಾಯಯಾ ॥ 18-61॥

ईश्वरः सर्वभूतानां हृद्देशेऽर्जुन तिष्ठति।

भ्रामयन् सर्वभूतानि यन्त्रारूढानि मायया॥१८.६१॥

ಈಶ್ವರಃ ಸರ್ವಭೂತಾನಾಂ ಹೃದ್ದೇಶೇಽರ್ಜುನ ತಿಷ್ಠತಿ ।

ಭ್ರಾಮಯನ್ಸರ್ವಭೂತಾನಿ ಯಂತ್ರಾರೂಢಾನಿ ಮಾಯಯಾ ॥ 18-61॥

 Arjuna,

The Mighty God dwells

in the hearts of all beings

and with the help of His Maya

makes them go about hither and thither,

as though they are puppets

mounted on a machine.

ಅರ್ಜುನಾ! ಪರಮೇಶ್ವರನು ಪ್ರತಿಯೊಬ್ಬರ ಹೃದಯದಲ್ಲಿಯೂ ನೆಲಸಿದ್ದಾನೆ. ಮತ್ತು ಯಂತ್ರದ ಮೇಲೆ ಸ್ಥಾಪಿಸಲಾದ ಸೂತ್ರದ ಬೊಂಬೆಗಳನ್ನು ಆಡಿಸಿದಂತೆ ತನ್ನ ಮಾಯೆಯ ಸಹಾಯದಿಂದ ಇಲ್ಲಿಂದ ಅಲ್ಲಿಗೆ ಹಾಗೂ ಅಲ್ಲಿಂದ ಇಲ್ಲಿಗೆ ತಿರುಗಿಸುತ್ತಾ ಸಂಸಾರವೆಂಬ ಯಂತ್ರದಲ್ಲಿ ಸಿಲುಕಿರುವ ಸಕಲ ಜೀವಿಗಳನ್ನು ಆಡಿಸುತ್ತಾನೆ.          

तमेव शरणं गच्छ

सर्वभावेन भारत।

तत्प्रसादात्परां शान्तिं

स्थानं प्राप्स्यसि शाश्वतम्॥१८.६२॥

ತಮೇವ ಶರಣಂ ಗಚ್ಛ 

ಸರ್ವಭಾವೇನ ಭಾರತ ।

ತತ್ಪ್ರಸಾದಾತ್ಪರಾಂ ಶಾಂತಿಂ

ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥ 18-62॥

तमेव शरणं गच्छ सर्वभावेन भारत।

तत्प्रसादात्परां शान्तिं स्थानं प्राप्स्यसि शाश्वतम्॥१८.६२॥

ತಮೇವ ಶರಣಂ ಗಚ್ಛ ಸರ್ವಭಾವೇನ ಭಾರತ ।

ತತ್ಪ್ರಸಾದಾತ್ಪರಾಂ ಶಾಂತಿಂ ಸ್ಥಾನಂ ಪ್ರಾಪ್ಸ್ಯಸಿ ಶಾಶ್ವತಮ್ ॥ 18-62॥

Arjuna,

With all your heart and mind,

seek refuge in Him alone.

You will gain Supreme Peace

as well as Eternal Status.

ಅರ್ಜುನಾ! ನಿನ್ನ ಹೃದಯಪೂರ್ವಕವಾಗಿ ಮತ್ತು ಮನಃಪೂರ್ವಕವಾಗಿ ಸರ್ವವಿಧದಿಂದಲೂ ಆ ಪರಮಾತ್ಮನನ್ನೇ ಶರಣುಹೊಂದು. ಆತನ ಅನುಗ್ರಹದಿಂದ ಪರಮ ಶಾಂತಿಯನ್ನೂ, ಮೋಕ್ಷವೆಂಬ ಶಾಶ್ವತವಾದ ಸ್ಥಾನವನ್ನೂ ನೀನು ಪಡೆಯುವೆ.             

इति ते ज्ञानमाख्यातं

गुह्याद्गुह्यतरं मया।

विमृश्यैतदशेषेण

यथेच्छसि तथा कुरु॥१८.६३॥  

ಇತಿ ತೇ ಜ್ಞಾನಮಾಖ್ಯಾತಂ 

ಗುಹ್ಯಾದ್ಗುಹ್ಯತರಂ ಮಯಾ ।

ವಿಮೃಶ್ಯೈತದಶೇಷೇಣ 

ಯಥೇಚ್ಛಸಿ ತಥಾ ಕುರು ॥ 18-63॥

इति ते ज्ञानमाख्यातं गुह्याद्गुह्यतरं मया।

विमृश्यैतदशेषेण यथेच्छसि तथा कुरु॥१८.६३॥  

ಇತಿ ತೇ ಜ್ಞಾನಮಾಖ್ಯಾತಂ ಗುಹ್ಯಾದ್ಗುಹ್ಯತರಂ ಮಯಾ ।

ವಿಮೃಶ್ಯೈತದಶೇಷೇಣ ಯಥೇಚ್ಛಸಿ ತಥಾ ಕುರು ॥ 18-63॥

This is the Gnana, Knowledge,

that is most profound and confidential

by Me given to you.

Give some thought to it, Arjuna,

and do as you wish to.

ಈ ಪ್ರಕಾರವಾಗಿ ಅತ್ಯಂತ ಗಾಢಚಿಂತನೆಯ ಮತ್ತು ಗೋಪ್ಯವಾದ ಜ್ಞಾನವನ್ನು ನಾನು ನಿನಗೆ ಹೇಳಿದ್ದೇನೆ. ಈ ರಹಸ್ಯಯುಕ್ತವಾದ ಜ್ಞಾನವನ್ನು ಕುರಿತು ಸರಿಯಾದ ರೀತಿಯಲ್ಲಿ ವಿಮರ್ಶೆ ಮಾಡಿ ಅನಂತರ ನಿನಗೆ ಇಚ್ಛೆ ಬಂದಂತೆ ಮಾಡು.       

सर्वगुह्यतमं भूयः

शृणु मे परमं वचः।

इष्टोऽसि मे दृढमिति

ततो वक्ष्यामि ते हितम्॥१८.६४॥  

ಸರ್ವಗುಹ್ಯತಮಂ ಭೂಯಃ

ಶೃಣು ಮೇ ಪರಮಂ ವಚಃ ।

ಇಷ್ಟೋಽಸಿ ಮೇ ದೃಢಮಿತಿ 

ತತೋ ವಕ್ಷ್ಯಾಮಿ ತೇ ಹಿತಮ್ ॥ 18-64॥

सर्वगुह्यतमं भूयः शृणु मे परमं वचः।

इष्टोऽसि मे दृढमिति ततो वक्ष्यामि ते हितम्॥१८.६४॥  

ಸರ್ವಗುಹ್ಯತಮಂ ಭೂಯಃ ಶೃಣು ಮೇ ಪರಮಂ ವಚಃ ।

ಇಷ್ಟೋಽಸಿ ಮೇ ದೃಢಮಿತಿ ತತೋ ವಕ್ಷ್ಯಾಮಿ ತೇ ಹಿತಮ್ ॥ 18-64॥

 Arjuna,

Listen again to My word,

which is most profound,

confidential and exceptional too.

I am revealing this

since you happen to be my dear Devotee

and this is going to be

greatly beneficial to you.

ಅರ್ಜುನಾ! ಅತ್ಯಂತ ರಹಸ್ಯವಾದ, ಅಗಾಧ ಪ್ರಜ್ಞೆಯ ಮತ್ತು ಅಸಾಧಾರಣವಾದ ನನ್ನ ಪರಮವಚನವನ್ನು ಪುನಃ ಕೇಳು. ನೀನು ನನಗೆ ಅತ್ಯಂತ ಆಪ್ತನಾದ ಭಕ್ತನಾಗಿರುವುದರಿಂದ ಹಾಗೂ ಇದು ನಿನಗೆ ಬಹಳ ಪ್ರಯೋಜನಕರವಾಗಿರುವುದರಿಂದ ನಾನು ನಿನಗೆ ಹಿತವನ್ನೇ ಹೇಳುವೆ. ಕೇಳು.      

 मन्मना भव मद्भक्तो

मद्याजी मां नमस्कुरु।

मामेवैष्यसि सत्यं ते

प्रतिजाने प्रियोऽसि मे॥१८.६५॥   

ಮನ್ಮನಾ ಭವ ಮದ್ಭಕ್ತೋ 

ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ 

ಪ್ರತಿಜಾನೇ ಪ್ರಿಯೋಽಸಿ ಮೇ ॥ 18-65॥

मन्मना भव मद्भक्तो मद्याजी मां नमस्कुरु।

मामेवैष्यसि सत्यं ते प्रतिजाने प्रियोऽसि मे॥१८.६५॥ 

ಮನ್ಮನಾ ಭವ ಮದ್ಭಕ್ತೋ ಮದ್ಯಾಜೀ ಮಾಂ ನಮಸ್ಕುರು ।

ಮಾಮೇವೈಷ್ಯಸಿ ಸತ್ಯಂ ತೇ ಪ್ರತಿಜಾನೇ ಪ್ರಿಯೋಽಸಿ ಮೇ ॥ 18-65॥

 Arjuna,

Set your mind on Me;

be My Devotee;

offer your worship to Me;

and prostrate before Me.

As you are very dear to Me,

I promise that you will surely reach Me.

ಅರ್ಜುನಾ! ನನ್ನಲ್ಲಿಯೇ ನಿನ್ನ ಮನಸ್ಸನ್ನು ಕೇಂದ್ರೀಕರಿಸು. ನನ್ನ ಭಕ್ತನಾಗು. ನಿನ್ನ ಪೂಜೆಯನ್ನು ನನಗೆ ಸಮರ್ಪಿಸು ಮತ್ತು ನನ್ನನ್ನು ನಮಸ್ಕರಿಸು. ಹೀಗೆ ಮಾಡುವುದರಿಂದ ನೀನು ನನ್ನನ್ನೇ ಸೇರುವೆ ಎಂದು ಪ್ರಮಾಣಮಾಡಿ ಹೇಳುತ್ತೇನೆ. ಏಕೆಂದರೆ ನೀನು ನನಗೆ ಪರಮ ಪ್ರಿಯನಾಗಿರುವೆ.   

सर्वधर्मान् परित्यज्य

मामेकं शरणं व्रज।

अहं त्वां सर्वपापेभ्यो

मोक्षयिष्यामि मा शुचः॥१८.६६॥   

ಸರ್ವಧರ್ಮಾನ್ಪರಿತ್ಯಜ್ಯ 

ಮಾಮೇಕಂ ಶರಣಂ ವ್ರಜ ।

ಅಹಂ ತ್ವಾ ಸರ್ವಪಾಪೇಭ್ಯೋ 

ಮೋಕ್ಷಯಿಷ್ಯಾಮಿ ಮಾ ಶುಚಃ ॥ 18-66॥

सर्वधर्मान् परित्यज्य मामेकं शरणं व्रज।

अहं त्वां सर्वपापेभ्यो मोक्षयिष्यामि मा शुचः॥१८.६६॥   

ಸರ್ವಧರ್ಮಾನ್ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ ।

ಅಹಂ ತ್ವಾ ಸರ್ವಪಾಪೇಭ್ಯೋ ಮೋಕ್ಷಯಿಷ್ಯಾಮಿ ಮಾ ಶುಚಃ ॥ 18-66॥

Arjuna,

Giving up all your Dharmas ,–

all actions righteous and unrighteous,

all actions of the mind, body and intellect –

seek refuge in Me alone.

I shall liberate you from all sins.

Do not grieve.

ಅರ್ಜುನಾ! ನಿನ್ನ ಎಲ್ಲ ಪ್ರಾಮಾಣಿಕ ಮತ್ತು ಅಪ್ರಾಮಾಣಿಕ ಕರ್ಮಗಳನ್ನು, ನಿನ್ನ ಮನಸ್ಸು, ಶರೀರ ಮತ್ತು ಬುದ್ಧಿಯ ಎಲ್ಲ ಕ್ರಿಯೆಗಳನ್ನು, ಒಟ್ಟಿನಲ್ಲಿ ಸರ್ವಧರ್ಮಗಳನ್ನು ಪರಿತ್ಯಜಿಸಿ ನನ್ನೊಬ್ಬನನ್ನೇ ಶರಣುಹೊಂದು. ನಾನು ನಿನ್ನನ್ನು ಎಲ್ಲಾ ಪಾಪಗಳಿಂದಲೂ ಮುಕ್ತನನ್ನಾಗಿ ಮಾಡುತ್ತೇನೆ. ಶೋಕಿಸಬೇಡ.            

इदं ते नातपस्काय

नाभक्ताय कदाचन।

न चाशुश्रूषवे वाच्यं

न च मां योऽभ्यसूयति॥१८.६७॥

ಇದಂ ತೇ ನಾತಪಸ್ಕಾಯ 

ನಾಭಕ್ತಾಯ ಕದಾಚನ ।      

ನ ಚಾಶುಶ್ರೂಷವೇ ವಾಚ್ಯಂ 

ನ ಚ ಮಾಂ ಯೋಽಭ್ಯಸೂಯತಿ ॥ 18-67॥

इदं ते नातपस्काय नाभक्ताय कदाचन।

न चाशुश्रूषवे वाच्यं न च मां योऽभ्यसूयति॥१८.६७॥

ಇದಂ ತೇ ನಾತಪಸ್ಕಾಯ ನಾಭಕ್ತಾಯ ಕದಾಚನ ।      

ನ ಚಾಶುಶ್ರೂಷವೇ ವಾಚ್ಯಂ ನ ಚ ಮಾಂ ಯೋಽಭ್ಯಸೂಯತಿ ॥ 18-67॥

Arjuna,

This Shastra which I have imparted to you,

this Geeta Sastra,

you should not convey,

at any tine, to anyone,

who is not an ascetic,

who is not a devotee,

who has no inclination to learn it

and who is abusive and hostile towards Me.

ಅರ್ಜುನಾ! ನಾನು ನಿನಗೆ ಬೋಧಿಸಿದ ಈ ಗೀತಾಶಾಸ್ತ್ರವನ್ನು, ಈ ನನ್ನ ಉಪದೇಶವನ್ನು ತಪಸ್ಸು ಮಾಡದವನಿಗೆ, ಭಕ್ತಿಭಾವವಿಲ್ಲದವನಿಗೆ, ಕೇಳಲು ಇಚ್ಛೆ ಇಲ್ಲದವನಿಗೆ, ನನ್ನಲ್ಲಿ ಅಸೂಯೆ ಇರುವವನಿಗೆ ಮತ್ತು ನನ್ನನ್ನು ತೆಗಳುವವನಿಗೆ ಯಾವುದೇ ಕಾಲಕ್ಕೂ ಹೇಳಕೂಡದು.

य इदं परमं गुह्यं

मद्भक्तेष्वभिधास्यति।

भक्तिं मयि परां कृत्वा

मामेवैष्यत्यसंशयः॥१८.६८॥ 

ಯ ಇದಂ ಪರಮಂ ಗುಹ್ಯಂ 

ಮದ್ಭಕ್ತೇಷ್ವಭಿಧಾಸ್ಯತಿ ।

ಭಕ್ತಿಂ ಮಯಿ ಪರಾಂ ಕೃತ್ವಾ 

ಮಾಮೇವೈಷ್ಯತ್ಯಸಂಶಯಃ ॥ 18-68॥

य इदं परमं गुह्यं मद्भक्तेष्वभिधास्यति।

भक्तिं मयि परां कृत्वा मामेवैष्यत्यसंशयः॥१८.६८॥ 

ಯ ಇದಂ ಪರಮಂ ಗುಹ್ಯಂ ಮದ್ಭಕ್ತೇಷ್ವಭಿಧಾಸ್ಯತಿ ।

ಭಕ್ತಿಂ ಮಯಿ ಪರಾಂ ಕೃತ್ವಾ ಮಾಮೇವೈಷ್ಯತ್ಯಸಂಶಯಃ ॥ 18-68॥

Arjuna,

He who, in the spirit of utmost devotion to Me,

communicates this Secret Geeta Shastra

to any Devotee

will surely reach Me alone.

ಅರ್ಜುನಾ! ನನ್ನಲ್ಲಿ ಅನನ್ಯ ಭಕ್ತಿಯುಳ್ಳ ಯಾರು, ಪರಮಗೋಪ್ಯವಾದ ಈ ಗೀತಾಜ್ಞಾನವನ್ನು, ನನ್ನ ಯಾವುದೇ ಭಕ್ತರಿಗೆ ಹೇಳುತ್ತಾನೆಯೋ ಅವನು ನಿಸ್ಸಂದೇಹವಾಗಿ ನನ್ನನ್ನೇ ಹೊಂದುತ್ತಾನೆ.

न च तस्मान्मनुष्येषु

कश्चिन्मे प्रियकृत्तमः।

भविता न च मे तस्मात्   

अन्यः प्रियतरो भुवि॥१८.६९॥

ನ ಚ ತಸ್ಮಾನ್ಮನುಷ್ಯೇಷು 

ಕಶ್ಚಿನ್ಮೇ ಪ್ರಿಯಕೃತ್ತಮಃ ।

ಭವಿತಾ ನ ಚ ಮೇ ತಸ್ಮಾತ್

ಅನ್ಯಃ ಪ್ರಿಯತರೋ ಭುವಿ ॥ 18-69॥

न च तस्मान्मनुष्येषु कश्चिन्मे प्रियकृत्तमः।

भविता न च मे तस्मात् अन्यः प्रियतरो भुवि॥१८.६९॥

 ನ ಚ ತಸ್ಮಾನ್ಮನುಷ್ಯೇಷು ಕಶ್ಚಿನ್ಮೇ ಪ್ರಿಯಕೃತ್ತಮಃ ।

ಭವಿತಾ ನ ಚ ಮೇ ತಸ್ಮಾತ್ ಅನ್ಯಃ ಪ್ರಿಯತರೋ ಭುವಿ ॥ 18-69॥

Arjuna,

there is no one dearer to Me

in this world

than the one who transmits

this Geeta Shastra,

nor, in the future,

will there be another person

like him,

dearer to Me.

ಅರ್ಜುನಾ! ಮಾನವರಲ್ಲಿ ಈ ಗೀತಾಶಾಸ್ತ್ರವನ್ನು ಪ್ರಚುರಪಡಿಸುವ ಅವನಿಗಿಂತಲೂ ನನಗೆ ಪ್ರಿಯವಾದುದನ್ನು ಉಂಟುಮಾಡುವವನು ಬೇರೆ ಯಾರೂ ಇಲ್ಲ. ಇರಲಾರರು. ಭೂ ಲೋಕದಲ್ಲಿ ನನಗೆ ಆತನಿಗಿಂತ ಪ್ರಿಯನಾದವನು ಬೇರೆ ಯಾರೂ ಮುಂದೆಯೂ ಹುಟ್ಟಲಾರರು.

अध्येष्यते च य इमं

धर्म्यं संवादमावयोः।

ज्ञानयज्ञेन तेनाहं  

इष्टः श्यामिति मे मतिः॥१८.७०॥ 

ಅಧ್ಯೇಷ್ಯತೇ ಚ ಯ ಇಮಂ 

ಧರ್ಮ್ಯಂ ಸಂವಾದಮಾವಯೋಃ ।

ಜ್ಞಾನಯಜ್ಞೇನ ತೇನಾಹಂ

ಇಷ್ಟಃ ಸ್ಯಾಮಿತಿ ಮೇ ಮತಿಃ ॥ 18-70॥

अध्येष्यते च य इमं धर्म्यं संवादमावयोः।

ज्ञानयज्ञेन तेनाहं इष्टः श्यामिति मे मतिः॥१८.७०॥ 

ಅಧ್ಯೇಷ್ಯತೇ ಚ ಯ ಇಮಂ ಧರ್ಮ್ಯಂ ಸಂವಾದಮಾವಯೋಃ ।

ಜ್ಞಾನಯಜ್ಞೇನ ತೇನಾಹಂ ಇಷ್ಟಃ ಸ್ಯಾಮಿತಿ ಮೇ ಮತಿಃ ॥ 18-70॥

Arjuna,

Whoever studies and understands

this Dharmic conversation

between  you and Me

will be considered to have offered Me

Gnana Yagna –

This is My View.

ಅರ್ಜುನಾ, ನನ್ನ ಮತ್ತು ನಿನ್ನ ನಡುವೆ ನಡೆದ ಈ ಧಾರ್ಮಿಕ ಸಂವಾದವನ್ನು ಯಾರು ಅಧ್ಯಯನ ಮಾಡುತ್ತಾರೆಯೋ ಮತ್ತು ಅದನ್ನು ಅರ್ಥ ಮಾಡಿಕೊಳ್ಳುತ್ತಾರೆಯೋ ಅವರು ನನಗಾಗಿ ಜ್ಞಾನಯಜ್ಞವನ್ನು ಮಾಡಿದಂತಾಗುತ್ತದೆ ಎಂಬುದು ನನ್ನ ಅಭಿಪ್ರಾಯ.

श्रद्धावाननसूयश्च

शृणुयादपि यो नरः।

सोऽपि मुक्तः शुभांल्लोकान्

प्राप्नुयात्पुण्यकर्मणाम्॥१८.७१॥

ಶ್ರದ್ಧಾವಾನನಸೂಯಶ್ಚ 

ಶೃಣುಯಾದಪಿ ಯೋ ನರಃ ।

ಸೋಽಪಿ ಮುಕ್ತಃ ಶುಭಾಲ್ಲೋಕಾನ್

ಪ್ರಾಪ್ನುಯಾತ್ಪುಣ್ಯಕರ್ಮಣಾಮ್ ॥ 18-71॥

श्रद्धावाननसूयश्च शृणुयादपि यो नरः।

सोऽपि मुक्तः शुभांल्लोकान् प्राप्नुयात्पुण्यकर्मणाम्॥१८.७१॥

ಶ್ರದ್ಧಾವಾನನಸೂಯಶ್ಚ ಶೃಣುಯಾದಪಿ ಯೋ ನರಃ ।

ಸೋಽಪಿ ಮುಕ್ತಃ ಶುಭಾಲ್ಲೋಕಾನ್ ಪ್ರಾಪ್ನುಯಾತ್ಪುಣ್ಯಕರ್ಮಣಾಮ್ ॥ 18-71॥

With faith and without jealousy,

whoever listens to this Geeta Sastra,

as expounded by Me to you,

will get liberated from sin

and go to the Happy Lokas

reserved for those  who have done

Punya Karma,

Righteous Action.

ನನ್ನಿಂದ ನಿನಗೆ ವ್ಯಾಖ್ಯಾನಿಸಲಾದ ಈ ಗೀತಾಶಾಸ್ತ್ರವನ್ನು ಶ್ರದ್ಧೆಯಿಂದ, ಅಸೂಯಾರಹಿತನಾಗಿ ಯಾರು ಕೇಳುತ್ತಾರೆಯೋ ಅವರು ಪಾಪದಿಂದ ಮುಕ್ತರಾಗಿ, ಪುಣ್ಯ ಕರ್ಮಗಳನ್ನು ಮಾಡಿದವರಿಗೆ ಮೀಸಲಾದ ಶುಭಲೋಕಗಳನ್ನು ಸೇರುತ್ತಾರೆ.

कच्चिदेतच्छ्रुतं पार्थ

त्वयैकाग्रेण चेतसा।

कच्चिदज्ञानसम्मोहः

प्रणष्टस्ते धनञ्जय॥१८.७२॥

ಕಚ್ಚಿದೇತಚ್ಛ್ರುತಂ ಪಾರ್ಥ 

ತ್ವಯೈಕಾಗ್ರೇಣ ಚೇತಸಾ ।

ಕಚ್ಚಿದಜ್ಞಾನಸಮ್ಮೋಹಃ 

ಪ್ರನಷ್ಟಸ್ತೇ ಧನಂಜಯ ॥ 18-72॥

कच्चिदेतच्छ्रुतं पार्थ त्वयैकाग्रेण चेतसा।

कच्चिदज्ञानसम्मोहः प्रणष्टस्ते धनञ्जय॥१८.७२॥

ಕಚ್ಚಿದೇತಚ್ಛ್ರುತಂ ಪಾರ್ಥ ತ್ವಯೈಕಾಗ್ರೇಣ ಚೇತಸಾ ।

ಕಚ್ಚಿದಜ್ಞಾನಸಮ್ಮೋಹಃ ಪ್ರನಷ್ಟಸ್ತೇ ಧನಂಜಯ ॥ 18-72॥

Krishna wants to know if his teaching

has had the desired effect

on his Disciple.

 Arjuna

You have listened to Me

with concentrated mind, haven’t you?

 Has your delusion caused by ignorance

been dispelled?

ತನ್ನ ಉಪದೇಶದಿಂದ ತನ್ನ ಶಿಷ್ಯನ ಮೇಲೆ ಉಂಟಾದ ಅಪೇಕ್ಷಣೀಯವಾದ ಪರಿಣಾಮವನ್ನು ತಿಳಿದುಕೊಳ್ಳಲು ಬಯಸುತ್ತಾನೆ ಶ್ರೀಕೃಷ್ಣ.

ಪಾರ್ಥಾ! ನನ್ನ ಉಪದೇಶವನ್ನು ಏಕಾಗ್ರಚಿತ್ತದಿಂದ ಕೇಳಿದೆಯಲ್ಲವೇ!

ಹೇ ಧನಂಜಯ! ಅಜ್ಞಾನದಿಂದ ಉಂಟಾದ ನಿನ್ನ ಮೋಹವು ನಾಶವಾಯಿತೇ?

अर्जुन उवाच

नष्टो मोहः स्मृतिर्लब्धा

त्वत्प्रसादान्मयाच्युत।

स्थितोस्मि गतसन्देहः

करिष्ये वचनं तव॥१८.७३॥ 

ಅರ್ಜುನ ಉವಾಚ ।

ನಷ್ಟೋ ಮೋಹಃ ಸ್ಮೃತಿರ್ಲಬ್ಧಾ 

ತ್ವತ್ಪ್ರಸಾದಾನ್ಮಯಾಚ್ಯುತ ।

ಸ್ಥಿತೋಽಸ್ಮಿ ಗತಸಂದೇಹಃ 

ಕರಿಷ್ಯೇ ವಚನಂ ತವ ॥ 18-73॥

नष्टो मोहः स्मृतिर्लब्धा त्वत्प्रसादान्मयाच्युत।

स्थितोस्मि गतसन्देहः करिष्ये वचनं तव॥१८.७३॥ 

ನಷ್ಟೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ಪ್ರಸಾದಾನ್ಮಯಾಚ್ಯುತ ।

ಸ್ಥಿತೋಽಸ್ಮಿ ಗತಸಂದೇಹಃ ಕರಿಷ್ಯೇ ವಚನಂ ತವ ॥ 18-73॥

 Arjuna said,

Krishna, gone is my delusion as well as my ignorance.

I have regained memory of Truth.

Due to Your Grace, all my doubts stand dispelled

and I shall do your bidding.

ಅರ್ಜುನ ಹೇಳಿದನು:- ಹೇ ಅಚ್ಯುತ! ನಿನ್ನ ಅನುಗ್ರಹದಿಂದ ನನ್ನ ಮೋಹವು ತೊಲಗಿತು. ಅಜ್ಞಾನವು ನಾಶವಾಯಿತು. ನನಗೆ ಸತ್ಯದ ಸ್ಮೃತಿಯು ಮರಳಿ ಬಂದಿತು. ನನ್ನ ಸಂಶಯಗಳೆಲ್ಲವೂ ನಿವಾರಣೆ ಆಯಿತು. ಇನ್ನು ನಿನ್ನ ಆಜ್ಞೆಯನ್ನು ಪಾಲನೆ ಮಾಡುವೆನು. ನೀನು ಹೇಳಿದ ಪ್ರಕಾರ ನಡೆಯಲು ಸಿದ್ಧನಾಗಿದ್ದೇನೆ.

सञ्जय उवाच–

इत्यहं वासुदेवस्य

पार्थस्य च महात्मनः।

संवादमिममश्रौषम्

अद्भुतं रोमहर्षणम्॥१८.७४॥

ಸಂಜಯ ಉವಾಚ ।

ಇತ್ಯಹಂ ವಾಸುದೇವಸ್ಯ 

ಪಾರ್ಥಸ್ಯ ಚ ಮಹಾತ್ಮನಃ ।

ಸಂವಾದಮಿಮಮಶ್ರೌಷಮ್

ಅದ್ಭುತಂ ರೋಮಹರ್ಷಣಮ್ ॥ 18-74॥

इत्यहं वासुदेवस्य पार्थस्य च महात्मनः।

संवादमिममश्रौषम् अद्भुतं रोमहर्षणम्॥१८.७४॥

ಇತ್ಯಹಂ ವಾಸುದೇವಸ್ಯ ಪಾರ್ಥಸ್ಯ ಚ ಮಹಾತ್ಮನಃ ।

ಸಂವಾದಮಿಮಮಶ್ರೌಷಮ್ ಅದ್ಭುತಂ ರೋಮಹರ್ಷಣಮ್ ॥ 18-74॥

Sanjaya said to Dhrutarashtra:

O King,

I have thus listened to the conversation

between the Great Vasudeva and Arjuna,

which has been marvellous and thrilling,

causing my hair to stand on end!

ಸಂಜಯನು ಧೃತರಾಷ್ಟ್ರನಿಗೆ ಹೇಳಿದನು:

ಹೇ ಮಹಾರಾಜನೇ! ಈ ರೀತಿಯಲ್ಲಿ ಮಹಾನುಭಾವನಾದ ವಾಸುದೇವ ಮತ್ತು ಅರ್ಜುನರ ನಡುವೆ ನಡೆದ ಸಂವಾದವನ್ನು ನಾನು ಕೇಳಿದೆನು. ಈ ಸಂವಾದವು ಎಷ್ಟು ಅದ್ಭುತವೂ ಹಾಗೂ ಆಶ್ಚರ್ಯಕರವೂ ಆಗಿತ್ತೆಂದರೆ ನನ್ನ ಮೈಮೇಲಿನ ರೋಮಗಳು ಎದ್ದು ನಿಂತವು.

व्यासप्रसादाच्छृत्तवान् 

एतद्गुह्यमहं परम्।

योगं योगेश्वरात्कृष्णात्

साक्षात्कथयतः स्वयम्॥१८.७५॥ 

ವ್ಯಾಸಪ್ರಸಾದಾಚ್ಛ್ರುತವಾನ್

ಏತದ್ಗುಹ್ಯಮಹಂ ಪರಮ್ ।

ಯೋಗಂ ಯೋಗೇಶ್ವರಾತ್ಕೃಷ್ಣಾತ್

ಸಾಕ್ಷಾತ್ಕಥಯತಃ ಸ್ವಯಮ್ ॥ 18-75॥

व्यासप्रसादाच्छृत्तवान्  एतद्गुह्यमहं परम्।

योगं योगेश्वरात्कृष्णात् साक्षात्कथयतः स्वयम्॥१८.७५॥ 

ವ್ಯಾಸಪ್ರಸಾದಾಚ್ಛ್ರುತವಾನ್ ಏತದ್ಗುಹ್ಯಮಹಂ ಪರಮ್ ।

ಯೋಗಂ ಯೋಗೇಶ್ವರಾತ್ಕೃಷ್ಣಾತ್ ಸಾಕ್ಷಾತ್ಕಥಯತಃ ಸ್ವಯಮ್ ॥ 18-75॥

 It is due to the Grace and Goodwill

of Sage Vyasa that I have directly heard

from Lord Krishna, the Master of Yoga,

as He explained to Arjuna

this most profound, secret and supreme Yoga.

ಯೋಗೇಶ್ವರನಾದ ಶ್ರೀಕೃಷ್ಣನು ಅರ್ಜುನನಿಗೆ ಬೋಧಿಸಿದ ಪರಮ ರಹಸ್ಯವಾದ ಈ ಯೋಗಶಾಸ್ತ್ರವನ್ನು ಸಾಕ್ಷಾತ್ತಾಗಿ ತಾನೇ ಹೇಳುತ್ತಿದ್ದುದನ್ನು ವ್ಯಾಸಮುನಿಗಳ ದಯೆಯಿಂದ ನೇರವಾಗಿ ನಾನೇ ಕೇಳಿದೆನು.

राजन् संस्मृत्य संस्मृत्य

संवादमिममद्भुतम्।

केशवार्जुनयोःपुण्यं

हृष्यमि च मुहुर्मुहुः॥१८.७६॥

ರಾಜನ್ಸಂಸ್ಮೃತ್ಯ ಸಂಸ್ಮೃತ್ಯ 

ಸಂವಾದಮಿಮಮದ್ಭುತಮ್ ।

ಕೇಶವಾರ್ಜುನಯೋಃ ಪುಣ್ಯಂ 

ಹೃಷ್ಯಾಮಿ ಚ ಮುಹುರ್ಮುಹುಃ ॥ 18-76॥

राजन् संस्मृत्य संस्मृत्य संवादमिममद्भुतम्।

केशवार्जुनयोःपुण्यं हृष्यमि च मुहुर्मुहुः॥१८.७६॥

ರಾಜನ್ಸಂಸ್ಮೃತ್ಯ ಸಂಸ್ಮೃತ್ಯ ಸಂವಾದಮಿಮಮದ್ಭುತಮ್ ।

ಕೇಶವಾರ್ಜುನಯೋಃ ಪುಣ್ಯಂ ಹೃಷ್ಯಾಮಿ ಚ ಮುಹುರ್ಮುಹುಃ ॥ 18-76॥

O King,

As I recollect again and again

this holy and marvelous Dialogue

between Krishna and Arjuna,

I start rejoicing again and again .

ಮಹಾರಾಜನೇ! ಕೃಷ್ಣಾರ್ಜುನರ ನಡುವಣ ಅದ್ಭುತವೂ, ಪವಿತ್ರವೂ ಆದ ಸಂಭಾಷಣೆಯನ್ನು ಪುನಃ ಪುನಃ ನೆನೆದು ನಾನು ಮತ್ತೆ ಮತ್ತೆ ಹರ್ಷಿತನಾಗುತ್ತಿದ್ದೇನೆ.

तच्च संस्मृत्य संस्मृत्य

रूपमत्यद्भुतं हरेः।

विस्मयो मे महान् राजन्

हृष्यामि च पुनःपुनः॥१८.७७॥

ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ 

ರೂಪಮತ್ಯದ್ಭುತಂ ಹರೇಃ ।

ವಿಸ್ಮಯೋ ಮೇ ಮಹಾನ್ ರಾಜನ್

ಹೃಷ್ಯಾಮಿ ಚ ಪುನಃ ಪುನಃ ॥ 18-77॥

तच्च संस्मृत्य संस्मृत्य रूपमत्यद्भुतं हरेः।

विस्मयो मे महान् राजन् हृष्यामि च पुनःपुनः॥१८.७७॥ 

ತಚ್ಚ ಸಂಸ್ಮೃತ್ಯ ಸಂಸ್ಮೃತ್ಯ ರೂಪಮತ್ಯದ್ಭುತಂ ಹರೇಃ ।

ವಿಸ್ಮಯೋ ಮೇ ಮಹಾನ್ ರಾಜನ್ ಹೃಷ್ಯಾಮಿ ಚ ಪುನಃ ಪುನಃ ॥ 18-77॥

O King,

As I recollect again and again

that Marvellous Form of Krishna,

the Cosmic Form,

I am filled with amazement.

I begin to rejoice again and again.

ಮಹಾರಾಜನೇ! ಅತ್ಯದ್ಭುತವಾದ ಶ್ರೀಕೃಷ್ಣನ ವಿಶ್ವರೂಪವನ್ನು ನೆನೆದು ನೆನೆದು ನನಗೆ ವಿಸ್ಮಯವಾಗುತ್ತಿದೆ. ನಾನು ಪುನಃ ಪುನಃ ಅನಂದ ಪರವಶನಾಗುತ್ತಿದ್ದೇನೆ. 

यत्र योगेश्वरः कृष्णो

यत्र पार्थो धनुर्धरः।  

तत्र श्रीर्विजयो भूति:

ध्रुवा नीतिर्मतिर्मम॥१८.७८॥

ಯತ್ರ ಯೋಗೇಶ್ವರಃ ಕೃಷ್ಣೋ 

ಯತ್ರ ಪಾರ್ಥೋ ಧನುರ್ಧರಃ ।

ತತ್ರ ಶ್ರೀರ್ವಿಜಯೋ ಭೂತಿಃ

ಧೃವಾ ನೀತಿರ್ಮತಿರ್ಮಮ ॥ 18-78॥

यत्र योगेश्वरः कृष्णो यत्र पार्थो धनुर्धरः।  

तत्र श्रीर्विजयो भूति: ध्रुवा नीतिर्मतिर्मम॥१८.७८॥

ಯತ್ರ ಯೋಗೇಶ್ವರಃ ಕೃಷ್ಣೋ ಯತ್ರ ಪಾರ್ಥೋ ಧನುರ್ಧರಃ ।

ತತ್ರ ಶ್ರೀರ್ವಿಜಯೋ ಭೂತಿಃ ಧೃವಾ ನೀತಿರ್ಮತಿರ್ಮಮ ॥ 18-78॥

 O King,.

This is my firm conclusion that

where, on which side, Krishna, the Yogeswara,

is, along with the Bow-Bearing Arjuna,

there Glory, Victory, Prosperity,

and Stable Order will surely accompany them.

 ಯೋಗೇಶ್ವರನಾದ ಶ್ರೀ ಕೃಷ್ಣನು ಎಲ್ಲಿ ಇರುವನೋ ಮತ್ತು ಎಲ್ಲಿ ಧನುರ್ಧಾರಿಯಾದ ಅರ್ಜುನನಿರುವನೋ, ಅಲ್ಲಿಯೇ ಕೀರ್ತಿ, ವಿಜಯ, ಐಶ್ವರ್ಯ, ಲಕ್ಷ್ಮಿ, ಸ್ಥಿರನೀತಿ ಇವುಗಳು ನಿಶ್ಚಯವಾಗಿ ನೆಲೆಸಿರುವವು ಎಂಬುದು ನನ್ನ ಅಚಲ ಅಭಿಪ್ರಾಯ.

   ಓಂ ತತ್ ಸತ್ 

ಇಲ್ಲಿಗೆ ಉಪನಿಷತ್ತೂ, ಬ್ರಹ್ಮವಿದ್ಯೆಯೂ, ಯೋಗಶಾಶ್ತ್ರವೂ, ಶ್ರೀ ಕೃಷ್ಣಾರ್ಜುನ ಸಂವಾದವೂ ಆದ ಶ್ರೀಮದ್ಭಗವದ್ಗೀತೆಯಲ್ಲಿ  ಮೋಕ್ಷಸಂನ್ಯಾಸಯೋಗವೆಂಬ ಹೆಸರಿನ ಹದಿನೆಂಟನೆಯ ಅಧ್ಯಾಯವು ಮುಗಿದುದು.

ಶ್ರೀ ಕೃಷ್ಣಾರ್ಪಣಮಸ್ತು

    ऒम् तत्सदिति       ಓಂ ತತ್ಸದಿತಿ

श्रीमहाभारतॆ                ಶ್ರೀ ಮಹಾಭಾರತೇ

भीष्मपर्वणी                 ಭೀಷ್ಮಪರ್ವಣೀ

श्रीमद्भगवद्गीतासु    ಶ್ರೀಮದ್ಭಗವದ್ಗೀತಾಸು

उपनिषत्सु           ಉಪನಿಷತ್ಸು

ब्रह्मविद्यायां        ಬ್ರಹ್ಮವಿದ್ಯಾಯಾಂ

यॊगशास्त्रे           ಯೋಗಶಾಸ್ತ್ರೇ

श्री कृष्णार्जुन संवादॆ   ಶ್ರೀಕೃಷ್ಣಾರ್ಜುನಸಂವಾದೇ

मॊक्षसन्यासयॊगॊनाम       ಮೋಕ್ಷಸಂನ್ಯಾಸಯೋಗೋ ನಾಮ 

अष्टादशोऽध्यायः              ಅಷ್ಟಾದಶೋಽಧ್ಯಾಯಃ 

श्री क्रूष्णार्पणमस्तु             ಶ್ರೀ ಕೃಷ್ಣಾರ್ಪಣಮಸ್ತು

                              ————–

 Om Saha Nau-Avatu | Saha Nau Bhunaktu |

Saha Viiryam Karavaavahai | Tejasvi Nau-Adhiitam-Astu Maa Vidvissaavahai |

Om Shaantih Shaantih Shaantih ||

ॐ सह नाववतु । सह नौ भुनक्तु ।

सह वीर्यं करवावहै । तेजस्वि नावधीतमस्तु मा विद्विषावहै ।

ॐ शान्तिः शान्तिः शान्तिः ॥

Aum! 

May we (both) be protected; may we (both) be nourished;

May we work together with great energy, May our knowledge be radiant;

May there be no differences or disputes between us.

Om, peace, peace, peace.

ಓಂ ಸಹ ನಾವವತು ಸಹ ನೌ ಭುನಕ್ತು

ಸಹ ವೀರ್ಯಂ ಕರವಾವಹೈ ತೇಜಸ್ವಿನಾವಧೀತಮಸ್ತು ಮಾ ವಿದ್ವಿಷಾವಹೈ 

ಓಂ ಶಾಂತಿಃ ಶಾಂತಿಃ ಶಾಂತಿಃ 

ಓಂ; ನಮ್ಮಿಬ್ಬರನ್ನೂ ರಕ್ಷಣೆ ಮಾಡು; ನಮ್ಮಿಬ್ಬರನ್ನೂ ಪೋಷಿಸು;

ನಾವು ಮಹತ್ತರ ವೀರ್ಯದಿಂದ ಒಟ್ಟಿಗೆ ಕೆಲಸ ಮಾಡುವಂತೆ ಮಾಡು; ನಮ್ಮ ಜ್ಞಾನವು ಪಸರಿಸುವಂತೆ ಮಾಡು;  ನಮ್ಮಿಬ್ಬರ ನಡುವೆ ಯಾವುದೇ ಭೇದವಾಗಲೀ, ವಿವಾದವಾಗಲಿ ಇಲ್ಲದಂತೆ ಮಾಡು; ಓಂ ಶಾಂತಿಃ ಶಾಂತಿಃ ಶಾಂತಿಃ 

Primary Sidebar

A SLOKA A DAY VISHNUSAHASRANAMA VIDEOS

Please select the video by clicking the Playlist.

SAADHANA MAARGA VIDEOS

SRIMAD BHAGAVAD GITA A SLOKA A DY

A SHUBHASHITA A DAY

Article of the Month

  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು -27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21

Recent Articles

  • May 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 40
  • April 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 39
  • March 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 38
  • February 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 37
  • January 2025  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 36
  • December 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 35
  • November 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 34
  • October 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 33
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24
  • December 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 23
  • November 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 22
  • October 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 21
  • September 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 20
  • August 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 19
  • July 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 18
  • June 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 17
  • May 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 16
  • April 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 15
  • March 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 14
  • February 2023 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 13
  • January 2023 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 12
  • December 2022 ದಿ.ಲಂಕಾಕೃಷ್ಣಮೂರ್ತಿಯವರಲೇಖನಗಳು – 11
  • November 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 10
  • October 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 9
  • September 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 8
  • August 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 7
  • July 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 6
  • June 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 5
  • May 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 4
  • April 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 3
  • March 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 2
  • February 2022 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 1
  • ದಿII ಲಂಕಾ ಕೃಷ್ಣಮೂರ್ತಿಯವರ ಸಂಸ್ಮರಣ ಲೇಖನಗಳು
  • All Articles Of ಶ್ರೀಮದ್ಭಾಗವತ ಮಹಾತ್ಮ್ಯ – Written by Late Lanka Krishna Murti
  • All Articles Of Gayatri- ಗಾಯತ್ರಿ – Written by Late Lanka Krisna Murti
  • All Articles Of Dharmada Bijaksharagalu-ಧರ್ಮದ ಬೀಜಾಕ್ಷರಗಳು- Written by Late Lanka Krisna Murti
  • ನನ್ನ ಪ್ರೀತಿಯ ತಂದೆಯ ನೆನಪು
  • A Sloka A Day
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • September 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 32
  • August 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 31
  • July 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 30
  • June 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 29
  • May 2024  ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 28
  • April 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 27
  • March 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 26
  • February 2024 ದಿ.ಲಂಕಾ ಕೃಷ್ಣಮೂರ್ತಿಯವರ ಲೇಖನಗಳು – 25
  • January 2024 ದಿ.ಲಂಕಾಕೃಷ್ಣಮೂರ್ತಿಯವರ ಲೇಖನಗಳು – 24

Copyright © 2025 · Lanka Krishna Murti Foundation